ಭಾನುವಾರ, ಜೂನ್ 15, 2025
HomekarnatakaKarnataka Rajyotsava : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ, ಬಾವುಟ ; ಸಂಪೂರ್ಣ ಮಾಹಿತಿ

Karnataka Rajyotsava : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ, ಬಾವುಟ ; ಸಂಪೂರ್ಣ ಮಾಹಿತಿ

- Advertisement -

Karnataka Rajyotsava : ಅಲ್ಲಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಮತ್ತು ನಮ್ಮ ಹೆಮ್ಮೆಯ ಭಾಷೆ ಕನ್ನಡವನ್ನ ಒಂದು ಗೂಡಿಸಿದ ದಿನ ನವೆಂಬರ್‌ 1(Karnataka Rajyotsava). ಪ್ರತಿದಿನ , ಪ್ರತಿನಿಮಿಷ , ಪ್ರತಿ ಕ್ಷಣ ಕೂಡ ಕನ್ನಡದಲ್ಲೇ ಉಸಿರಾಡುವ ಕನ್ನಡಿಗರಿಗೆ ಇದು ಸಂಭ್ರಮದ ಹಬ್ಬ(Karnataka Rajyotsava) . ಇಂದು ನಾವು ಕನ್ನಡಿಗರಲ್ಲರೂ ಸೇರಿ 67 ನೇ ಕನ್ನಡ ರಾಜ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿದ್ದೇವೆ .

ನಮ್ಮ ನಾಡು , ನಮ್ಮ ನುಡಿ , ಇಲ್ಲಿನ ಭಾಷೆ , ಸಂಸ್ಕ್ರತಿ , ಆಚಾರ -ವಿಚಾರ , ಪರಂಪರೆ , ಸಂಪತ್ತು ಇವೆಲ್ಲವುಗಳಿಂದ ಶ್ರೀಮಂತವಾದ ನಾಡು(Karnataka Rajyotsava) ನಮ್ಮದು . ರಾಷ್ಟ್ರಕವಿ ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು ,ಎಂದೆಂದಿಗೂ ನೀ ಕನ್ನಡವಾಗಿರು , ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಎಂಬ ಸುಂದರ ಸಾಲುಗಳನ್ನು ಪ್ರತಿಯೊಬ್ಬ ಕನ್ನಡಿಗನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತಿದ್ದರು ಕೂಡ ಮರೆಯಲು ಸಾಧ್ಯವಿಲ್ಲ . ಅಂತಹ ಶ್ರೀಮಂತ ಭಾಷೆ ಹಾಗೂ ಶ್ರೀಮಂತ ನಾಡು ನಮ್ಮದು. ನಮ್ಮ ಹೆಮ್ಮೆಯ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ ? ಕನ್ನಡ ಬಾವುಟ ಬಂದಿದ್ದು ಹೇಗೆ ? ತಿಳಿಯೋಣ .

ಇದನ್ನೂ ಓದಿ : Kannada Rajyotsava 2022: ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ 8 ರಾಷ್ಟ್ರ ಕವಿಗಳು ಇವರು

ಭಾರತ ಸ್ವಾತಂತ್ರವಾದ ಹಲವು ವರ್ಷಗಳ ನಂತರ , ಮದ್ರಾಸ್‌ , ಮುಂಬೈ, ಹೈದರಾಬಾದ್‌ ಪ್ರದೇಶದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು . ಆ ದಿನವನ್ನೇ ನಾವಿಂದು ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸುತ್ತಿದ್ದೇವೆ .

ಇದನ್ನೂ ಓದಿ : Namma Metro QR Code : ಪ್ರಯಾಣಿಕರಿಗೆ ರಾಜ್ಯೋತ್ಸವ ಕೊಡುಗೆ: ಕ್ಯೂ ಆರ್ ಕೋಡ್ ಜಾರಿಗೆ ತಂದ ನಮ್ಮ ಮೆಟ್ರೋ

ಭಾಷೆಗಳ ಆಧಾರದ ಮೇಲೆ ರಾಜ್ಯವನ್ನು ವಿಂಗಡಿಸಿದ ನಂತರ ಉತ್ತರ ಕರ್ನಾಟಕದ ಜನತೆಗೆ ಮೈಸೂರು ಎಂಬ ಹೆಸರನ್ನು ಉಳಿಸಿಕೊಳ್ಳಲು ಆಸಕ್ತಿ ಇರಲಿಲ್ಲ ಹೀಗಾಗಿ ೧೯೭೩ ರ ನವೆಂಬರ್‌ ೧ ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು . ಕರು ಎಂದರೆ ಕಪ್ಪು , ಕಪ್ಪು ಮಣ್ಣಿನ ನಾಡು ಎಂಬ ಕಾರಣಕ್ಕೆ ಮೈಸೂರು ಪ್ರಾಂತ್ಯವನ್ನು ಕರುನಾಡು ಎಂದು ಕರೆಯಲಾಯಿತು . ಕರುನಾಡು ಎನ್ನುವುದು ಮುಂದೆ ಕರ್ನಾಟಕವಾಯಿತು ಎಂದು ಹೇಳಲಾಗುತ್ತದೆ . ನಮ್ಮ ಹೆಮ್ಮೆಯ ಕನ್ನಡ ನಾಡು ಭಾರತದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6 ನೇ ರಾಜ್ಯವಾಗಿದೆ .

ಇದನ್ನೂ ಓದಿ : Kannada Rajyotsava 2022: ಚೆಲುವ ಕನ್ನಡ ನಾಡನ್ನು ಬಣ್ಣಸಿದ್ದ ಹುಯಿಲಗೋಳ ನಾರಾಯಣರಾವ್ ಅವರ ಬದುಕೇ ಒಂದು ರೋಚಕ..!

ಕರ್ನಾಟಕಕ್ಕೆ ,ಹಾಗೂ ಕನ್ನಡಕ್ಕೆ ಸೌಹಾರ್ದತೆ ಮತ್ತು ಕ್ರಾಂತಿಯ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಬಾವುಟವಿದೆ . ಕನ್ನಡದ ಹೋರಾಟಗಾರರಲ್ಲಿ ಒಬ್ಬರಾದ ರಾಮಮೂರ್ತಿಯವರು ಕನ್ನಡದ ಬಾವುಟವನ್ನು ಸಿದ್ದಪಡಿಸಿದರು . ಮೊದಲು ಬಾವುಟದ ಕೆಂಪು ಮತ್ತು ಹಳದಿ ಬಣ್ಣದ ನಡುವೆ ಏಳು ತೆನಯುಳ್ಳ ಭತ್ತದ ತೆನೆಯನ್ನು ನೀಡಲಾಗಿತ್ತು . ಮುದ್ರಣಕ್ಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಭತ್ತದ ತೆನೆಯ ಚಿತ್ರವನ್ನು ತೆಗೆಯಲಾಯಿತು . ನಾವು ಕನ್ನಡಿಗರು ಶಾಂತಿಗೂ ಸಿದ್ಧ , ಕ್ರಾಂತಿಗೂ ಸಿದ್ಧ ಎಂಬುದನ್ನು ನಮ್ಮ ಕನ್ನಡದ ಬಾವುಟ ಸೂಚಿಸುತ್ತದೆ.

Karnataka Rajyotsava: November 1 (Karnataka Rajyotsava) is the day when the scattered Kannadigas and our proud language Kannada united. This is a festival of celebration (Karnataka Rajyotsava) for Kannadigas who breathe in Kannada every day, every minute, every moment. Today we all Kannadigas are celebrating the 67th Kannada Rajyotsava.

RELATED ARTICLES

Most Popular