ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 3,000 ರೂ. ಪರಿಹಾರ ಧನ ಘೋಷಣೆ ಮಾಡಿದೆ. ಚಾಲಕರು ಇಂದಿನಿಂದ ಪರಿಹಾರ ಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಟ್ಯಾಕ್ಸಿ, ಅಟೋ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಈ ಪರಿಹಾರ ಧನ ಲಭ್ಯವಾಗಲಿದೆ. ಸೇವಾಸಿಂಧು ಪೋರ್ಟಲ್ ನಲ್ಲಿ ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವಾಹನಕ್ಕೆ ಓರ್ವರಿಗೆ ಮಾತ್ರವೇ ಲಾಭ್ಯವಾಗಲಿದೆ. ಮಾಲೀಕರು ಸಮ್ಮತಿಸಿದರೆ ಚಾಲಕರಿಗೆ ಪರಿಹಾರ ಲಭ್ಯವಾಗಲಿದೆ.
ರಾಜ್ಯದ ಸುಮಾರು 2.10 ಲಕ್ಷ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಲಾ 3,000 ರೂ. ಪರಿಹಾರ ಧನ ಲಭ್ಯವಾಗಲಿದೆ. ಮೇ 27 ರಂದು ಬೆಳಗ್ಗೆ 11 ಗಂಟೆಯಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಪರಿಹಾರದ ಮೊತ್ತ ನೇರಕವಾಗಿ ಚಾಲಕರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
Comments are closed.