ಬುಧವಾರ, ಜೂನ್ 18, 2025
HomeCoastal Newsಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ ಎದುರಾಯ್ತು ಧಾರ್ಮಿಕ ಸಂಘರ್ಷ

ಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ ಎದುರಾಯ್ತು ಧಾರ್ಮಿಕ ಸಂಘರ್ಷ

- Advertisement -

ಮಂಗಳೂರು : (Kadri Jogi Math) ದಕ್ಷಿಣ ಭಾರತದಲ್ಲಿರುವ ನಾಥ ಪಂಥದ ಪ್ರಮುಖ ಕೇಂದ್ರ ಮಂಗಳೂರಿನ ಕದ್ರಿ ಶ್ರೀ ಜೋಗಿ ಮಠ. ಕರಾವಳಿ ಭಾಗದ ಜೋಗಿ ಸಮುದಾಯದ ಮಂದಿ ಈ ಮಠದ ಶಿಷ್ಯರಾಗಿ ಹಿಂದಿನಿಂದಲೂ ಗುರುತಿಸಿಕೊಂಡು ಬಂದಿದ್ದು, ನಾಥ ಪಂಥದ ಅನುಯಾಯಿಗಳಾದ ಜೋಗಿ ಸಮುದಾಯಕ್ಕೂ ಮಠದ ಪೀಠಾದೀಶರಿಗೂ ಇದೀಗ ಧಾರ್ಮಿಕ ಸಂಘರ್ಷಗಳು ಏರ್ಪಟ್ಟಿದೆ. ಫೆಬ್ರವರಿ ತಿಂಗಳಲ್ಲಿ ನಡೆದ ಕಾಳಭೈರವ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭ ಮಠದ ಪೀಠಾಧಿಪತಿ ಎರಡು ಸಾವಿರ ವರ್ಷಗಳ ಹಿಂದಿನ ಕಾಲಭೈರವ ದೇವರ ವಿಗ್ರಹ ತೆಗೆದು ಹೊಸದಾದ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಇದೀಗ ಅದೇ ವಿಚಾರ ಧಾರ್ಮಿಕ ಸಂಘರ್ಷಕ್ಕೆ ಮೂಲ ಕಾರಣವಾಗಿ ಮಾರ್ಪಟ್ಟಿದೆ.

ನಾಥ ಪಂಥಕ್ಕೆ ಸೇರಿದ್ದ ಅತೀ ಪುರಾತನವಾದ ಹಾಗೂ ರಾಜನ ಹೆಸರಿನಲ್ಲಿ ಪೀಠಾಧಿಪತಿಯನ್ನು ಅಭಿನಂದಿಸುವ ಕದ್ರಿ ಜೋಗಿ ಮಠದಲ್ಲಿ ಇದೀಗ ಮಠಾಧೀಶರು ಹಾಗೂ ಶಿಷ್ಯ ವರ್ಗದ ನಡುವೆ ಧಾರ್ಮಿಕ ಸಂಘರ್ಷ ಏರ್ಪಟ್ಟಿದೆ. ಎರಡು ಸಾವಿರ ವರ್ಷಕ್ಕೂ ಹಿಂದಿನ ದೇವರ ವಿಗ್ರಹವನ್ನು ತೆಗೆದು, ನೂತನ ಮೂರ್ತಿ ಪ್ರತಿಷ್ಠೆ ಮಾಡಿರುವುದು ಮತ್ತು ಶಿಷ್ಯ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಈ ಸಂಘರ್ಷಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸದ್ಯ ಈಗ ಇರುವ ಮಠಾಧೀಶ ರಾಜಸ್ಥಾನ ಮೂಲದವರಾದ್ದರಿಂದ ಮಂಗಳೂರಿನಲ್ಲಿ ವ್ಯಾಪಾರ ನಡೆಸುವ ರಾಜಸ್ಥಾನದ ಮಾರ್ವಾಡಿಗಳು ಹಣಬಲದ ಮೂಲಕ ಪೂರ್ತಿ ಮಠವನ್ನು ತಮ್ಮ ಪಾರುಪತ್ಯಕ್ಕೆ ವಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೋಗಿ ಸಮುದಾಯದ ಮಂದಿ ಆರೋಪಿಸಿದ್ದಾರೆ.

ಪ್ರತಿ 12 ವರ್ಷಕ್ಕೊಮ್ಮೆ ಕದ್ರಿ ಯೋಗೀಶ್ವರ ಮಠಕ್ಕೆ ಮಠಾಧೀಶರ ಆಯ್ಕೆ ಮಾಡುವ ಹೊಣೆಗಾರಿಕೆ ಗೋರಖ್‌ಪುರ ಮಠದ ಮಠಾಧೀಶರದ್ದು. ಪ್ರಸ್ತುತ ಗೋರಖ್‌ಪುರ ಮಠದ ಮಠಾಧೀಶರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ 2016ರಲ್ಲಿ ಈ ಮಠದ ಮಠಾದೀಶರನ್ನು ಆಯ್ಕೆ ಮಾಡಿದ್ದರು. ಆದರೆ 2016ರಲ್ಲಿ ನೇಮಕಗೊಂಡ ಪೀಠಾಧಿಪತಿ ರಾಜಸ್ಥಾನ ಮೂಲದ ನಿರ್ಮಲಾನಾಥಜೀ ಮಠದ ಶಿಷ್ಯ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಆರೋಪಿಸಿದೆ.

ಇದನ್ನೂ ಓದಿ : ನಂದಿನಿ vs ಅಮುಲ್‌ ರಣರಂಗ : ಅಮುಲ್‌ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಸಂಸ್ಥೆಗಳಿಗೆ ಎಚ್ಚರಿಕೆ

ಕರಾವಳಿಯಲ್ಲಿನ ಜೋಗಿ ಸಮುದಾಯದ ಮಂದಿ ಹಣವನ್ನೆಲ್ಲಾ ಒಟ್ಟು ಮಾಡಿ ದೇವಳದಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಆದ್ರೆ ಇದೀಗ ಇದಕ್ಕೂ ಅಡ್ಡಿಪಡಿಸುತ್ತಿರುವ ಆರೋಪ ಕೇಳಿಬಂದಿದೆ. ಯೋಗಿ ಆದಿತ್ಯನಾಥರ ಗುರುಗಳು ಸೇರಿದಂತೆ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದ ಕಾಳಭೈರವ ದೇವರ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು. ಇದರ ಜೊತೆಗೆ ಮಠದಲ್ಲಿ ನಮಗೂ ಅವಕಾಶ ನೀಡಬೇಕು ಎಂದು ಶಿಷ್ಯ ವರ್ಗದವರು ಆಗ್ರಹಿಸಿದ್ದು, ಸಂಘರ್ಷದ ಬಗ್ಗೆ ಶಿಷ್ಯ ವರ್ಗ ಮೂಲ ಪೀಠದ ಗಮನಕ್ಕೆ ತಂದಿದೆ. ಇದರ ಜೊತೆ ಮಠಕ್ಕೂ ಜೋಗಿ ಸಮಾಜಕ್ಕೂ ಇರುವ ಸಂಬಂಧದ ಬಗ್ಗೆ ದಾಖಲಾತಿಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದೆ.

Kadri Jogi Math: Religious conflict in Kadri Jogi Math, Mangalore

RELATED ARTICLES

Most Popular