ಬುಧವಾರ, ಜೂನ್ 18, 2025
HomeSportsCricketKarnataka Team beat Rajasthan : ರಾಜಸ್ಥಾನವನ್ನು ಮೂರೇ ದಿನಗಳಲ್ಲಿ ಹೆಡಮುರಿ ಕಟ್ಟಿದ ಕನ್ನಡಿಗರು, ಹೊಸ...

Karnataka Team beat Rajasthan : ರಾಜಸ್ಥಾನವನ್ನು ಮೂರೇ ದಿನಗಳಲ್ಲಿ ಹೆಡಮುರಿ ಕಟ್ಟಿದ ಕನ್ನಡಿಗರು, ಹೊಸ ವರ್ಷ ಕರ್ನಾಟಕಕ್ಕೆ ಸತತ 2ನೇ ಜಯ

- Advertisement -

ಬೆಂಗಳೂರು: Karnataka Team beat Rajasthan : ಹೊಸ ವರ್ಷ ಕರ್ನಾಟಕ ತಂಡಕ್ಕೆ ಅದೃಷ್ಟದ ವರ್ಷ. ಈ ವರ್ಷ ಆಡಿದ ಎರಡೂ ರಣಜಿ ಪಂದ್ಯಗಳನ್ನು (Ranji Trophy 2022-23) ಕರ್ನಾಟಕ ಗೆದ್ದುಕೊಂಡಿದೆ. ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ KSCA ಮೈದಾನದಲ್ಲಿ ನಡೆದ ಎಲೈಟ್ ‘ಸಿ’ ಗುಂಪಿನ ತನ್ನ 5ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ, ರಾಜಸ್ಥಾನ ತಂಡವನ್ನು 10 ವಿಕೆಟ್’ಗಳಿಂದ ಬಗ್ಗು ಬಡಿಯಿತು. ಮೂರೇ ದಿನಗಳಲ್ಲಿ ಪಂದ್ಯ ಗೆದ್ದ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಒಂದು ಬೋನಸ್ ಅಂಕ ಸಹಿತ ಪಂದ್ಯದಲ್ಲಿ 7 ಪಾಯಿಂಟ್ ಗಳಿಸಿ ಒಟ್ಟಾರೆ ಅಂಕಗಳಿಕೆಯನ್ನು 26ಕ್ಕೆ ಏರಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿತು.

316 ರನ್’ಗಳ ಭಾರೀ ಹಿನ್ನಡೆಯೊಂದಿಗೆ ಮೂರನೇ ದಿನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ ತಂಡ 330 ರನ್’ಗಳಿಗೆ ಆಲೌಟಾಯಿತು. ರಾಜಸ್ಥಾನ ಪರ RCB ಆಟಗಾರ ಮಹಿಪಾಲ್ ಲೊಮ್ರೊರ್ 99 ರನ್ನಿಗೆ ಔಟಾಗಿ ಶತಕವಂಚಿತರಾದ್ರೆ, ಕರ್ನಾಟಕ ಪರ ಯುವ ಬಲಗೈ ಮಧ್ಯಮ ವೇಗಿ ವೈಶಾಖ್ ವಿಜಯ್ ಕುಮಾರ್ 73 ರನ್ನಿಗೆ 4 ವಿಕೆಟ್ ಹಾಗೂ ಆಫ್’ಸ್ಪಿನ್ನರ್ ಕೆ.ಗೌತಮ್ 72 ರನ್ನಿಗೆ 3 ವಿಕೆಟ್ ಕಬಳಿಸಿದರು. ನಂತರ 15 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕರ್ನಾಟಕ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಕರ್ನಾಟಕ ತಂಡ ಮನೀಶ್ ಪಾಂಡೆ ಅವರ ಅಮೋಘ ಶತಕದ ಬಲದಿಂದ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 445 ರನ್’ಗಳ ಬೃಹತ್ ಮೊತ್ತ ದಾಖಲಿಸಿತ್ತು. 2ನೇ ದಿನದಂತ್ಯಕ್ಕೆ ಅಜೇಯ 75 ರನ್ ಗಳಿಸಿದ್ದ ಪಾಂಡೆ, 3ನೇ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿದರು. ಇದು ರಣಜಿ ಟ್ರೋಫಿಯಲ್ಲಿ ಮನೀಶ್ ಪಾಂಡೆ ಗಳಿಸಿದ 20ನೇ ಶತಕ. ತಮ್ಮ ಶತಕದಾಟದ ವೇಳೆ ಮನೀಶ್ ಪಾಂಡೆ ರಣಜಿ ವೃತ್ತಿಜೀವನದಲ್ಲಿ 6 ಸಾವಿರ ರನ್ ಕಲೆ ಹಾಕಿದ ಸಾಧನೆ ಮಾಡಿದರು. ಈ ಮೈಲುಗಲ್ಲು ನೆಟ್ಟ ಕರ್ನಾಟಕದ 3ನೇ ಆಟಗಾರ ಮನೀಶ್ ಪಾಂಡೆ. ಇದಕ್ಕೂ ಮೊದಲು ದಿಗ್ಗಜರಾದ ಬ್ರಿಜೇಶ್ ಪಟೇಲ್ ಮತ್ತು ರಾಬಿನ್ ಉತ್ತಪ್ಪ ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ 6 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.

ಎಲೈಟ್ ‘ಸಿ’ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಹಾಗೂ 2 ಡ್ರಾ ಸಹಿತ 26 ಅಂಕ ಗಳಿಸಿರುವ ಕರ್ನಾಟಕ ತಂಡ, ಜನವರಿ 17ರಂದು ಕೇರಳದ ಥುಂಬಾದಲ್ಲಿ ಆರಂಭವಾಗಲಿರುವ ತನ್ನ 6ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಕೇರಳ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Virat Kohli vs Sachin Tendulkar : ದಿಗ್ಗಜರಲ್ಲಿ ಯಾರು ಗ್ರೇಟ್? “45 ಶತಕಗಳು ಸುಮ್ ಸುಮ್ನೆ ಬರಲ್ಲ”; ದಾದಾ ಬಿಗ್ ಸ್ಟೇಟ್ಮೆಂಟ್

ಇದನ್ನೂ ಓದಿ : ರಣಜಿ ಟ್ರೋಫಿ ಮನೀಶ್ ಪಾಂಡೆಗೆ ಡಬಲ್ ಧಮಾಕ, 20ನೇ ಶತಕ, 6 ಸಾವಿರ ರನ್ ಗಡಿ ದಾಟಿದ ಪಾಂಡೆ

Karnataka Team beat Rajasthan in just three days, 2nd win in a row for Karnataka in the new year Ranji trophy 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular