Puneet Rajkumar ಪ್ರೇರಣೆ : ಕುಟುಂಬ ಸಮೇತ ನೇತ್ರದಾನಕ್ಕೆ ಮುಂದಾದ ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು : ಕೋವಿಡ್‌-19 ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಜನ ಮೆಚ್ಚುಗೆಯ ಕಾರ್ಯವನ್ನು ಮಾಡುವ ಮೂಲಕ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದರು. ಆದ್ರೀಗ ದೊಡ್ಮನೆ ಮಗ ಪುನೀತ್‌ ರಾಜ್‌ ಕುಮಾರ್‌ ನೇತ್ರದಾನ ಮಾಡಿ ನಾಲ್ವರ ಬದುಕಿಗೆ ಬೆಳಕಾಗುತ್ತಿದ್ದಂತೆಯೇ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಕುಟುಂಬಸ್ಥರೊಂದಿಗೆ ನೇತ್ರದಾನಕ್ಕೆ ಮುಂದಾಗಿದ್ದಾರೆ.

ಶಾಸಕರಾಗಿ, ಸಚಿವರಾಗಿ ಜನ ಮೆಚ್ಚುವ ಕಾರ್ಯಗಳನ್ನೇ ಮಾಡಿಕೊಂಡು ಬರುತ್ತಿರುವ ಎಂ.ಪಿ.ರೇಣುಕಾಚಾರ್ಯ ಸದ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ರೇಣುಕಾಚಾರ್ಯ ಮತ್ತೊಮ್ಮೆ ಜನ ಮೆಚ್ಚುಗೆಯ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: Puneet Rajkumar : ಪುನೀತ್ ಚಿಕಿತ್ಸೆಯಲ್ಲಿ ಲೋಪ ಆರೋಪ: ಡಾ.ರಮಣರಾವ್ ಗೆ ಭದ್ರತೆ ಒದಗಿಸಲು ಫನಾ ಆಗ್ರಹ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಿಧನರಾದ ಸಮಯದಲ್ಲಿ ಪುನೀತ್‌ ತಮ್ಮ ಕಣ್ಣುಗಳನ್ನು ದಾನ ಮಾಡಿ 4 ಜನರ ಬಾಳಿಗೆ ಬೆಳಕಾಗಿದ್ದಾರೆ. ಸತ್ತ ಮೇಲೂ ಕೂಡ ಪುನೀತ್‌ ರಾಜ್‌ ಕುಮಾರ್‌ ಸಾರ್ಥಕತೆ ಮೆರೆದಿದ್ದರು. ಇದರಿಂದ ಪ್ರೇರಣೆಗೊಂಡ ಎಂ.ಪಿ.ರೇಣುಕಾಚಾರ್ಯ ನಾಳೆ ನೇತ್ರದಾನವನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ.

ಎಂ.ಪಿ.ರೇಣುಕಾಚಾರ್ಯ ಅವರ ಅಭಿಮಾನಿಗಳು ದಾವಣಗೆರೆ ತಾಲೂಕಿನ ಹೊನ್ನಾಳಿ ಕೆ ಎಸ್‌ ಆರ‍್ಟಿಸಿ ಬಸ್‌ ನಿಲ್ದಾಣದಲ್ಲಿ ನಾಳೆ ಸಂಜೆ 5 ಗಂಟೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ದಾಂಜಲಿ ಹಾಗೂ ಸಂಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್‌ ಕುಮಾರ್‌ ನಿವಾಸಕ್ಕೆ ಸಿಎಂ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ

ಈ ಕಾರ್ಯಕ್ರಮದ ಸಂದರ್ಭದಲ್ಲಿ ಡಾ|| ರಾಜ್‌ ಕುಮಾರ್‌ ಮತ್ತು ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಗಳು ತಮ್ಮ ನೇತ್ರದಾನ ಮಾಡಲು ತಮ್ಮ ಹೆಸರುಗಳನ್ನು ನೋಂದಾಯಿಸಲು ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ. ಪುನೀತ್‌ ಗೆ ಈ ಕಾರ್ಯಕ್ರಮದಲ್ಲಿ ಸಂಗೀತ ನಮನವನ್ನು ಅರ್ಪಿಸಲಾಗುತ್ತದೆ.

(Puneet Rajkumar motivation: MLA M.P. Renukacharya offers eye donation with family)

Comments are closed.