ಮಂಗಳವಾರ, ಜೂನ್ 17, 2025
Homekarnatakaಪ್ರಪಂಚವನ್ನು ಕಾಡಲಿರುವ ಆಪತ್ತುಗಳು : ಕೋಡಿಮಠದ ಶ್ರೀಗಳಿಂದ ಸ್ಪೋಟಕ ಭವಿಷ್ಯ

ಪ್ರಪಂಚವನ್ನು ಕಾಡಲಿರುವ ಆಪತ್ತುಗಳು : ಕೋಡಿಮಠದ ಶ್ರೀಗಳಿಂದ ಸ್ಪೋಟಕ ಭವಿಷ್ಯ

- Advertisement -

ಬೆಂಗಳೂರು : ವಿಶ್ವವೇ ಕೊರೋನಾ ಕಂಟಕದ ವಿರುದ್ಧ ಹೋರಾಡುತ್ತಿದೆ. ಅದರ ಜೊತೆಯಲ್ಲಿ ದಿನಕ್ಕೊಂದು ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ನೆರೆ, ಪ್ರವಾಹದ ಜೊತೆಗೆ ಉಗ್ರರ ಭಯ ಇಡೀ ವಿಶ್ವವನ್ನೇ ಕಾಡುತ್ತಿದೆ. ಇಂತಹ ಪರಿಸ್ಥಿತಿ ಯಲ್ಲಿ ಕೋಡಿ ಮಠದ ಸ್ವಾಮೀಜಿ ಇನ್ನೊಂದು   ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ.

ಕೋಡಿ ಮಠದ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿಯವ್ರು ರಾಜ್ಯ ರಾಜಕಾರಣ ಮತ್ತು ಬದಲಾಗುತ್ತಿರುವ ವಾತಾವರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ್ದಾರೆ. ಸಿಎಂ ಬೊಮ್ಮಾಯಿ ಅವ್ರನ್ನ ಬೊಂಬಾಯಿ ಎಂದು ಉಲ್ಲೇಖಿಸಿದ ಶ್ರೀಗಳು, ‘ಬೊಂಬಾಯಿ ಬೊಂಬೆಯಾಗಿದ್ದಾರೆ. ಬೊಂಬಾಯಿ ಕುಣಿಯುತ್ತೆ, ಯೋಚನೆಯಿಲ್ಲ‌. ಸೂತ್ರಧಾರಿ ಯಡಿಯೂರಪ್ಪ ಇದ್ದಾರೆ ಸರ್ಕಾರ ನಡೆಸಿಕೊಂಡು ಹೋಗುತ್ತಾರೆ, ಸರ್ಕಾರಕ್ಕೆ ತೊಂದರೆಯಿಲ್ಲ ಎಂದರು.

ಇದನ್ನೂ ಓದಿ: ಗಡಿ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ಕೊಟ್ಟ ಸಿಎಂ ಬೊಮ್ಮಾಯಿ

ಅರಸೀಕೆರೆಯ ಮಾಡಳು ಗ್ರಾಮದಲ್ಲಿ ಭವಿಷ್ಯ ನುಡಿದ ಶ್ರೀಗಳು ಇದು ಹಿಂದೂ ದೇಶ. ಹಿಂದೂ ದೇಶ ಅಂದರೆ ದೈವ, ಧರ್ಮ, ಸತ್ಯ , ನಂಬಿಕೆ ಹಾಗೂ ಸಾಧುಗಳಿರುವ ದೇಶ. ಅಂತಹ ಸಾಧುಗಳು ಬೀದಿಗೆ ಬಂದಾಗ ಇವ್ರು ಅಗೌರವ ಮಾಡಿದ್ರು. ಅಂದ್ಹಾಗೆ, ಅಂದು ಸಾಧುಗಳು ಬಂದಿದ್ದು ಯಡಿಯೂರಪ್ಪರನ್ನ ಉಳಿಸೋಕೆ ಅಲ್ಲ.

ಕೊರೊನಾ ಇದೆ, ಪ್ರವಾಹ ಇದೆ, ವಿಪರೀತ ಮಳೆ ಯಿಂದ ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜನನ್ನ ಬದಲಿಸುವುದು ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು. ಆದ್ರೆ, ಆಡಳಿತ ಪಕ್ಷದವರು ಅದನ್ನ ಧಿಕ್ಕರಿಸಿದ್ರು. ಇರಲಿ, ಆ ಫಲವನ್ನು ಅವ್ರು ಸದ್ಯದಲ್ಲೇ ಉಣ್ಣುತ್ತಾರೆ ಎಂದರು. ಇನ್ನೂ ಅಪಾಯ ತಪ್ಪಿದ್ದಲ್ಲ. ಮಳೆಯಾಗುವ ಲಕ್ಷಣಗಳಿದ್ದು, ಇನ್ನು ಆಪತ್ತುಗಳಿದ್ದಾವೆ. ಅದಲ್ಲದೇ ಕಾರ್ತೀಕದವರೆಗೆ ಭೂಮಿ ನಡುಗುವುದು, ರಾಜಭಯ ಇರಲಿದೆ ಎಂದರು.

ಇದನ್ನೂ ಓದಿ: ನಿಮ್ಮ ಹೆಸರಿನರ್ಥ ಗಣೇಶ್ ಅಂತಾನಾ ? ಹಾಗಿದ್ದರೇ ನಿಮಗೆ ವಂಡರ್ ಲಾ ದಲ್ಲಿದೆ ಪ್ರವೇಶ ಉಚಿತ

ಇನ್ನು ಇದೇ ವೇಳೆ ತಮ್ಮ ಹಿಂದಿನ ಭವಿಷ್ಯದ ಬಗ್ಗೆಯೂ ಉಲ್ಲೇಖಿಸಿದ ಶ್ರೀಗಳು ನಾನು ಒಂದೂವರೆ ವರ್ಷದ ಹಿಂದೆ ಜಗತ್ತಿನ ಭೂಪಟದಲ್ಲಿ ಒಂದು ದೇಶ ಕಾಣೆಯಾಗುತ್ತೆ ಅಂತಾ ಹೇಳಿದ್ದೆ. ಆಫ್ಘಾನಿಸ್ತಾನ ಭೂಪಟದಿಂದ ಕಾಣೆಯಾಗಿದೆ. ಆ ಭಯ ಇಡೀ ಜಗತ್ತಿನಾದ್ಯಂತ ಇದ್ದು, ಆ ಭಯ ಇನ್ನೂ ಹೆಚ್ಚಲಿದೆ ಎಂದರು.

(The perils of haunting the world: The explosive future of the Kodi mata swamiji)
RELATED ARTICLES

Most Popular