ಸೋಮವಾರ, ಜೂನ್ 16, 2025
HomeCorona UpdatesCovid-19 Testing Guidelines : ಅನಗತ್ಯ ಕೊರೋನಾ ಟೆಸ್ಟ್ ಗೆ ಬಿತ್ತು ಕಡಿವಾಣ : ಹೊಸ...

Covid-19 Testing Guidelines : ಅನಗತ್ಯ ಕೊರೋನಾ ಟೆಸ್ಟ್ ಗೆ ಬಿತ್ತು ಕಡಿವಾಣ : ಹೊಸ ಮಾರ್ಗಸೂಚಿ ಹೊರಡಿಸಿದ‌ ಆರೋಗ್ಯ ಇಲಾಖೆ

- Advertisement -

ಬೆಂಗಳೂರು : ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರ ಕೊರೋನಾ ಪರೀಕ್ಷೆಯ ಮಾರ್ಗಸೂಚಿಗಳಲ್ಲಿ ಹಲವು ಬದಲಾವಣೆ‌ ಮಾಡಿದ್ದು, ಕೊವೀಡ್ 19 ಪರೀಕ್ಷಾ ವಿಧಾನಗಳ ಬಗ್ಗೆ ಹಲವು (Covid-19 Testing Guidelines) ಸೂಚನೆಯನ್ನು ನೀಡಿದೆ. ಕೊರೋನಾ ಪರೀಕ್ಷೆಯನ್ನು ಯಾರಿಗೆ ನಡೆಸಬೇಕು? ಯಾವ ಸಂದರ್ಭದಲ್ಲಿ ನಡೆಸಬೇಕು ಎಂಬುದನ್ನು ಸೇರಿದಂತೆ ಹಲವು ಸೂಚನೆ ನೀಡಿದೆ. ಅನಗತ್ಯವಾಗಿ ಪರೀಕ್ಷೆ ನಡೆಸುವ ಬದಲು ಆದ್ಯತೆ ಮೇರೆಗೆ ಕೊರೋನಾ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ರವಾನಿಸಿದೆ. ಶೀತ,‌ ಕೆಮ್ಮು, ನೆಗಡಿ, ಜ್ವರ ಇರುವವರಿಗೆ ಉದ್ದೇಶ ಪೂರ್ವಕವಾಗಿ ಪರೀಕ್ಷೆ ನಡೆಸಬೇಕು. ಅಲ್ಲದೇ ರಾಜ್ಯದ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಸಬೇಕು.

ಇದಲ್ಲದೇ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಕೊಮಾರ್ಬಿಡಿಟಿ ರೋಗಿಗಳಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿ ನಡೆಸಬೇಕು.‌ಅಲ್ಲದೇ ವಿದೇಶಕ್ಕೆ ತೆರಳುವ ಹಾಗೂ ವಿದೇಶ ದಿಂದ ಆಗಮಿಸುವವರಿಗೆ ಆದ್ಯತೆ ಮೇರೆಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಕೇವಲ ಪರೀಕ್ಷೆ ನಡೆಸುವುದು ಮಾತ್ರವಲ್ಲ, ಯಾರಿಗೆಲ್ಲ ಕೊರೋನಾ ಪರೀಕ್ಷೆ ಅಗತ್ಯವಿಲ್ಲ ಎಂಬುದನ್ನು ಆರೋಗ್ಯ ಇಲಾಖೆ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ‌.

ಕೋರೋನಾ ಸೋಂಕಿತರ ಸಂಪರ್ಕಕ್ಕೆ ಬಂದ ಸಂಪರ್ಕಿತರು ಗುಣಲಕ್ಷಣ ರಹಿತವಾಗಿದ್ದರೆ ಟೆಸ್ಟ್ ಅಗತ್ಯವಿಲ್ಲ. ಅಲ್ಲದೇ ಕೊರೋನಾ ಸೋಂಕಿಗೆ ತುತ್ತಾಗಿ ಗುಣಲಕ್ಷಣ ಕಡಿಮೆಯಿದ್ದು ಅದರಿಂದ ಹೊರ ಬರುವ ಸೋಂಕಿತರಿಗೆ ಪರೀಕ್ಷೆ ಕಡ್ಡಾಯವಲ್ಲ. ಕೇರಳ, ಮಹಾರಾಷ್ಟ್ರ, ಗೋವಾ ಹೊರತು ಪಡಿಸಿ ಇತರೆ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರಿಗೆ ಟೆಸ್ಟ್ ಮಾಡಿಸುವ ಅಗತ್ಯವಿಲ್ಲ ಎಂದಿದೆ. ಇನ್ನು ಆಸ್ಪತ್ರೆಗೆ ಒಳರೋಗಿ ವಿಭಾಗದಲ್ಲಿ ದಾಖಲಾಗಿರುವ ರೋಗಿಗಳಿಗೆ ಸಿಂಪ್ಟಮ್ಸ್ ಇಲ್ಲದಿದ್ದರೆ ಟೆಸ್ಟ್ ಕಡ್ಡಾಯವಲ್ಲ ಎಂದು ಆರೋಗ್ಯ ಇಲಾಖೆ‌ ಸ್ಪಷ್ಟ ಪಡಿಸಿದೆ.

ಇನ್ನು ಆಸ್ಪತ್ರೆಗಳಲ್ಲಿ ಆಡ್ಮಿಟ್ ಆದ ಒಳ ರೋಗಿಗಳನ್ನು ವಾರಕ್ಕೆ ಒಂದು ಬಾರಿಗಿಂತ ಹೆಚ್ಚು ಬಾರಿ ಕೊರೋನಾ ಟೆಸ್ಟ್ ಗೆ ಒಳಪಡಿಸುವಂತಿಲ್ಲ.ಹೆರಿಗೆ ಹಾಗೂ ಇನ್ನಿತರ ತುತ್ತು ಪ್ರಕರಣಗಳಲ್ಲಿ ಕೊರೋನಾ ಪರೀಕ್ಷೆ ಅಗತ್ಯವಲ್ಲ ಶುಶ್ರೂಷಾ ವೈದ್ಯರು ಸಲಹೆಯ ಮೇರೆಗೆ ಮಾತ್ರ ಕೊರೋನಾ ಟೆಸ್ಟ್ ಮಾಡಿಸುವಂತೆ ಎಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ಹೇಳಿದೆ. ಈ ಹಿಂದೆಯೇ ಕೊರೋನಾ ಟೆಸ್ಟಿಂಗ್ ನ ವಿಧಾನ ಬದಲಿಸುವಂತೆ ICMR ಕೂಡ ಸಲಹೆ ನೀಡಿತ್ತು. ಸಿಕ್ಕ ಸಿಕ್ಕವರಿಗೆಲ್ಲಾ ಟೆಸ್ಟಿಂಗ್ ನ ಅಗತ್ಯ ಇಲ್ಲ ಅಂತಾ ICMR ಕೂಡಾ ಹೇಳಿತ್ತು. ಈಗ ಸ್ವತಃ ಆರೋಗ್ಯ ಇಲಾಖೆಯೂ ಕೊರೋನಾ ಟೆಸ್ಟ್ ಮಾರ್ಗಸೂಚಿ ಬದಲಾಯಿಸಿದೆ.

ಇದನ್ನೂ ಓದಿ : ಸಾಮಾನ್ಯ ಶೀತ ಹಾಗೂ ಓಮಿಕ್ರಾನ್​ ಲಕ್ಷಣಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : ರಾಜ್ಯದಲ್ಲಿ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿಗೆ 34 ಗಣ್ಯರ ಪತ್ರ

( Covid-19 Testing Guidelines Release Karnataka Government )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular