ಭೂಪಾಲ: ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅಂತಾರೆ. ಆದರೆ ಇಲ್ಲಿ ಬಡವಾಗಿದ್ದು ರೈಲ್ವೇ ಇಲಾಖೆ ಅಧಿಕಾರಿಗಳು. ಮಗುವಿನ ಕಿಡ್ನಾಪ್ ಪ್ರಕರಣದ ಪತ್ತೆಗೆ ಪಣತೊಟ್ಟ ಪೊಲೀಸರು ಕೊನೆಗೆ ಮಗುವಿನ ಜೊತೆಗಿದ್ದವನನ್ನು ನೋಡಿ ಎಚ್ಚರತಪ್ಪಿ ಬೀಳೋದೊಂದು ಬಾಕಿ.

ಯಾವ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲದಂತ ಈ ಘಟನೆ ನಡೆದಿದ್ದು ಮಧ್ಯಪ್ರದೇಶದ ಲಲಿತಪುರ ರೈಲ್ವೇ ಸ್ಟೇಶನ್ ಬಳಿ. ರೈಲ್ವೇ ಸ್ಟೇಶನ್ ಬಳಿ ಒಂದು ಕುಟುಂಬ ವಾಸವಾಗಿತ್ತು. ಪತಿ-ಪತ್ನಿ ಮತ್ತುಮಗು ವಾಸವಾಗಿದ್ದ ಈ ಕುಟುಂಬದಲ್ಲಿ ಮೊನ್ನೆ ಮಗು ಕಾಣೆಯಾದ ಘಟನೆ ನಡೆದಿದ್ದು, ಮಗುವಿನ ತಾಯಿ ಅಳುತ್ತ ಪೊಲೀಸರಿಗೆ ಪೋನ್ ಮಾಡಿದ್ದರು.

ಮಗು ಕಳೆದುಕೊಂಡ ತಾಯಿಯಿಂದ ಮಾಹಿತಿ ಪಡೆದ ರೈಲ್ವೇ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಮಗುವನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಭೂಪಾಲ್ ಗೆ ತೆರಳುತ್ತಿದ್ದ ರಾಪ್ತಿ ಸಾಗರ್ ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲು ಎರಿದ್ದು ಕಂಡುಬಂದಿತ್ತು.

ಕಿಡ್ನಾಪರ್ ರೈಲು ಏರಿದ್ದನ್ನು ಕಂಡ ಪೊಲೀಸರು ರೈಲ್ವೇ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದರು. ಭೂಪಾಲ್ ಗೆ ತೆರಳುತ್ತಿದ್ದ ಈ ರೈಲ್ ನ್ನು ನಾನ್ ಸ್ಟಾಪ್ ಓಡಿಸಲು ಸೂಚಿಸಿದರು. ಒಂದೊಮ್ಮೆ ರೈಲ್ ನಿಲ್ಲಿಸಿದರೇ ಕಿಡ್ನಾಪರ್ ಮಗು ಜೊತೆ ಎಸ್ಕೇಪ್ ಆಗೋ ಸಾಧ್ಯತೆ ಇರೋದರಿಂದ ರೈಲು ಬರೋಬ್ಬರಿ 200 ಕಿಲೋಮೀಟರ್ ನಾನ್ ಸ್ಟಾಪ್ ಚಲಿಸಿ ಭೂಪಾಲ್ ಗೆ ಬಂದು ನಿಂತಿತು.

ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೇ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಎಲ್ಲ ಬೋಗಿಯನ್ನು ತಡಕಾಡಿದರು. ಅಷ್ಟೇ ಅಲ್ಲ ಮಗುವನ್ನು ರಕ್ಷಣೆ ಮಾಡಿದರು. ಆದರೇ ರಕ್ಷಿಸಲಾದ ಮಗುವಿನ ಜೊತೆಗಿದ್ದ ವ್ಯಕ್ತಿ ನೋಡಿ ಪೊಲೀಸರು ಕಂಗಾಲಾದರು. ಯಾಕೆಂದರೇ ಮಗುವಿನ ಜೊತೆಗಿದ್ದ ಅಪಹರಣಕಾರ ಮತ್ಯಾರು ಅಲ್ಲ ಮಗುವಿನ ತಂದೆ.

ಇಷ್ಟಕ್ಕೂ ಇದು ಅಪಹರಣವೇ ಆಗಿರಲಿಲ್ಲ. ಹಲವು ದಿನಗಳಿಂದ ಮಗುವಿನ ತಂದೆ ಮತ್ತು ತಾಯಿ ನಡುವೆ ಜಗಳ ನಡೆದಿತ್ತು. ಮೊನ್ನೆಯೂ ಹೆಂಡತಿ ಹೀಗೆ ಜಗಳವಾಡಿದ್ದಾಳೆ. ಇದನ್ನು ತಾಳಲಾರದ ಗಂಡ ನೀನು ಬೇಡ ನಿನ್ನ ಜಗಳವೂ ಬೇಡ ಎಂದು ಮಗುವನ್ನು ಕರೆದುಕೊಂಡು ಚಲಿಸುತ್ತಿದ್ದ ಟ್ರೇನ್ ಹತ್ತಿ ಬಂದುಬಿಟ್ಟಿದ್ದಾನೆ.

ಆದರೇ ಈ ಗುಟ್ಟನ್ನು ಪೊಲೀಸರ ಬಳಿ ಬಿಟ್ಟುಕೊಡದ ಪತ್ನಿ ಕೇವಲ ಅಪಹರಣದ ಕತೆಕಟ್ಟಿ ರೈಲ್ವೇ ಪೊಲೀಸರನ್ನು ಯಾಮಾರಿಸಿದ್ದಾಳೆ.
ಮಗು ರಕ್ಷಿಸಿದ ಪೊಲೀಸರಿಗೆ ಪತಿ ಈ ಎಲ್ಲ ಹೇಳಿದ ಬಳಿಕ ರೈಲ್ವೇ ಪೊಲೀಸರು ಪತಿ ಪತ್ನಿ ಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಇನ್ನೊಮ್ಮೆ ಹೀಗೆ ಮಿಸ್ ಗೈಡ್ ಮಾಡಿ ವ್ಯವಸ್ಥೆಯ ದುರುಪ ಯೋಗಕ್ಕೆ ಮುಂದಾದ್ರೇ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.