ಮಂಗಳವಾರ, ಜೂನ್ 17, 2025
Homekarnatakadonate through e hundi : ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಜಾಗಕ್ಕೆ ಇ ಹುಂಡಿಗಳ...

donate through e hundi : ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಜಾಗಕ್ಕೆ ಇ ಹುಂಡಿಗಳ ಸ್ಥಾಪನೆಗೆ ಮುಂದಾದ ಮುಜರಾಯಿ ಇಲಾಖೆ

- Advertisement -

ಬೆಂಗಳೂರು / ತುಮಕೂರು : ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಭಾರತದಲ್ಲಿ ಡಿಜಿಟಲ್​ ಇಂಡಿಯಾಗೆ (donate through e hundi) ಸಾಕಷ್ಟು ಮಹತ್ವ ನೀಡುತ್ತಿದ್ದಾರೆ. ಅದರಲ್ಲೂ ಕೋವಿಡ್​, ಲಾಕ್​ಡೌನ್​ಗಳ ಬಳಿಕವಂತೂ ಬಹುತೇಕರು ಆನ್​ಲೈನ್​ ಪೇಮೆಂಟ್​ಗಳನ್ನೇ ಅವಲಂಭಿಸಿದ್ದಾರೆ. ಯುಪಿಐ ಪೇಮೆಂಟ್​ಗಳು ಬೇಸಿಕ್​ ಫೋನ್​ಗಳಲ್ಲಿಯೂ ಲಭ್ಯವಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಆನ್​ಲೈನ್​ ಹಣ ವರ್ಗಾವಣೆ ಹೆಚ್ಚಾಗಿ ಬಳಕೆಯಲ್ಲಿದೆ ಎಂದು ವರದಿಗಳು ಹೇಳಿವೆ. ಇದೀಗ ಆನ್​ಲೈನ್​ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಕರ್ನಾಟಕವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ದೇವಸ್ಥಾನದ ಕಾಣಿಕೆ ಹುಂಡಿಗಳ ಜಾಗದಲ್ಲಿಯೂ ಕ್ಯೂ ಆರ್​ ಕೋಡ್​ಗಳನ್ನು ಇಡಲು ಮುಂದಾಗಿವೆ. ರಾಜ್ಯದಲ್ಲೇ ಮೊದಲ ಪ್ರಯೋಗ ಎಂಬಂತೆ ತುಮಕೂರಿನ ಲಕ್ಷ್ಮೀ ನರಸಿಂಹ ಸ್ವಾಮಿ ಬೆಟ್ಟದ ದೇವಾಲಯದಲ್ಲಿ ಕ್ಯೂಆರ್​ ಕೋಡ್​​ ಕಾಣಿಕೆ ಹುಂಡಿಯನ್ನು ಇಡಲಾಗಿದೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮೊಬೈಲ್​ ಫೋನ್​ಗಳ ಬಳಕೆಗೆ ಅನುಮತಿ ನೀಡಲಾಗುವುದಿಲ್ಲ ಆದರೆ ಇದೀಗ ಕ್ಯೂ ಆರ್ ಕೋಡ್​​ಗಳು ಕಾಣಿಕೆ ಹುಂಡಿಯ ಜಾಗವನ್ನು ತುಂಬುತ್ತಿರುವ ಹಿನ್ನೆಲೆಯಲ್ಲಿ ಇನ್ಮೇಲೆ ದೇಗುಲಗಳಲ್ಲಿ ಮೊಬೈಲ್​ ಫೋನ್​ಗಳ ಬಳಕೆಗೆ ಅವಕಾಶ ಸಿಗುವ ಸಾಧ್ಯತೆಯಿದೆ . ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಸಿದ್ಧ ಬೆಟ್ಟದ ದೇವಾಲಯದಲ್ಲಿ ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಎಂಬಂತೆ ಕ್ಯೂ ಆರ್​ ಕೋಡ್​ನ್ನು ಇರಿಸಲಾಗಿದೆ.

ದನ್ನು ಹೊರತುಪಡಿಸಿ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ , ಚಾಮರಾಜನಗರದ ಮಲೆ ಮಹದೇಶ್ವರ ದೇವಸ್ಥಾನಗಳಲ್ಲಿಯೂ ಈ ಪ್ರಾಯೋಗಿಕ ಯೋಜನೆ ಆರಂಭಗೊಂದಿದೆ. ಎಲ್ಲಾ ದೇವಸ್ಥಾನಗಳಲ್ಲಿ ಇ ಹುಂಡಿಗಳ ಅಳವಡಿಕೆ ಚುರುಕುಗೊಳ್ಳಲಿದೆ. ಭಕ್ತರು ಆನ್​ಲೈನ್​ ಮೂಲಕ ದೇಗುಲಗಳಿಗೆ ಪಾವತಿ ಮಾಡಬಹುದು . ಇದರಿಂದ ಕಾಣಿಕೆ ಹುಂಡಿ ಸೋರುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇದನ್ನು ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

ಇದನ್ನೂ ಓದಿ : krishna pandey : 6 ಎಸೆತ 6 ಸಿಕ್ಸ್‌ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್‌ ಸಿಂಗ್‌ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ

now devotees in Karnataka may donate through e hundi

RELATED ARTICLES

Most Popular