ಬೆಂಗಳೂರು : ಕಳೆದ ಹಲವು ತಿಂಗಳುಗಳಿಂದ ದೇಶ-ವಿದೇಶಗಳಲ್ಲಿ ಬೈಕ್ ರ್ಯಾಲಿ ನಡೆಸಿ 20ಕ್ಕೂ ಹೆಚ್ಚು ದೇಶಗಳಲ್ಲಿ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರು ಇಂದು (ಡಿಸೆಂಬರ್ 5) ವಿಶ್ವ ಮಣ್ಣು ದಿನಾಚರಣೆ (World soil day 2022) ಯಂದು ಮತ್ತೊಂದು ಬೈಕ್ ರ್ಯಾಲಿ ನಡೆಸುತ್ತಿದ್ದಾರೆ.
ಬೆಂಗಳೂರಿನ ಹೆಬ್ಬಾಳದಿಂದ ಹೊರಟು ವಿಠಲ್ ಮಲ್ಯ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ವರೆಗೆ ರ್ಯಾಲಿ ನಡೆಸಿ ಮಣ್ಣು ಉಳಿಸುವ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಸದ್ಗುರುಗಳ ರ್ಯಾಲಿಯ ಮಾರ್ಗದಲ್ಲಿ ನೂರಾರು ಜನರು ಮಣ್ಣು ಉಳಿಸಿ ಫಲಕಗಳನ್ನು ಹಿಡಿದುಕೊಂಡು ವಿಧಾನಸೌಧದ ಮುಂದೆ ಘೋಷಣೆಗಳನ್ನು ಕೂಗಿದರು.
ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ವಿಶ್ವ ಮಣ್ಣು ದಿನಾಚರಣೆಯ ನಿಮಿತ್ತ ಸದ್ಗುರು ಸುದ್ದಿಗೋಷ್ಠಿ ನಡೆಸಿ, ಮಾರ್ಚ್ 21ರಿಂದ 8 ತಿಂಗಳ ಕಾಲ ಈ ಅಭಿಯಾನ ನಡೆಯುತ್ತಿದ್ದು, 81 ದೇಶಗಳಲ್ಲಿ ಮಣ್ಣಿನ ಬಗ್ಗೆ ಬದಲಾವಣೆ ತರಲಾಗಿದೆ. ಜನವರಿಯಲ್ಲಿ ನಡೆದ ಜಾಗತಿಕ ಸಭೆಯಲ್ಲಿ ಹವಾಮಾನ ಸಮಸ್ಯೆಯನ್ನು ಚರ್ಚಿಸಲಾಗಿದೆ. ಆದರೆ ಮಣ್ಣಿನ ಬಗ್ಗೆ ಮಾತನಾಡಲಿಲ್ಲ.
ಈಗ ಪ್ರಪಂಚದಾದ್ಯಂತ ಮಣ್ಣಿನ ಮಹತ್ವದ ಬಗ್ಗೆ ಮಾತನಾಡಲಾಗುತ್ತಿದ್ದು, ಕೇಂದ್ರ ಸರಕಾರವು ಮಣ್ಣಿನ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿದೆ. ಪ್ರಸ್ತುತ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಮಣ್ಣು ಮುಖ್ಯ ಕಾರಣವಾಗಿದೆ. ಗುಣಮಟ್ಟದ ಆಹಾರವನ್ನು ಪಡೆಯುವುದು ಬಹಳ ಮುಖ್ಯ ಭಾರತದ ಮಣ್ಣು ಕೇವಲ 0.68% ಫಲವತ್ತಾಗಿದೆ. ಯುಕೆ ವಿಶ್ವದಲ್ಲೇ ಅತಿ ಹೆಚ್ಚು ಮಣ್ಣಿನ ಫಲವತ್ತತೆಯನ್ನು ಹೊಂದಿದೆ.
ಇದನ್ನೂ ಓದಿ : Hanuman Jayanti 2022: ಹನುಮ ಜಯಂತಿಯ ಮಹತ್ವ ಮತ್ತು ಪೂಜಾ ವಿಧಾನ
ಇದನ್ನೂ ಓದಿ : Prettiest Garden : ಉತ್ತರ ಭಾರತದ ಅತಿ ಸುಂದರ ಗಾರ್ಡನ್ಗಳು ನಿಮಗೆ ಗೊತ್ತಾ…
ಇದನ್ನೂ ಓದಿ : Rishab Shetty visits Anegudde: ಆನೆಗುಡ್ಡೆಗೆ ಭೇಟಿ ನೀಡಿದ ರಿಷಬ್ ಶೆಟ್ಟಿ ದಂಪತಿ: ವಿನಾಯಕನ ಸನ್ನಿಧಾನದಲ್ಲಿ ವಿಶೇಷ ಪೂಜೆ
ಇತ್ತೀಚಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣ ಎಂದು ಭಾವಿಸಲಾಗಿದೆ. ಆದರೆ ಉತ್ತಮ ಆಹಾರದ ಕೊರತೆಯೇ ಮಾನಸಿಕ ಕಾಯಿಲೆಗೆ ಕಾರಣ. ಇದನ್ನೇ ನಾವು ಕೋವಿಡ್ನಲ್ಲಿ ನೋಡಿದ್ದೇವೆ, ನಾವು ಕೋವಿಡ್ ಅನ್ನು ತಡೆಯಲು ಸಾಧ್ಯವಿಲ್ಲ, ನಾವು ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡಿದ್ದರೆ, ಕೋವಿಡ್ ಸಂದರ್ಭದಲ್ಲಿ ಎಷ್ಟು ಸಾವುಗಳನ್ನು ತಡೆಯಬಹುದಿತ್ತು. 2045ರ ಹೊತ್ತಿಗೆ ಆಹಾರ ಉತ್ಪಾದನೆ ಶೇ.40ರಷ್ಟು ಕಡಿಮೆಯಾಗುತ್ತದೆ. ಅದನ್ನು ಸರಿಪಡಿಸುವ ಜವಾಬ್ದಾರಿಯನ್ನು ಈಗಿನಿಂದಲೇ ಆರಂಭಿಸಬೇಕು. ನಾವೆಲ್ಲರೂ ಒಂದೇ ಎಂದು ಇಡೀ ವಿಶ್ವವೇ ಭಾವಿಸಬೇಕು ಎಂದು ಹೇಳಿದರು.
World soil day 2022: Sadhguru bike rally for awareness on importance of soil