ಭಾನುವಾರ, ಏಪ್ರಿಲ್ 27, 2025
HomeSportsCricketವಿಶ್ವಕಪ್ 2023 ತಂಡದಲ್ಲಿ ಸಿಗದ ಸ್ಥಾನ : ನಿವೃತ್ತಿ ಘೋಷಿಸಲು ಮುಂದಾದ ಭಾರತದ ಖ್ಯಾತ ಆಟಗಾರರು

ವಿಶ್ವಕಪ್ 2023 ತಂಡದಲ್ಲಿ ಸಿಗದ ಸ್ಥಾನ : ನಿವೃತ್ತಿ ಘೋಷಿಸಲು ಮುಂದಾದ ಭಾರತದ ಖ್ಯಾತ ಆಟಗಾರರು

- Advertisement -

ಐಸಿಸಿ ಏಕದಿನ ವಿಶ್ವಕಪ್ 2023ಕ್ಕೆ (ICC ODI World Cup 2023) ಇಂದು ( ಅಕ್ಟೋಬರ್ 5) ಅಧಿಕೃತ ಚಾಲನೆ ದೊರೆಯಲಿದೆ. ಈಗಾಗಲೇ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ತಾಲೀಮು ನಡೆಸಿವೆ. ಆದರೆ ಭಾರತ ತಂಡ ಅಭ್ಯಾಸ ಪಂದ್ಯವನ್ನು ಆಡದೆ ನೇರವಾಗಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದೆ.

ಬಿಸಿಸಿಐ ಸಾರಥ್ಯದಲ್ಲಿ ಭಾರತದಲ್ಲಿ ಈ ಬಾರಿಯ ಏಕದಿನ ವಿಶ್ವಕಪ್‌ ಪಂದ್ಯಾವಳಿ ನಡೆಯುತ್ತಿದ್ದು, ಹಿರಿಯ ಹಾಗೂ ಕಿರಿಯ ಆಟಗಾರರಿಂದ ಕೂಡಿರುವ ಭಾರತ ತಂಡ ಬಲಿಷ್ಠವಾಗಿದೆ. ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಗರಡಿಯಲ್ಲಿ ಖ್ಯಾತ ಆಟಗಾರರಾದ ವಿರಾಟ್‌ ಕೊಹ್ಲಿ (Virat Kohli), ರೋಹಿತ್‌ ಶರ್ಮಾ (Rohit Sharma) , ಕೆ.ಎಲ್.ರಾಹುಲ್‌ (Kl Rahul), ಶುಭಮನ್‌ ಗಿಲ್ (Shubman Gill ), ರವೀಂದ್ರ ಜಡೇಜಾ (Ravinda Jadeja), ಜಸ್ಪ್ರಿತ್‌ ಬೂಮ್ರಾ (Jasprit Bumrah) ರಂತಹ ಆಟಗಾರರು ತಂಡದಲ್ಲಿದ್ದಾರೆ.

World Cup 2023 No Place In Team india Ajinkya Rahane Shikhar Dhawan and Bhuvneshwar Kumar Will Announce Retirement
Image credit to Original Source

ತಮಿಳುನಾಡಿನ ಖ್ಯಾತ ಸ್ಪಿನ್ನರ್‌ ಆರ್.ಅಶ್ವಿನ್‌ ( R. Ashwain) ಕೂಡ ಕೊನೆಯ ಕ್ಷಣದಲ್ಲಿ ವಿಶ್ವಕಪ್‌ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಳೆದ 5 ವರ್ಷಗಳಿಂದಲೂ ಏಕದಿನ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಟೀಂ ಇಂಡಿಯಾದ ಖ್ಯಾತ ಆಟಗಾರನಿಗೆ ಮಾತ್ರ ಇನ್ನೂ ಸ್ಥಾನ ಸಿಕ್ಕಿಲ್ಲ.

ಇದನ್ನೂ ಓದಿ : ಏಷ್ಯನ್‌ ಗೇಮ್ಸ್‌ ಕ್ವಾರ್ಟರ್‌ ಫೈನಲ್‌ : ಯಶಸ್ವಿ ಜೈಸ್ವಾಲ್ ಸ್ಪೋಟಕ ಶತಕ, ಶುಭಮನ್‌ ಗಿಲ್‌ ದಾಖಲೆ ಉಡೀಸ್

ಐಪಿಎಲ್‌, ಟೆಸ್ಟ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಕೂಡ ಏಕದಿನ ತಂಡದಲ್ಲಿ ಕಳೆದ ಐದು ವರ್ಷಗಳಿಂದ ಸ್ಥಾನ ಸಿಕ್ಕಿಲ್ಲ. ಇದೇ ಕಾರಣಕ್ಕೆ ಟೀಂ ಇಂಡಿಯಾದ ಖ್ಯಾತ ಆಟಗಾರ ಅಜಿಂಕ್ಯಾ ರಹಾನೆ (Ajinkya Rahane) ಇದೀಗ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಸಜ್ಜಾಗಿದ್ದಾರೆ.

ಒಂದು ಕಾಲದಲ್ಲಿ ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿದ್ದ ಅಜಿಂಕ್ಯ ರಹಾನೆ ತಂಡ ನಾಯಕ ಹಾಗೂ ಉಪನಾಯಕನಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಫಾರ್ಮ್‌ ಕೊರತೆಯಿಂದ ರಹಾನೆ 2018ರಿಂದಲೂ ಏಕದಿನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಸದಾ ಅವಕಾಶಕ್ಕಾಗಿ ಕಾದು ಕುಳಿತಿದ್ದರೂ ಕೂಡ ಬಿಸಿಸಿಐ ಆಯ್ಕೆ ಸಮಿತಿ ರಹಾನೆಗೆ ಮಣೆ ಹಾಕಿಲ್ಲ.

World Cup 2023 No Place In Team india Ajinkya Rahane Shikhar Dhawan and Bhuvneshwar Kumar Will Announce Retirement
Image Credit to Original Source

ವಿಶ್ವಕಪ್‌ಗೆ ಮುನ್ನ ಸಾಕಷ್ಟು ಸರಣಿಗಳು ನಡೆದಿದ್ದರೂ ಕೂಡ ಅಜಿಂಕ್ಯಾ ರಹಾನೆಗೆ ಒಂದೇ ಒಂದು ಅವಕಾಶವನ್ನೂ ಕೂಡ ನೀಡಲ್ಲ. ಇನ್ನು ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್‌ ಧವನ್‌ ಕೂಡ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಟೀಂ ಇಂಡಿಯಾವನ್ನು ಒಂದೆರಡು ಸರಣಿಯಲ್ಲಿ ನಾಯಕನಾಗಿ ಮುನ್ನೆಡೆಸಿದ್ದು, ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರೂ ಕೂಡ ಶಿಖರ್‌ ಧವನ್‌ಗೆ (Shikar Dhawan) ಅವಕಾಶ ಧಕ್ಕಿಲ್ಲ.

ಇದನ್ನೂ ಓದಿ : ICC Cricket Ranking : ಟೆಸ್ಟ್‌, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ವಿಶ್ವಕ್ಕೆ ಭಾರತವೇ ನಂ.1

ಇನ್ನು ರಹಾನೆ, ಧವನ್‌ ಹಾದಿಯನ್ನೇ ಹಿಡಿಯಲು ಭುವನೇಶ್ವರ್‌ ಕುಮಾರ್‌ (Bhuvaneshwar Kumar) ಕೂಡ ರೆಡಿ ಆಗಿದ್ದಾರೆ. ಭುವನೇಶ್ವರ್‌ ಕುಮಾರ್‌ ಟೀಂ ಇಂಡಿಯಾದ ಪ್ರಧಾನ ಬೌಲರ್‌ ಆಗಿದ್ದಾರೆ. ಹಲವು ಪಂದ್ಯಾವಳಿಗಳಲ್ಲಿ ಮಿಂಚಿದ್ದರೂ ಕೂಡ ಭಾರತ ತಂಡದ ಟೀಂ ಮ್ಯಾನೇಜ್ಮೆಂಟ್‌ ಮಾತ್ರ ಈ ಆಟಗಾರನನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಿಲ್ಲ. ಈ ಕಾರಣದಿಂದಲೇ ವಿಶ್ವಕಪ್‌ ಹೊತ್ತಲೇ ಈ ಮೂವರು ಆಟಗಾರರು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಇನ್ನು ಇಂದಿನಿಂದ ಏಕದಿನ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ಕಳೆದ ಬಾರಿಯ ರನ್ನರ್‌ ಅಪ್‌ ನ್ಯೂಜಿಲೆಂಡ್‌ ತಂಡಗಳು ಸೆಣೆಸಾಟವನ್ನು ನಡೆಸಲಿದೆ. ಪ್ ರನ್ನರ್ ಅಪ್ ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಹೈ ವೋಲ್ಟೇಜ್‌ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ.

ಈಗಾಗಲೇ ಎರಡೂ ತಂಡಗಳು ಉದ್ಘಾಟನಾ ಪಂದ್ಯ ಆಡಲು ಅಹಮದಾಬಾದ್‌ಗೆ ಬಂದಿಳಿದಿವೆ. ಎರಡೂ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ತಂಡಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಒಂದೆಡೆ ಇಂಗ್ಲೆಂಡ್ ತಂಡ ಬಾಂಗ್ಲಾದೇಶವನ್ನು ಮಣಿಸಿದರೆ, ಇನ್ನೊಂದೆಡೆ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದಿದೆ. ಇಂಗ್ಲೆಂಡ್ ಮತ್ತು ಭಾರತ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು.

ಇದನ್ನೂ ಓದಿ : ವಿರುಷ್ಕಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : 2 ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ

ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಇಂದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಾಲೀಮು ನಡೆಸುತ್ತಿವೆ. ಕಳೆದ ಬಾರಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ 2019 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಇಂಗ್ಲೆಂಡ್ ತಂಡದ ಕೊನೆಯ ನಾಯಕರಾಗಿದ್ದ ಇಯಾನ್ ಮಾರ್ಗನ್ ನಿವೃತ್ತಿಯಾಗಿರುವುದರಿಂದ ಜೋಸ್ ಬಟ್ಲರ್ ಈಗ ತಂಡದ ನಾಯಕರಾಗಿದ್ದಾರೆ. ಅಲ್ಲದೆ, ಬಟ್ಲರ್ ಈಗಾಗಲೇ 2022 ರ ಟಿ 20 ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. ಇನ್ನೊಂದೆಡೆಯಲ್ಲಿ ನ್ಯೂಜಿಲೆಂಡ್‌ ತಂಡವನ್ನು ಅನುಭವಿ ಕೇನ್‌ ವಿಲಿಯಂಸನ್ ಮುನ್ನೆಡೆಸುತ್ತಿದ್ದಾರೆ.

World Cup 2023 No Place In Team india Ajinkya Rahane Shikhar Dhawan and Bhuvneshwar Kumar Will Announce Retirement

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular