ಮಂಗಳವಾರ, ಜೂನ್ 17, 2025
HomekarnatakaGavi Gangadhareshwara : ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ: ಕೌತುಕಕ್ಕೆ ಸಾಕ್ಷಿಯಾಯ್ತು ಕರುನಾಡು

Gavi Gangadhareshwara : ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿದ ಸೂರ್ಯ ರಶ್ಮಿ: ಕೌತುಕಕ್ಕೆ ಸಾಕ್ಷಿಯಾಯ್ತು ಕರುನಾಡು

- Advertisement -

ಬೆಂಗಳೂರು : ಮಕರ ಸಂಕ್ರಮಣದ ಪರ್ವಕಾಲದಲ್ಲಿ ಕೌತುಕವೊಂದಕ್ಕೆ ರಾಜ್ಯ ರಾಜಧಾನಿ ಸಾಕ್ಷಿಯಾಗಿದ್ದು, ಪ್ರತಿವರ್ಷದಂತೆ ಬೆಂಗಳೂರಿನ ಗವಿ ಗಂಗಾಧರೇಶ್ವರ (Gavi Gangadhareshwara )ದೇವಾಲಯವನ್ನು ಪ್ರವೇಶಿಸಿದ ಸೂರ್ಯರಶ್ಮಿ ಗವಿಗಂಗಾಧರೇಶ್ವರ ಪಾದವನ್ನು ಸ್ಪರ್ಶಿಸಿದೆ. ಈ ದೃಶ್ಯವನ್ನು ಆಸ್ತಿಕರು ಕಣ್ತುಂಬಿಕೊಂಡಿದ್ದು ಪವಾಡದಂತಹ ಈ ಘಟನೆಗೆ ಅರ್ಚಕರು, ಭಕ್ತರು ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷ ಮಕರ ಸಂಕ್ರಮಣದ ಪರ್ವಕಾಲದಲ್ಲಿ ಪ್ರತಿವರ್ಷವೂ ಸೂರ್ಯ ರಶ್ಮಿ ಒಮ್ಮೇ ಗವಿಗಂಗಾಧರೇಶ್ವನನ್ನು ಸ್ಪರ್ಶಿಸೋದು ಒಂದು ಕೌತುಕದ ಸಂಗತಿ. ಇದು ನಮ್ಮ ಹಿರಿದಾದ ವಾಸ್ತುಶಿಲ್ಪದ ವೈಶಿಷ್ಟ್ಯತೆಯನ್ನು ಸಾರುವಂತಹ ಸಂಗತಿಯಾಗಿದೆ.

ಈ ವರ್ಷವೂ ಕೂಡ ಈ ಅಲೌಕಿಕವಾದ ಸಂಗತಿಗೆ ಗವಿಗಂಗಾಧರೇಶ್ವರ ದೇವಾಲಯ ಸಾಕ್ಷಿಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕೇವಲ ಅರ್ಚಕರು ಹಾಗೂ ದೇಗುಲದ ಸಿಬ್ಬಂದಿಗೆ ಮಾತ್ರ ಈ ದೇವಾಲಯಕ್ಕೆ ಹಾಗೂ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. 5.16 ನಿಮಿಷದಿಂದ ಆರಂಭವಾದ ಸೂರ್ಯ ರಶ್ಮಿ ಯ ಪ್ರವೇಶ ಪ್ರಕ್ರಿಯೆ 5.27 ರ ವೇಳೆಗೆ ಪೂರ್ಣಗೊಂಡಿತು. ದೇವಾಲಯದ ಪ್ರವೇಶದ್ವಾರ ದಿಂದ ಆರಂಭವಾದ ಸೂರ್ಯ ರಶ್ಮಿ ಪ್ರವೇಶ ಬಳಿಕ ನಂದಿಯ ಮುಖೇನ ಹಾದು ನಂದಿಯ ಕೊಂಬಿನ ಮೂಲಕ ಗರ್ಭಗುಡಿಗೆ ಪ್ರವೇಶಿಸಿತು.

ಗರ್ಭಗುಡಿ ಪ್ರವೇಶಿಸಿದ ಸೂರ್ಯ ರಶ್ಮಿಯು ಶಿವಲಿಂಗದ ಪಾದದಿಂದ ಆರಂಭಿಸಿ ಲಿಂಗದ ಶಿರೋಭಾಗವನ್ನು ಸ್ಪರ್ಶಿಸಿ ಧನ್ಯವಾಯಿತು. ಈ ಕೌತುಕವನ್ನು ಮಾಧ್ಯಮದ ಮೂಲಕ ನಾಡಿನ ಭಕ್ತರು ಕಣ್ತುಂಬಿಕೊಂಡು ಸಂಭ್ರಮಿಸಿದರು. ಸೂರ್ಯರಶ್ಮಿ ಸ್ಪರ್ಶಿಸಿದ ಈ ಕೌತುಕದ ಬಳಿಕ ಶಿವನಿಗೆ ಕ್ಷೀರ ಸೇರಿದಂತೆ ವಿವಿಧ ಪವಿತ್ರ ವಸ್ತುಗಳಿಂದ ಅಭಿಷೇಕ ನೆರವೇರಿಸಲಾಯಿತು. ಸೂರ್ಯರಶ್ಮಿ ಪ್ರವೇಶದ ಬಳಿಕ ಗಂಗಾಧರನಿಗೆ ಉಷ್ಣವಾಗೋದರಿಂದ ತಂಪುಗೊಳಿಸಲು ವಿವಿಧ ಬಗೆಯ ಅಭಿಷೇಕ ನಡೆಸೋದು ವಾಡಿಕೆ.

ಈ ವರ್ಷ ಎರಡು ನಿಮಿಷ 13 ಸೆಕೆಂಡ್ ಗಳ ಕಾಲ ಸೂರ್ಯರಶ್ಮಿ ಗವಿಗಂಗಾಧರೇಶ್ವರನ ಮೇಲೆ ತನ್ನ ಕಿರಣಗಳನ್ನು ಬೀರಿದ್ದು ಈ ಸುಂದರ ದೃಶ್ಯ ನೋಡುಗರನ್ನು ಸೆಳೆಯಿತು. ಈ ಕೌತುಕದ ಬಗ್ಗೆ ಮಾಹಿತಿ‌ನೀಡಿದ ಗವಿಗಂಗಾಧರೇಶ್ವರ ದೇವಾಲಯದ ಅರ್ಚಕರಾದ ಸೋಮ ಸುಂದರ್ ದೀಕ್ಷಿತರು, ಹೋದ ವರ್ಷ ಮೋಡದಿಂದಾಗಿ ಸೂರ್ಯ ರಶ್ಮಿ ಸಂಪೂರ್ಣ ಸ್ಪರ್ಶ ಆಗಿರಲಿಲ್ಲ. ಇದರಿಂದಾಗಿ ಏನೆಲ್ಲ ಅವಘಡಗಳಾಯ್ತು ಅನ್ನೋದನ್ನು ನಾವು ನೋಡಿದ್ದೇವೆ.

ಆದರೆ ಈ ವರ್ಷ ಸಂಪೂರ್ಣ ಸೂರ್ಯರಶ್ಮಿ ಸ್ಪರ್ಶವಾಗಿದೆ. ಈ ವರ್ಷ ಸೋಮಸೂತ್ರದ ಪಾರ್ವತಿಯನ್ನು ಮೊದಲು ಸ್ಪರ್ಶ ಮಾಡಿ ನಂತರ ಶಿವಲಿಂಗವನ್ನು ರಶ್ಮಿ ಸ್ಪರ್ಶಿಸಿದೆ. ಈ ವರ್ಷ ಪೂರ್ಣ ಪ್ರಮಾಣದಲ್ಲಿ ಸೂರ್ಯರಶ್ಮಿ ಸ್ಪರ್ಶದೊಂದಿಗೆ ನಾವು ಉತ್ತರಾಯಣ ಪ್ರವೇಶ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಶುಭವಾಗಲಿದೆ. ಈ ಕೊರೋನಾ ಪೀಡೆ ಅಲೆ ಅಲೆಯಾಗಿ ಸಂಪೂರ್ಣವಾಗಿ ತೊಲಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೊರೋನಾ, ಓಮೈಕ್ರಾನ್ ಹಾಟ್ ಸ್ಪಾಟ್ : ಅಪಾರ್ಟ್ಮೆಂಟ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ

ಇದನ್ನೂ ಓದಿ : ನೈಟ್ ಕರ್ಪ್ಯೂ ಸಡಿಲಿಸದಿದ್ದರೇ ನಾವು ವ್ಯಾಪಾರ ಬಂದ್ ಮಾಡಲ್ಲ: ಸರ್ಕಾರಕ್ಕೆ ಹೊಟೇಲ್,ಬಾರ್ ಮಾಲೀಕರ ಎಚ್ಚರಿಕೆ

(Gavi Gangadhareshwara temple celebrate Makar Sankranti)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular