ಸೋಮವಾರ, ಜೂನ್ 16, 2025
HomeCoastal Newsಮರವಂತೆಯಲ್ಲಿ ಕಡಲ್ಕೊರೆತ : ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ

ಮರವಂತೆಯಲ್ಲಿ ಕಡಲ್ಕೊರೆತ : ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ

- Advertisement -

ಕುಂದಾಪುರ : ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಡಲ ಕೊರೆತ ಉಂಟಾಗಿದೆ. ಉಡುಪಿ ಜಿಲ್ಲೆಯ ಮರವಂತೆಯಲ್ಲಿ ಕಡಲ ಕೊರೆತ (Kadal koreta in Maravante) ಉಂಟಾಗಿದ್ದು, ತೆಂಗಿನ ಮರಗಳು ಹಾಗೂ ಮೀನುಗಾರಿಕಾ ಸಲಕರಣೆಗಳು ನೀರು ಪಾಲಾಗಿದೆ.

ಮರವಂತೆ ಕಡಲ ತೀರದುದ್ದಕ್ಕೂ ಕಡಲ್ಕೊರೆತ ಉಂಟಾಗುತ್ತಲೇ ಇದೆ. ಈ ಹಿಂದೆ ಕಡಲ ಕೊರೆತ ತಡೆಯಲು ನಿರ್ಮಿಸಿದ್ದ ಕಲ್ಲುಗಳು ಈಗಾಗಲೇ ಸಮುದ್ರದ ಪಾಲಾಗಿವೆ. ಕಳೆದ ಒಂದು ವಾರದಿಂದಲೂ ಸುರಿಯುತ್ತಿರುವ ಮಳೆ ಇದೀಗ ಕಡಲ ತೀರದ ವಾಸಿಗಳಿಗೆ ಆತಂಕವನ್ನು ತಂದೊಡ್ಡಿದೆ. ಕಡಲ್ಕೊರೆತ ತಡೆಯುವ ಸಲುವಾಗಿ ಈಗಾಗಲೇ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಮಳೆ ಆರ್ಭಟ ಮುಂದವರಿದಲ್ಲಿ ಸಮುದ್ರ ಕೊರತೆ ಇನ್ನು ಹೆಚ್ಚಾಗಲಿದ್ದು, ನೂರಾರು ಮೀನುಗಾರರ ಮನೆಗಳಿಗೆ ಹಾನಿಯಾಗುವ ಜೊತೆಗೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುವ ಭೀತಿ ಎದುರಾಗಿದೆ.

Kadal koreta in Maravante: People's curse on officials and people's representatives

ಈ ಹಿಂದೆ ತೌಕೆ ಚಂಡಮಾರುತ ಬಂದಾಗ ಇದೇ ಪ್ರದೇಶದಲ್ಲಿ ಭಾರಿಯಾಗಿತ್ತು. ಆಗ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಬಂದು ಆಶ್ವಾಸನೆ ನೀಡಿ ತೆರಳಿದ್ದರು. ಆದರೆ ಕೊಟ್ಟ ಭರವಸೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಇಂದಿಗೂ ಈಡೇರಿಸಿಲ್ಲಾ ಅಂತ ಜನರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಭಾರಿ ಕರಾವಳಿ ಭಾಗದಲ್ಲಿ ರಣ ಭೀಕರ ಮಳೆ ಸುರಿಯುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯ ಆರ್ಭಟ ಹೆಚ್ಚುವ ಸಾಧ್ಯತೆಯಿದೆ. ಜೊತೆಗೆ ಕಡಲು ಅಬ್ಬರಿಸುತ್ತಿರುವುದು ನಿವಾಸಿಗಳನ್ನು ಆತಂಕಕ್ಕೆ ದೂಡಿದೆ.

Kadal koreta in Maravante: People's curse on officials and people's representatives

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ : ಆರೆಂಜ್‌ ಅಲರ್ಟ್‌, ಶಾಲೆ ಮತ್ತು ಕಾಲೇಜುಗಳಿಗೆ ರಜೆ

ಉಡುಪಿ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, ನಾಳೆ ಉಡುಪಿ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿನ ಶಾಲೆ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

Kadal koreta in Maravante: People's curse on officials and people's representatives

ಕಳೆದ ಎರಡು ದಿನಗಳಿಂದಲೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯ ಮೇರೆಗೆ ಉಡುಪಿ ಜಿಲ್ಲೆಯ ಅಂಗನವಾಡಿ, ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮರಾವ್‌ ಎಂ. ಆದೇಶ ಹೊರಡಿಸಿದ್ದಾರೆ. ಅಲ್ಲದೇ ನಾಳೆ ಜಿಲ್ಲೆಯಾದ್ಯಂತ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ.

ಇದನ್ನೂ ಓದಿ : Sarala Vaastu ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಕೊಲೆ ರಹಸ್ಯ ಬಿಚ್ಚಿಟ್ಟ ಕಮಿಷನರ್‌ ಲಾಬೂರಾಂ

ಇದನ್ನೂ ಓದಿ : Heavy Rain Holiday announcement : ಉಡುಪಿ, ದ.ಕ ಸೇರಿ ಕರಾವಳಿ ಮಲೆನಾಡಿನ ಶಾಲೆಗ ಕಾಲೇಜುಗಳಿಗೆ ರಜೆ ಘೋಷಣೆ

Kadal koreta in Maravante: People’s curse on officials and people’s representatives

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular