kuppur Swamiji : ಇಂದು ಲಿಂಗೈಕ್ಯ ಕುಪ್ಪೂರು ಶ್ರೀಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಂತ್ಯ ಸಂಸ್ಕಾರ

ತುಮಕೂರು : ಕೊರೊನಾ ವೈರಸ್‌ ಸೋಂಕಿನಿಂದ ಲಿಂಗೈಕ್ಯರಾಗಿರುವ ಕುಪ್ಪೂರು ಗದ್ದುಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಕಳೆದ ಕೆಲವು ದಿನಗಳಿಂದ ಕೊರೊನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ನಿನ್ನೆ ಕರೆದೊಯುತ್ತಿದ್ದ ವೇಳೆಯಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿ ಕೊಂಡು, ನಂತರ ಹೃದಯಾಘಾತದಿಂದ ಮೃತಪಟ್ಟಿದ್ದರು. ಇಂದು ಕುಪ್ಪೂರು ಗ್ರಾಮದ ಮಠದ ಆವರಣದಲ್ಲಿ ವೀರಶೈವ ಧರ್ಮದ ಆಗಮೋಕ್ತ ಸಂಸ್ಕಾರದ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ಎಡೆಯೂರು ಮಠದ ಶ್ರೀರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಯಲಿದೆ. ಅಲ್ಲದೇ ವಿವಿಧ ಮಠಾಧೀಶರು ಅಂತ್ಯಕ್ರೀಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲೀಗ ಕುಪ್ಪೂರು ಮಠದ ಸುತ್ತಮುತ್ತಲೂ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ : ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಇದನ್ನೂ ಓದಿ : ಕಂಡ ಕಂಡಲ್ಲಿ ಅಡ್ಡ ಹಾಕುವಂತಿಲ್ಲ ಸಂಚಾರಿ ಪೊಲೀಸರು : ಏನು ಹೇಳುತ್ತೆ ಗೊತ್ತಾ ಕಾನೂನು ..?

( Yatheeshwara Shivacharya Swamiji Funeral Today At Kuppur matt )

Comments are closed.