ಮಂಗಳವಾರ, ಜೂನ್ 17, 2025
HomekarnatakaArchana Gautham : ಹಸ್ತಿನಾಪುರದಲ್ಲಿ ಠೇವಣಿ ಕಳೆದುಕೊಂಡ ಬಿಕನಿ ಸುಂದರಿ ಅರ್ಚನಾ ಗೌತಮ್

Archana Gautham : ಹಸ್ತಿನಾಪುರದಲ್ಲಿ ಠೇವಣಿ ಕಳೆದುಕೊಂಡ ಬಿಕನಿ ಸುಂದರಿ ಅರ್ಚನಾ ಗೌತಮ್

- Advertisement -

ಲಕ್ನೋ : ಉತ್ತರ ಪ್ರದೇಶದಲ್ಲಿ (Uttar Pradesh Election) ಹಮ್ ಲಡ್ ಶಕ್ತೇ ಹೈ ಎನ್ನುವ ಮೂಲಕ ಕಣಕ್ಕಿಳಿದು ಸದ್ದು ಮಾಡಿದ್ದ ಬಿಕನಿ ಗರ್ಲ್, ಮಾಡೆಲ್ ಅರ್ಚನಾ ಗೌತಮ್ ಹೀನಾಯ ಸೋಲು ಕಂಡಿದ್ದಾರೆ. ರ್ಯಾಂಪ್ ವಾಕ್ ಮಾಡುವ ಅರ್ಚನಾ ಗೌತಮ್ (Archana Gautham) ಕಣಕ್ಕಿಳಿಯುತ್ತಿದ್ದಂತೆ ಕಾಂಗ್ರೆಸ್ ನ ಬಿಕನಿ ಗರ್ಲ್ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದರು. ಸೌಂದರ್ಯ ಕ್ಕೆ ಹೆಸರಾದ ಅರ್ಚನಾ ಗೌತಮ್ ಕಾಂಗ್ರೆಸ್ ನಿಂದ ಟಿಕೇಟ್ ಪಡೆದು ಕಣಕ್ಕಿಳಿಯುತ್ತಿದ್ದಂತೆ ಅರ್ಚನಾ ಅವರ ಹಾಟ್ ಹಾಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.

Uttar Pradesh Election Archana Gautham Defeat Hastinapur

ನಟಿ ಹಾಗೂ ಮಾಡೆಲ್ ಅರ್ಚನಾ ಗೌತಮ್, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮೀರತ್ ನ ಹಸ್ತಿನಾಪುರ (Hastinapur ) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅರ್ಚನಾ ಎದುರು ಬಿಜೆಪಿಯ ಅಭ್ಯರ್ಥಿಯಾಗಿ ದಿನೇಶ್ ಕಟಿಕ್ ಕಣಕ್ಕಿಳಿದಿದ್ದರು. ಈ ನೇರ ಹಣಾಹಣಿ ಎಂದು ಬಣ್ಣಿಸಲಾದ ಚುನಾವಣೆಯಲ್ಲಿ ಅರ್ಚನಾ ಠೇವಣಿ ಉಳಿಸಿ ಕೊಳ್ಳುವುದರಲ್ಲೂ ವಿಫಲವಾಗಿದ್ದು ಕೇವಲ 1133 ಮತಗಳನ್ನು ಮಾತ್ರ ಪಡೆದುಕೊಂಡಿದ್ದಾರೆ. ಇವರ ಎದುರಿನ ಬಿಜೆಪಿ ಅಭ್ಯರ್ಥಿ ದಿನೇಶ್ 81959 ಮತಗಳನ್ನು ಪಡೆದು ಕೊಂಡಿದ್ದಾರೆ.

ಅರ್ಚನಾ ಗೌತಮ್ ಕಣಕ್ಕಿಳಿದಾಗಿನಿಂದಲೂ ಮಿಸ್ ಬಿಕನಿ ಇಂಡಿಯಾ ಸ್ಪರ್ಧೆ ಗೆದ್ದ ಅರ್ಚನಾ ಎಂಬ ಹೆಸರಿನಿಂದ ಅವರನ್ನು ಟ್ರೋಲ್ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಅರ್ಚನಾ ಬಿಕನಿ ಪೋಟೋಗಳು ಸಖತ್ ವೈರಲ್ ಆಗಿದ್ದವು. ಈ ವಿಚಾರದ ಬಗ್ಗೆ ಹಲವು ಭಾರಿ ಮಾತನಾಡಿದ್ದ ನಟಿ ಹಾಗೂ ಮಾಡೆಲ್ ಅರ್ಚನಾ ಗೌತಮ್, ನಾನು ಮಿಸ್ ಬಿಕನಿ ಸ್ಪರ್ಧೆಯಲ್ಲಿ 2018 ರಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದಿದ್ದೇನೆ. 2014 ರಲ್ಲಿ ಮಿಸ್ ಉತ್ತರ ಪ್ರದೇಶ ಸ್ಪರ್ಧೆಯಲ್ಲಿ ಗೆದ್ದು ಕಿರೀಟ್ ಧರಿಸಿದ್ದೇನೆ.

ಅದು ನನ್ನ ವೃತ್ತಿ. ನನ್ನ ರಾಜಕೀಯ ಜೀವನವನ್ನು ವೃತ್ತಿ ಜೀವನ ದೊಂದಿಗೆ ಹೋಲಿಸಬೇಡಿ. ಆ ದೃಷ್ಟಿಯಲ್ಲಿ ನನ್ನ ರಾಜಕೀಯ ಜೀವನವನ್ನು ನೋಡಬೇಡಿ ಎಂದು ಮನವಿ ಮಾಡಿದ್ದರು. 2014 ರಲ್ಲಿ ಮಿಸ್ ಉತ್ತರ ಪ್ರದೇಶ ಪ್ರಶಸ್ತಿ ವಿಜೇತೆಯಾಗಿರುವ ಅರ್ಚನಾ 2015 ರಲ್ಲಿ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದಲ್ಲದೇ 2018 ರ ಮಿಸ್ ಕಾಸ್ರ್ಮೋಸ್ ವರ್ಲ್ಡ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದಿದ್ದರು. ಸೌಂದರ್ಯ, ಮಾಡೆಲಿಂಗ್ ಹಾಗೂ ಹಾಟ್ ಹಾಟ್ ಪೋಟೋಸ್ ಮೂಲಕ ಸದ್ದು ಮಾಡಿದ್ದ ಅರ್ಚನಾ ಇದೇ ಜೋಶ್ ನಲ್ಲಿ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಆದರೆ ಜನರು ಮಾತ್ರ ಹೀನಾಯವಾಗಿ ಸೋಲು ಉಣಿಸಿ ಕಳುಹಿಸಿದ್ದಾರೆ.

ಇದನ್ನೂ ಓದಿ : ಅನಾಥ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದ ಅರುಣಕುಮಾರ ಕಲ್ಗದ್ದೆ

ಇದನ್ನೂ ಓದಿ : UP Election : ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ : 2ನೇ ಬಾರಿಗೆ ಯೋಗಿ ಸರ್ಕಾರ

( Uttar Pradesh Election Archana Gautham Defeat Hastinapur )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular