Help Alert: ಬೆಟ್ಟಂಪಾಡಿ ದೇವಾಲಯದ ಭಾಗ್ಯಲಕ್ಷ್ಮಿಯ ಚಿಕಿತ್ಸೆಗೆ ಬೇಕಿದೆ ನೆರವು; ಸಾರ್ವಜನಿಕರಲ್ಲಿ ಕೋರಿಕೆ

ವೈದ್ಯಕೀಯ ಚಿಕಿತ್ಸೆಯಂತಹ ಅತ್ಯಂತ ಅಗತ್ಯ ಸಂದರ್ಭಗಳಲ್ಲಿ ಬಡ ಕುಟುಂಬಗಳಿಗೆ ಸಹೃದಯ ಸಾರ್ವಜನಿಕರ ಸಹಾಯ ಅನಿವಾರ್ಯ. ಇಂತಹ ನಿಜಕ್ಕೂ ಸಹಾಯ ಅಗತ್ಯವಿರುವ ವ್ಯಕ್ತಿಯೊಬ್ಬರ ವಿವರಗಳು ಇಲ್ಲಿವೆ. (Help Alert) ಈಕುರಿತು ಶ್ಯಾಮ್ ಪ್ರಸಾದ್ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸದುದ್ದೇಶದ ದೃಷ್ಟಿಯಿಂದ ಅವರ ಮನವಿ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ. ದಾನಿಗಳು ಕೆಳಗೆ ನೀಡಲಾದ ವಿವರ ಮತ್ತು ಸಂಪರ್ಕ ಸಂಖ್ಯೆಯನ್ನು ಬಳಸಿ ಮಾಹಿತಿ ಪಡೆದು ಸಹಾಯ ಮಾಡಬಹುದಾಗಿದೆ.

ಶ್ಯಾಮ್ ಪ್ರಸಾದ್ ಅವರ ಬರಹದ ಪೂರ್ಣ ಪಾಠ ಇಲ್ಲಿದೆ.

ಬೆಟ್ಟಂಪಾಡಿ ದೇವಾಲಯದಲ್ಲಿ ಅರ್ಚಕರ ಸಹಾಯಕರಾಗಿ ಕೆಲಸ‌ ನಿರ್ವಹಿಸಿಕೊಂಡು ಅಲ್ಪಸ್ವಲ್ಪ ಕೃಷಿ ಮಾಡಿಕೊಂಡು ಬಡತನದಲ್ಲಿ ಜೀವನ ನಿರ್ವಹಿಸುತ್ತಿರುವ ಹರಿನಾರಾಯಣ ಭಟ್ ರವರಿಗೆ ಮೂರು ಜನ ಮಕ್ಕಳು. ಎರಡು ಗಂಡು. ಒಂದು ಹೆಣ್ಣು. ಪಿಯುಸಿ ಶಿಕ್ಷಣ ಮಾಡುತ್ತಿರುವ ಹೆಣ್ಣು ಮಗಳು ಭಾಗ್ಯಲಕ್ಷ್ಮಿ. ಇನ್ನೂ ನಿಜ ಬದುಕಿನ ಬಾಗಿಲನ್ನೇ ನೋಡಿಲ್ಲ. ಅಷ್ಟರಲ್ಲಿಯೇ ಆಕೆಯ ಬದುಕಿನಲ್ಲಿ ವಿಧಿ ತನ್ನ ಆಟ ಶುರುಮಾಡಿ ಬಿಟ್ಟಿದೆ. ಆಕೆಯ ಆಟ ಪಾಠಗಳಲ್ಲಿ ಖುಷಿಪಟ್ಟಿದ್ದ ಕುಟುಂಬಕ್ಕೆ‌ ಮೊನ್ನೆ ಆಘಾತವೊಂದು ಬರಸಿಡಿಲಿನಂತೆ ಅಪ್ಪಳಿಸಿತು.ಸಂಬಧಿಕನ ಸ್ಕೂಟರ್ ನಲ್ಲಿ ಪುತ್ತೂರಿನಿಂದ‌ ತನ್ನ ಮನೆಗೆ ಪ್ರಯಾಣಿಸುವ ವೇಳೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯ ಕಲ್ಲರ್ಪೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಯ ಚಕ್ರದಡಿ ಭಾಗ್ಯಲಕ್ಷ್ಮಿಯ ಕಾಲುಗಳು ಸಿಲುಕಿ ಒಂದು ಕಾಲು ಸಂಪೂರ್ಣ ತುಂಡಾಗಿ ಹೋಯಿತು.(ತುಂಡಾಗಿ ಬಿದ್ದಿದ್ದ ಕಾಲನ್ನು ಮರುಜೋಡಿಸಲಾಗದೆಂಬುದು ವೈದ್ಯರ ಅಭಿಪ್ರಾಯ). ಉಳಿದ ಇನ್ನೊಂದು ಕಾಲನ್ನಾದರೂ ಸರಿಪಡಿಸಿ ಆಕೆಯ ಜೀವನಕ್ಕೆ ಭಾಗಶಃ ಸಾಂತ್ವನ ಹೇಳಬಹುದೇ ಎಂಬ ಹರಸಾಹಸದಲ್ಲಿ ತೊಡಗಿದೆ ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯ ಸಮೂಹ.
ಆದರೆ ಅದಕ್ಕೆ ಕನಿಷ್ಠ 10 ರಿಂದ 15 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಬೇಕಾಗಿದೆ. ಒಂದು ಕಾಲಂತೂ ಸಂಪೂರ್ಣ ಕಳೆದುಕೊಂಡು ಜೀವನಪೂರ್ತಿ ಅಂಗವೈಕಲ್ಯಕ್ಕೊಳಗಾಗಬೇಕಿದೆ. ಭಾಗಶಃ ಅಂಗವಿಕಲತೆಯನ್ನೂ ಈ ಸಮಾಜ ಹೇಗೆ ನೋಡುತ್ತದೆ ಎಂದು ಗಂಡಸಾದ ನನಗೆ ಸ್ಪಷ್ಟವಿದೆ‌. ಇನ್ನು‌ ಒಬ್ಬ‌ ಈ ಪುಟ್ಟು ಹುಡುಗಿಯನ್ನ ಈ ಸಮಾಜ ಹೇಗೆ ನೋಡುತ್ತದೆ ಎಂಬ ಸ್ಪಷ್ಟತೆಯೂ ನನಗಿದೆ. ಒಂದು ಕಾಲಿನಲ್ಲಿಯಾದರೂ ಜೀವ ಚೈತನ್ಯ ತುಂಬಿ ನಡೆಯುವಷ್ಟರಮಟ್ಟಿಗೆ ಆಗಬೇಕಾದಲ್ಲಿ ಇಷ್ಟು ಖರ್ಚು ಮಾಡಲೇಬೇಕಿದೆ. ಇದು ಆಸ್ಪತ್ರೆಯಿಂದ ಹೊರಬರುವಷ್ಟರಮಟ್ಟಿಗೆ.

ಇನ್ನು ಆಕೆಯ ಭವಿಷ್ಯ?
ದಿನದಿನದ ಜೀವನ ಸಾಗಿಸುತ್ತಿದ್ದ ಹರಿನಾರಾಯಣ ಭಟ್ ರವರ ಕಣ್ಣಂಚಿನಲ್ಲಿ ಅಸಹಾಯಕತೆಯ ಕಣ್ಣೀರು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ.ತಮ್ಮ ಈ ಮುದುಡುವ ಪ್ರಾಯದಲ್ಲಿ, ಅರಳಿ ಬಾಳಬೇಕಿದ್ದ ಮಗಳ ಆಕ್ರಂದನ ಮತ್ತು ಅವಳ ಭವಿಷ್ಯದ ಶೂನ್ಯತೆಯ ಕಲ್ಪನೆ ದಂಪತಿಯನ್ನು ವಿಲವಿಲನೆ ಒದ್ದಾಡಿಸುತ್ತಿದೆ.
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅರ್ಚಕರ ಸಹಾಯಕರಾಗಿದ್ದ ಹರಿನಾರಾಯಣ ಭಟ್ ಕುಟುಂಬಕ್ಕೆ ನೆರವಾಗಲು ದೇವಾಲಯದ ಆಡಳಿತ ಮಂಡಳಿ ಕರೆ ನೀಡಿದೆ.

ಮಾನವೀಯತೆ‌ ಎಲ್ಲೂ ಕುಂದಿಲ್ಲ,ಇನ್ನೊಬ್ಬರ ಬದುಕಿನಲ್ಲಿ ನಮ್ಮ ಬದುಕನ್ನೂ ಕಾಣುವ ಮನದ ಭಾವ ರಾರಾಜಿಸಿ ಅಸಹಾಯಕ ಬದುಕಿಗೆ ಕಿಂಚಿತ್ ಸ್ಪಂದಿಸಿ, ಸಿಂಧುವಿನ ಬಿಂದುವಾಗಿ ನಾವೂ ಬದುಕೋಣ ಎಂಬ ಆಶಯದೊಂದಿಗೆ.

ಚಿಕಿತ್ಸಾ ವೆಚ್ಚ ಮತ್ತು ಆಕೆಯ ಜೀವನಕ್ಕಾಗಿ ಆರ್ಥಿಕ ಸಹಾಯ ಕೋರಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಹೊರಡಿಸಲಾದ ಪ್ರಕಟಣೆಯನ್ನು ಈ ಕೆಳಗೆ ನೀಡಲಾಗಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ
ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಕೋರಿಕೆ
ಸಹೃದಯಿ ಬಂಧುಗಳೇ,
ಶ್ರೀ ಹರಿನಾರಾಯಣ ಭಟ್ ಇವರು ಶ್ರೀ ಕ್ಷೇತ್ರದಲ್ಲಿ ಅರ್ಚಕರ ಸಹಾಯಕರಾಗಿದ್ದು ಇವರ ಮಗಳು ಭಾಗ್ಯಲಕ್ಷ್ಮಿ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿ ಫೆಬ್ರವರಿ 3 ರಂದು ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡು ಮಂಗಳೂರಿನ AJ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮನೆಯವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ದಾನಿಗಳು ತಮ್ಮಿಂದ ಸಾಧ್ಯವಾದ ಧನಸಹಾಯವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಿ ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಹಕರಿಸಬೇಕಾಗಿ ವಿನಂತಿಸುವ
ಅನುವಂಶಿಕ ಆಡಳಿತ ಮೊಕ್ತೇಸರರು
ಮೊಕ್ತೇಸರರು, ಆಡಳಿತ ಸಮಿತಿ
ಶ್ರೀ ಕ್ಷೇತ್ರ ಬೆಟ್ಟಂಪಾಡಿ.
ಬ್ಯಾಂಕ್ ಖಾತೆಯ ವಿವರ :
KRISHNA KUMAR B.K.
Bank of Baroda
Branch: Bettampady
A.C.NO : 70750100006156
IFSC Code : BARBOVJBEPA MICR Code 575012020
Google Pay or Phone pay 7022950749

ವಿ.ಸೂ. ಬ್ಯಾಂಕ್ ಖಾತೆಗೆ ಜಮಾ ಮಾಡಿದ ಮಾಹಿತಿಯನ್ನು ಶಿವಪ್ರಸಾದ್ ತಲೆಪ್ಪಾಡಿ 9449178231 ಇವರ ವಾಟ್ಸಪ್ ಗೆ ನೀಡಲು ಕೋರಿಕೆ.

(ಈ ಮಾಹಿತಿಯನ್ನು ಸಾರ್ವಜನಿಕ ಸದುದ್ದೇಶದಿಂದ ನ್ಯೂಸ್‌ನೆಕ್ಸ್ಟ್ ಕನ್ನಡ ಪ್ರಕಟಿಸಿದೆ. ಹಣ ಅಥವಾ ಇನ್ನಿತರ ಯಾವುದೇ ಆಗುಹೋಗುಗಳಿಗೆ ನ್ಯೂಸ್‌ನೆಕ್ಸ್ಟ್ ಕನ್ನಡ ಜವಾಬ್ದಾರರಾಗಿರುವುದಿಲ್ಲ. )

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(Help Alert Puttur Bettampady Temple priest daughter medical treatment)

Comments are closed.