ಬೆಂಗಳೂರು / ತುಮಕೂರು : ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಭಾರತದಲ್ಲಿ ಡಿಜಿಟಲ್ ಇಂಡಿಯಾಗೆ (donate through e hundi) ಸಾಕಷ್ಟು ಮಹತ್ವ ನೀಡುತ್ತಿದ್ದಾರೆ. ಅದರಲ್ಲೂ ಕೋವಿಡ್, ಲಾಕ್ಡೌನ್ಗಳ ಬಳಿಕವಂತೂ ಬಹುತೇಕರು ಆನ್ಲೈನ್ ಪೇಮೆಂಟ್ಗಳನ್ನೇ ಅವಲಂಭಿಸಿದ್ದಾರೆ. ಯುಪಿಐ ಪೇಮೆಂಟ್ಗಳು ಬೇಸಿಕ್ ಫೋನ್ಗಳಲ್ಲಿಯೂ ಲಭ್ಯವಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಆನ್ಲೈನ್ ಹಣ ವರ್ಗಾವಣೆ ಹೆಚ್ಚಾಗಿ ಬಳಕೆಯಲ್ಲಿದೆ ಎಂದು ವರದಿಗಳು ಹೇಳಿವೆ. ಇದೀಗ ಆನ್ಲೈನ್ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಕರ್ನಾಟಕವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ದೇವಸ್ಥಾನದ ಕಾಣಿಕೆ ಹುಂಡಿಗಳ ಜಾಗದಲ್ಲಿಯೂ ಕ್ಯೂ ಆರ್ ಕೋಡ್ಗಳನ್ನು ಇಡಲು ಮುಂದಾಗಿವೆ. ರಾಜ್ಯದಲ್ಲೇ ಮೊದಲ ಪ್ರಯೋಗ ಎಂಬಂತೆ ತುಮಕೂರಿನ ಲಕ್ಷ್ಮೀ ನರಸಿಂಹ ಸ್ವಾಮಿ ಬೆಟ್ಟದ ದೇವಾಲಯದಲ್ಲಿ ಕ್ಯೂಆರ್ ಕೋಡ್ ಕಾಣಿಕೆ ಹುಂಡಿಯನ್ನು ಇಡಲಾಗಿದೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ಗಳ ಬಳಕೆಗೆ ಅನುಮತಿ ನೀಡಲಾಗುವುದಿಲ್ಲ ಆದರೆ ಇದೀಗ ಕ್ಯೂ ಆರ್ ಕೋಡ್ಗಳು ಕಾಣಿಕೆ ಹುಂಡಿಯ ಜಾಗವನ್ನು ತುಂಬುತ್ತಿರುವ ಹಿನ್ನೆಲೆಯಲ್ಲಿ ಇನ್ಮೇಲೆ ದೇಗುಲಗಳಲ್ಲಿ ಮೊಬೈಲ್ ಫೋನ್ಗಳ ಬಳಕೆಗೆ ಅವಕಾಶ ಸಿಗುವ ಸಾಧ್ಯತೆಯಿದೆ . ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಸಿದ್ಧ ಬೆಟ್ಟದ ದೇವಾಲಯದಲ್ಲಿ ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಎಂಬಂತೆ ಕ್ಯೂ ಆರ್ ಕೋಡ್ನ್ನು ಇರಿಸಲಾಗಿದೆ.
ದನ್ನು ಹೊರತುಪಡಿಸಿ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ , ಚಾಮರಾಜನಗರದ ಮಲೆ ಮಹದೇಶ್ವರ ದೇವಸ್ಥಾನಗಳಲ್ಲಿಯೂ ಈ ಪ್ರಾಯೋಗಿಕ ಯೋಜನೆ ಆರಂಭಗೊಂದಿದೆ. ಎಲ್ಲಾ ದೇವಸ್ಥಾನಗಳಲ್ಲಿ ಇ ಹುಂಡಿಗಳ ಅಳವಡಿಕೆ ಚುರುಕುಗೊಳ್ಳಲಿದೆ. ಭಕ್ತರು ಆನ್ಲೈನ್ ಮೂಲಕ ದೇಗುಲಗಳಿಗೆ ಪಾವತಿ ಮಾಡಬಹುದು . ಇದರಿಂದ ಕಾಣಿಕೆ ಹುಂಡಿ ಸೋರುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇದನ್ನು ಓದಿ : ಕನ್ನಡಿಗ ಕೆ.ಎಲ್ ರಾಹುಲ್ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್
ಇದನ್ನೂ ಓದಿ : krishna pandey : 6 ಎಸೆತ 6 ಸಿಕ್ಸ್ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ
now devotees in Karnataka may donate through e hundi