ಭಾನುವಾರ, ಜೂನ್ 15, 2025
HomeSportsCricketSurya Kumar Yadav New T20 captain‌ : ಹಾರ್ದಿಕ್ ಪಾಂಡ್ಯಗೆ ಗಂಭೀರ್ ಶಾಕ್, ಟಿ20...

Surya Kumar Yadav New T20 captain‌ : ಹಾರ್ದಿಕ್ ಪಾಂಡ್ಯಗೆ ಗಂಭೀರ್ ಶಾಕ್, ಟಿ20 ತಂಡಕ್ಕೆ ಸೂರ್ಯಕುಮಾರ್‌ ಯಾದವ್ ನಾಯಕ‌

- Advertisement -

Surya Kumar Yada : ಮುಂಬೈ: ಭಾರತ ಟಿ20 ತಂಡದ ಖಾಯಂ ನಾಯಕನಾಗುವ ನಿರೀಕ್ಷೆಯಲ್ಲಿದ್ದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಟೀಮ್ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ (Gautam Gambhir) ಶಾಕ್ ನೀಡಿದ್ದಾರೆೆ. ಭಾರತ ಟಿ20 ತಂಡದ ನೂತನ ನಾಯಕನನ್ನಾಗಿ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲು ಗೌತಮ್ ಗಂಭೀರ್ ಉತ್ಸುಕರಾಗಿದ್ದಾರೆ.

Surya Kumar Yadav will be new t20 captain Gautham Gambhir shock for Hardik Pandya
Image Credit to Original Source

ಈ ಬಗ್ಗೆ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರೊಂದಿಗೆ ಗಂಭೀರ್ ಚರ್ಚೆ ನಡೆಸಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದಲೇ ಟೀಮ್ ಇಂಡಿಯಾದಲ್ಲಿ ಸೂರ್ಯ ಕುಮಾರ್ ನಾಯಕತ್ವದ ಪ್ರಯಾಣ ಶುರುವಾಗುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್’ನಲ್ಲಿ ಕಳೆದ ತಿಂಗಳು ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಂತರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ತಂಡದ ಉಪನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಟಿ2೦ ತಂಡದ ಮುಂದಿನ ನಾಯಕರಾಗುವ ನಿರೀಕ್ಷೆಯಲ್ಲಿದ್ದರು.

ಇದನ್ನೂ ಓದಿ : Harbhajan Singh Vs PCB: ಪಾಕಿಸ್ತಾನಕ್ಕೆ ಹಿಗ್ಗಾಮುಗ್ಗ ಜಾಡಿಸಿದ ಟರ್ಬನೇಟರ್, ಕಾರಣವೇನು ಗೊತ್ತಾ ?

ಆದರೆ ಕೋಚ್ ಗೌತಮ್ ಗಂಭೀರ್ ಮಾತ್ರ ಹಾರ್ದಿಕ್ ಪಾಂಡ್ಯ ಬದಲು ಸೂರ್ಯ ಕುಮಾರ್ ಯಾದವ್ ಪರ ಬಿಸಿಸಿಐ ಬಳಿ ಬ್ಯಾಟ್ ಬೀಸಿದ್ದಾರೆ. ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಳ್ಳುವ ಮುನ್ನ ಗೌತಮ್ ಗಂಭೀರ್ ಜೊತೆ ಸೂರ್ಯ ಕುಮಾರ್ ಯಾದವ್ ಕೋಲ್ಕತಾ ನೈಟ್ ರೈಡರ್ಸ್ ಪರ ಜೊತೆಯಾಗಿ ಆಡಿದ್ದರು.

Surya Kumar Yadav will be new t20 captain Gautham Gambhir shock for Hardik Pandya
Image Credit to Original Source

ಇದನ್ನೂ ಓದಿ : Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ ! :

ಟಿ20 ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಓವರ್’ನಲ್ಲಿ ಡೇವಿಡ್ ಮಿಲ್ಲರ್ ಅವರ ಕ್ಯಾಚನ್ನು ಲಾಂಗ್ ಆಫ್’ನಲ್ಲಿ ಅದ್ಭುತವಾಗಿ ಹಿಡಿದಿದ್ದ ಸೂರ್ಯ ಕುಮಾರ್ ಯಾದವ್ ಭಾರತ ವಿಶ್ವ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Surya Kumar Yadav will be new t20 captain : Gambhir shock for Hardik Pandya, Surya Kumar Yadav captain for T20 team

ಇದನ್ನೂ ಓದಿ : Rahul Dravid Future Plan: ವಿಶ್ವಕಪ್ ಗೆದ್ದಾಯ್ತು, ದ್ರೋಣಾಚಾರ್ಯ ದ್ರಾವಿಡ್ ಮುಂದಿನ ನಡೆಯೇನು? ಇಲ್ಲಿದೆ ಉತ್ತರ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular