KSRTC Bus : ಎಬಿವಿಪಿ ಹೋರಾಟಕ್ಕೆ ಜಯ : ಆಜ್ರಿಯಿಂದ ಕುಂದಾಪುರಕ್ಕೆ ಹೊಸ ಬಸ್

ಬಸ್‌ ಸೌಕರ್ಯಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ABVP) ನ ಹೋರಾಟಕ್ಕೆ ಕೊನೆಗೂ ಮೊದಲ ಗೆಲುವು ಸಿಕ್ಕಿದೆ. ಉಡುಪಿ (udupi)  ಜಿಲ್ಲೆಯ ಗ್ರಾಮೀಣ ಭಾಗವಾಗಿರುವ ಆಜ್ರಿಯಿಂದ ಕುಂದಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ (KSRTC BUS) ಸಂಚಾರ ಇಂದಿನಿಂದ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮೂಡಿದೆ.

KSRTC Bus :  ಕುಂದಾಪುರ : ಬಸ್‌ ಸೌಕರ್ಯಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ABVP) ನ ಹೋರಾಟಕ್ಕೆ ಕೊನೆಗೂ ಮೊದಲ ಗೆಲುವು ಸಿಕ್ಕಿದೆ. ಉಡುಪಿ (udupi)  ಜಿಲ್ಲೆಯ ಗ್ರಾಮೀಣ ಭಾಗವಾಗಿರುವ ಆಜ್ರಿಯಿಂದ ಕುಂದಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ (KSRTC BUS) ಸಂಚಾರ ಇಂದಿನಿಂದ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮೂಡಿದೆ.

Udupi News Victory for ABVP Protest New KSRTC bus from Ajri to Kundapura
Image Credit : News Next Kannada

ಬಸ್‌ ಸೌಕರ್ಯಗಳಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಇದರ ನೇತೃತ್ವದಲ್ಲಿ ಕುಂದಾಪುರದ ಶಾಸ್ತ್ರೀ ಪಾರ್ಕ್‌ ಬಳಿ ಐದು ದಿನಗಳ ಹಿಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆಯಲ್ಲಿ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್‌ ಸೌಕರ್ಯ ಒದಗಿಸಿದ್ದಾರೆ.

ಈಗಾಗಲೇ ಆಜ್ರಿಯಿಂದ ನೇರಳಕಟ್ಟೆ ತಲ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಬಸ್‌ ಸಂಚಾರ ನಡೆಯುತ್ತಿದೆ. ಈ ಬಸ್‌ ಸಂಚಾರದಿಂದಾಗಿ ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಕೂಡ ಅನುಕೂಲವಾಗಲಿದೆ. ಅನೇಕ ಸಮಯದಿಂದ ಈ ಮಾರ್ಗಕ್ಕೆ ಬಸ್ ನ ಬೇಡಿಕೆ ಇದ್ದರೂ ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಮನವಿ ಸಲ್ಲಿಸಿದರೂ ಸಮರ್ಪಕ ಬಸ್ ವ್ಯವಸ್ಥೆ ಮಾಡದ ಅಧಿಕಾರಿಗಳು ಹೋರಾಟ ನಡೆಸಿದ ಐದು ದಿನಗಳ ಒಳಗೆ ಬಸ್ ಬಿಟ್ಟಿರುವುದು ವಿದ್ಯಾರ್ಥಿಗಳ ತಾಕತ್ತು ತೋರಿಸಿದೆ.

ಇದನ್ನೂ ಓದಿ : KSRTC Bus Problems : ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ : ಕುಂದಾಪುರದಲ್ಲಿ ಎಬಿವಿಪಿ ಪ್ರತಿಭಟನೆ

ಕುಂದಾಪುರದಿಂದ ಸುಮಾರು 15ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ವ್ಯವಸ್ಥೆ ಮಾಡುವ ಬೇಡಿಕೆಯನ್ನು ವಿದ್ಯಾರ್ಥಿಗಳು ಮುಂದಿಟ್ಟಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಈ ಎಲ್ಲಾ ಮಾರ್ಗಗಳಲ್ಲಿ ಬಸ್‌ ಸಂಚಾರದ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿದ್ದು. ಬೇಡಿಕೆ ಈಡೇರಿಕೆ ಆಗದೇ ಇದ್ರೆ ಮತ್ತೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

Udupi News Victory for ABVP Protest New KSRTC bus from Ajri to Kundapura
Image Credit : News Next Kannada

ಇದನ್ನೂ ಓದಿ : ರಾಜ್ಯ ಸರ್ಕಾರ, ಬಿಬಿಎಂಪಿಯ ಮತ್ತೊಂದು ಎಡವಟ್ಟು: ಶಿಕ್ಷಕರ ಆಯ್ಕೆ ಹೊಣೆ ಸೆಕ್ಯೂರಿಟಿ ಏಜೆನ್ಸಿಗೆ

ವಿದ್ಯಾರ್ಥಿಗಳ ಬೇಡಿಕೆ ಇರುವ ಮಾರ್ಗಗಳು :

  • ಕುಂದಾಪುರ – ಹೆಮ್ಮಾಡಿ- ವಂಡ್ಸೆ – ಕೊಲ್ಲೂರು – ಬೈಂದೂರು ಮಾರ್ಗ
  • ಕುಂದಾಪುರ – ಉದಯ ನಗರ
  • ಕುಂದಾಪುರ- ಆಜ್ರಿ- ಸಿದ್ದಾಪುರ- ಉಡುಪಿ
  • ಕುಂದಾಪುರ ಸಿದ್ದಾಪುರ- ಹೊಸಂಗಡಿ
  • ಕುಂದಾಪುರ – ಗಂಗೊಳ್ಳಿ
  • ಕುಂದಾಪುರ – ಮಲ್ಲಿಕಟ್ಟೆ – ನೂಜಾಡಿ ಕುಂದಾಪುರ – ಮಾವಿನ ಕಟ್ಟೆ – ಗುಲ್ವಾಡಿ – ಕೊಲ್ಲೂರು – ಬೈಂದೂರು ಮಾರ್ಗ
  • ಕುಂದಾಪುರ – ಮೂಡುಬಗೆ- ಆಜ್ರಿ – ಕಮಲಶಿಲೆ
  • ಕುಂದಾಪುರ – ಆಜ್ರಿ – ಸಿದ್ದಾಪುರ
  • ಕುಂದಾಪುರ – ಬೆಳ್ಳಾಲ- ಮೋರ್ಟ – ಕೆರಾಡಿ
  • ಕುಂದಾಪುರ – ಗಿಳಿಯಾರು – ಹೆಸ್ಕತ್ತೂರು
  • ಕುಂದಾಪುರ – ಮಾರಣಕಟ್ಟೆ – ಹಾಲಾಡಿ
  • ಕುಂದಾಪುರ – ಬೈಂದೂರು ಡಿಗ್ರಿ ಕಾಲೇಜು
  • ಕುಂದಾಪುರ – ವಾಲ್ಲೂರು – ಕೊಲ್ಲೂರು
  • ಕುಂದಾಪುರ – ಅರೆಹೊಳೆ – ಯರುಕೋಣೆ – ಕೊಲ್ಲೂರು – ಬೈಂದೂರು- ಗಂಟಿಹೊಳೆ – ಬೋಳಂಬಳ್ಳಿ
  • ಕುಂದಾಪುರ- ಅಮಾಸೆಬೈಲು – ತೊಂಬಟ್ಟು
  • ಕುಂದಾಪುರ – ನೇರಳೆಕಟ್ಟೆ – ಅಂಪಾರು- ಹಾಲಾಡಿ -ಚೋರಾಡಿ- ಕರ್ಕುಂಜೆ- ಉಡುಪಿ
  • ಕುಂದಾಪುರ – ಆಲೂರು ಹಾಗೂ ಕುಂದಾಪುರ – ಪಡುಕೋಣೆ ಮಾರ್ಗ

ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

Udupi News Victory for ABVP Protest New KSRTC bus from Ajri to Kundapura

 

 

Comments are closed.