ಕುಂದಾಪುರ : ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ ಚಾಲಕನಿಗೆ ಹಲ್ಲೆ

ಕುಂದಾಪುರ : ಕ್ಷುಲಕ ಕಾರಣಕ್ಕೆ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ ಲಾರಿ ಚಾಲಕನಿಗೆ ಕಾರಿನ ಚಾಲಕ ಹಲ್ಲೆ (Kundapur lorry driver assault) ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಳಾವರ ಸಮೀಪದ ಅಸೋಡಿನಲ್ಲಿ ನಡೆದಿದೆ.

ಮೊಹಮ್ಮದ್‌ ಇಸಾಕ್‌ ಎಂಬವರೇ ಹಲ್ಲೆಗೆ ಒಳಗಾದವರು. ತಲ್ಲೂರಿನಲ್ಲಿ ಇರುವ ಗೋದಾಮಿನಿಂದ ಅನ್ನಭಾಗ್ಯದ ಅಕ್ಕಿಯನ್ನು ತುಂಬಿಸಿಕೊಂಡು ನ್ಯಾಯ ಬೆಲೆ ಅಂಗಡಿಗಳಿಗೆ ಸಾಗಾಟ ಮಾಡುತ್ತಿದ್ದರು. ಲಾರಿ ಕೋಟೇಶ್ವರ ಹಾಗೂ ಹಾಲಾಡಿ ರಸ್ತೆಯ ನಂದಿಕೇಶ್ವರ ದೇವಸ್ಥಾನದ ಕಮಾನಿನ ಬಳಿಯಲ್ಲಿ ಹಿಂದಿನಿಂದ ಬಂದ ಕಾರು ಚಾಲಕ ಲಾರಿಯನ್ನು ಅಡ್ಡಗಟ್ಟಿ ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಾರು ಚಾಲಕ, ಲಾರಿ ಚಾಲಕನಿಗೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಲಾರಿ ಚಾಲಕ ಇಸಾಕ್‌ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ : ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕಾರ : ಉಕ್ರೇನ್‌ ಸೈನ್ಯ ಸೇರಿದ ತಮಿಳುನಾಡಿನ ಸಾಯಿನಿಕೇಶ್ ರವಿಚಂದ್ರನ್

ಇದನ್ನೂ ಓದಿ : ಬ್ರಹ್ಮಾವರದ ದೇವಸ್ಥಾನದಲ್ಲಿ ಕಳವಿಗೆ ಯತ್ನ, ಕಳ್ಳರು ಪರಾರಿ

Kundapur lorry driver assault for anna Bhagya rice transport

Comments are closed.