ಬೆಳಗ್ಗೆ 6 ರಿಂದ 12 ರ‌‌ ವರೆಗೆ ದಿನಸಿಕೊಳ್ಳಲು ಅವಕಾಶ : ಮಾರ್ಗಸೂಚಿ ಪರಿಷ್ಕರಿಸಿದ ರಾಜ್ಯ ಸರಕಾರ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದು, ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಷ್ಕರಿಸಿದೆ.  ವಾರದ ಸಂತೆಯನ್ನು ಸಂಪೂರ್ಣವಾಗಿ ನಿಷೇದಿಸಿದ್ದು, ದಿನಸಿ‌ ಸಾಮಗ್ರಿ ಖರೀದಿಸಲು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯ‌‌ ವರೆಗೂ ಅವಕಾಶ ಕಲ್ಪಿಸಿದೆ.

ಹಾಪ್ ಕಾಮ್ಸ್ ಹಾಗೂ ಹಾಲಿನ ಬೂತ್ ಹಾಗೂ ತಳ್ಳುವ ಗಾಡಿಗಳ ಮೂಲಕ ಹಣ್ಣು ತರಕಾರಿ ಮಾರಾಟವನ್ನು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ಹಾಗೂ ದಿನಸಿ‌ ಸಾಮಾಗ್ರಿಗಳ ಮಾರಾಟಕ್ಕೆ ಹೆಚ್ಚಿನ ಅವಧಿಯನ್ನು ‌ನೀಡಲಾಗಿದೆ.

Comments are closed.