ಸೋಮವಾರ, ಏಪ್ರಿಲ್ 28, 2025
HomeSportsCricketExclusive: ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಕಹಿ ಸುದ್ದಿ, ರಾಜ್ಯ ತಂಡ ತೊರೆದ ಮತ್ತೊಬ್ಬ ಕ್ರಿಕೆಟಿಗ 

Exclusive: ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಕಹಿ ಸುದ್ದಿ, ರಾಜ್ಯ ತಂಡ ತೊರೆದ ಮತ್ತೊಬ್ಬ ಕ್ರಿಕೆಟಿಗ 

- Advertisement -

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದಿಂದ ಆಟಗಾರರ ವಲಸೆ ಮುಂದುವರಿದಿದೆ. ಕಳೆದ ವರ್ಷ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೆ.ವಿ ಸಿದ್ಧಾರ್ಥ್ ಕರ್ನಾಟಕ ತಂಡವನ್ನು ತೊರೆದು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಈ ಸಾಲಿಗೆ ಈಗ ಹೊಸ ಸೇರ್ಪಡೆ ಕರ್ನಾಟಕದ ಮತ್ತೊಬ್ಬ ರಣಜಿ ಹೀರೋ ರವಿಕುಮಾರ್ ಸಮರ್ಥ್ (R Samarth).

Exclusive Karnataka cricket Ravikumar Samarth quits the Karnataka state Cricket team
image Credit to Original source

ಮೈಸೂರು ಮೂಲದ ಬಲಗೈ ಬ್ಯಾಟ್ಸ್’ಮನ್ ಆರ್.ಸಮರ್ಥ್ ಕರ್ನಾಟಕ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದು, 2024-25ನೇ ಸಾಲಿನ ದೇಶೀಯ ಕ್ರಿಕೆಟ್’ನಲ್ಲಿ ಉತ್ತರಾಖಂಡ್ ತಂಡದ ಪರ ಆಡಲಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ (Karnataka State Cricket Association) ಈಗಾಗಲೇ ನಿರಪೇಕ್ಷಣಾ ಪತ್ರ ( No Objection Certificate – NOC) ಪಡೆದಿರುವ ಸಮರ್ಥ್, ಸದ್ಯದಲ್ಲೇ ಉತ್ತರಾಖಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

Exclusive Karnataka cricket Ravikumar Samarth quits the Karnataka state Cricket team
image Credit to Original source

ಇದನ್ನೂ ಓದಿ : T20 World Cup 2024 Super-8 : ಹೈ ಸ್ಕೋರಿಂಗ್ ಗ್ರೌಂಡ್‌ನಲ್ಲಿ ಭಾರತ Vs ಆಸ್ಟ್ರೇಲಿಯಾ ಸೂಪರ್-8 ಮ್ಯಾಚ್ !

2013-14ನೇ ಸಾಲಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ 31 ವರ್ಷದ ಸ್ಟೈಲಿಷ್ ಓಪನರ್ ಆರ್.ಸಮರ್ಥ್ 2013-14 ಹಾಗೂ 2024-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್’ಗಳನ್ನು ಗೆದ್ದ ಕರ್ನಾಟಕ ತಂಡದ ಸದಸ್ಯನಾಗಿದ್ದರು.

ಇದನ್ನೂ ಓದಿ : Smriti Mandhana: ಚಿನ್ನಸ್ವಾಮಿಯಲ್ಲಿ ಮನೆಮಗಳು ಸ್ಮೃತಿ ಮಂಧನ ಮತ್ತೊಂದು ಶತಕ, ನಾಯಕಿ ಕೌರ್ ಸೆಂಚುರಿ ಸಂಭ್ರಮ !

Exclusive Karnataka cricket Ravikumar Samarth quits the Karnataka state Cricket team
image Credit to Original source

ಕರ್ನಾಟಕ, ದಕ್ಷಿಣ ವಲಯ, ಭಾರತ ಎ, ರೆಸ್ಟ್ ಆಫ್ ಇಂಡಿಯಾ ತಂಡಗಳನ್ನು ಪ್ರತಿನಿಧಿಸಿರುವ ಆರ್.ಸಮರ್ಥ್ ಒಟ್ಟು 88 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 13 ಶತಕಗಳು ಹಾಗೂ 29 ಅರ್ಧಶತಕಗಳ ಸಹಿತ 38.51ರ ಸರಾಸರಿಯಲ್ಲಿ 5,508 ರನ್ ಕಲೆ ಹಾಕಿದ್ದಾರೆ. 64 ಲಿಸ್ಟ್ ಎ ಪಂದ್ಯಗಳಿಂದ 8 ಶತಕ ಮತ್ತು 16 ಅರ್ಧಶತಕಗಳೊಂದಿಗೆ 48.45ರ ಉತ್ತಮ ಸರಾಸರಿಯಲ್ಲಿ 2665 ರನ್ ಗಳಿಸಿದ್ದಾರೆ. ಕರ್ನಾಟಕ ಪರ 23 ಟಿ20 ಪಂದ್ಯಗಳನ್ನೂ ಆಡಿರುವ ಸಮರ್ಥ್ 275 ರನ್ ಗಳಿಸಿದ್ದಾರೆ. 2023-24ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆರ್.ಸಮರ್ಥ್ ಕರ್ನಾಟಕ ಪರ 341 ರನ್ ಕಲೆ ಹಾಕಿದ್ದರು.

Exclusive Karnataka cricketer Ravikumar Samarth quits the Karnataka state Cricket team

ಇದನ್ನೂ ಓದಿ : T20 World Cup Super-8: ಸೂಪರ್-8ನಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಇವರೇ !

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular