ಭಾನುವಾರ, ಜೂನ್ 15, 2025
HomeCrimeAC Blast : ಎಸಿ ಸ್ಪೋಟ, ಒಂದೇ ಕುಟುಂಬದ ನಾಲ್ವರ ದುರ್ಮರಣ

AC Blast : ಎಸಿ ಸ್ಪೋಟ, ಒಂದೇ ಕುಟುಂಬದ ನಾಲ್ವರ ದುರ್ಮರಣ

- Advertisement -

ವಿಜಯನಗರ : ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಎಸಿ ಸ್ಪೋಟವಾಗಿ (AC Blast) ನಾಲ್ವರು ಸಜೀವವಾಗಿ ದಹನವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ವೈಷ್ಣವ ಜನಾಂಗ ಕಿರಣಿ ಅಂಗಡಿ ವ್ಯಾಪಾರಿ ವೆಂಕಟ ಪ್ರಶಾಂತ್‌ ( 42 ವರ್ಷ), ಪತ್ನಿ ಡಿ. ಚಂದ್ರಕಲಾ ( 38 ವರ್ಷ) ಮಕ್ಕಳಾದ ಎಚ್.ಎ. ಅದ್ವಿಕ್‌ (16 ವರ್ಷ), ಪ್ರೇರಣಾ ( 8 ವರ್ಷ ) ಎಂಬವರೇ ಸಜೀವವಾಗಿ ದಹನ ಆದವರು. ರಾತ್ರಿ 12:45 ಗಂಟೆಯ ಸುಮಾರಿಗೆ ಮನೆಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿತ್ತು. ಇದರಿಂದಾಗಿ ಎಸಿಯಲ್ಲಿ ಲೀಕ್‌ ಆಗೋದಕ್ಕೆ ಶುರುವಾಗಿತ್ತು. ಇದರಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ.

AC Blast, the death of four single family members 2

ಘಟನೆ ನಡೆಯುತ್ತಿದ್ದಂತೆಯೇ ಮನೆಯ ಮಾಲೀಕ ರಾಘವೇಂದ್ರ ಶೆಟ್ಟಿ ಹಾಗೂ ಅವರ ಪತ್ನಿ ರಾಜಶ್ರೀ ಎಂಬವರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ ಅವರ ಮಗ ವೆಂಕಟ ಪ್ರಶಾಂತ್‌, ಚಂದ್ರಕಲಾ, ಅರ್ದ್ವಿಕ್ ಹಾಗೂ ಪ್ರೇರಣಾ ಎಸಿ ಯಲ್ಲಿ ಲಿಕ್ವಿಡ್‌ ಸೋರಿಕೆಯಿಂದ ಉಸಿರುಗಟ್ಟಿ ರೂಂನಿಂದ ಹೊರ ಬರಲಾರದ ಸ್ಥಿತಿಗೆ ತಲುಪಿದ್ದರು. ಅಲ್ಲದೇ ಮಲಗಿದ್ದಲ್ಲಿಯೇ ಸುಟ್ಟು ಕರಕಲಾಗಿದ್ದಾರೆ.

AC Blast, the death of four single family members 1

ಮೃತ ಶವಗಳನ್ನು ಹೊಸಪೇಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮರಣೋತ್ತರ ಕಾರ್ಯವನ್ನು ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿ ಕೊಂಡಿರುವ ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ :  ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ : ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ

AC Blast, the death of four single family members

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular