ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 21-06-2020

ನಿತ್ಯಭವಿಷ್ಯ : 21-06-2020

- Advertisement -

ಮೇಷರಾಶಿ
ಆರ್ಥಿಕ ವಿಚಾರದಲ್ಲಿ ಆಗಾಗ ಪರಿಸ್ಥಿತಿಯು ಆತಂಕಕ್ಕೆ ಕಾರಣವಾದೀತು. ರಾಜಕೀಯ ವರ್ಗದವರಿಗೆ ಗೊಂದಲದ ಸ್ಥಿತಿಯು ಕಂಡುಬರಲಿದೆ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಕಾಣಿಸಲಿದೆ. ತಾಳ್ಮೆ ಅಗತ್ಯವಿದೆ.ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ನಿಂದನೆ, ಶತ್ರುಗಳ ಬಾಧೆ, ನಂಬಿಕಸ್ಥರಿಂದ ದ್ರೋಹ, ಮಹಿಳೆಯರಿಗೆ ತೊಂದರೆ, ಶೀತ ಸಂಬಂಧಿತ ರೋಗ.

ವೃಷಭರಾಶಿ
ಉದ್ಯೋಗ, ವ್ಯವಹಾರದಲ್ಲಿ, ವಾಹನ ಸಂಚಾರದಲ್ಲಿ ಹೆಚ್ಚಿನ ಗಮನವಿರಲಿ. ಹಿರಿಯರಿಂದ ಬೆಂಬಲ, ಹಣಕಾಸು ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ. ಸುಳ್ಳು ಆಪಾದನೆಗೆ ಗುರಿಯಾಗುವ ಸಂಭವವಿದೆ. ಸಾಮಾಜಿಕ ರಂಗದಲ್ಲಿ ಸ್ಥಾನಮಾನ, ಗೌರವವು ಪ್ರಾಪ್ತಿಯಾಗಲಿದೆ. ಉತ್ತಮ ಆರೋಗ್ಯ.

ಮಿಥುನರಾಶಿ
ಆರೋಗ್ಯದಲ್ಲಿ ತೊಂದರೆ ಕಾಣಿಸಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯವಿದೆ. ಮಾನಸಿಕ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಹಿನ್ನಡೆ, ಕೆಟ್ಟ ದೃಷ್ಠಿ ಬೀಳುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯರ್ಥ ತಿರುಗಾಟ, ಅತಿಯಾದ ಭಯ, ಸ್ಥಳ ಬದಲಾವಣೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸಕಾಲವಲ್ಲ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು.

ಕಟಕರಾಶಿ
ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಕಂಕಣ ಬಲಕ್ಕೆ ಸಾಧಕವಾಗಲಿವೆ. ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಸಾಧಾರಣ ಲಾಭ, ಆರೋಗ್ಯದಲ್ಲಿ ಸಮಸ್ಯೆ, ಋಣ ಬಾಧೆ, ಯತ್ನ ಕಾರ್ಯದಲ್ಲಿ ವಿಘ್ನ, ಮಿತ್ರರಲ್ಲಿ ದ್ವೇಷ, ಸಾಲ ಬಾಧೆ, ಶತ್ರುಬಾಧೆ. ವೃತ್ತಿರಂಗದಲ್ಲಿ ಸಹೋ ದ್ಯೋಗಿಗಳು ಸಹಕಾರ ನೀಡಲಿದ್ದಾರೆ ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ದಿನಾಂತ್ಯ ಶುಭವಿದೆ.

ಸಿಂಹರಾಶಿ
ದೈವಬಲ ಉತ್ತಮವಿದ್ದಲ್ಲಿ ಸಕಲ ಕೆಲಸ ಕಾರ್ಯಗಳಿಗೆ ಉತ್ತಮ ಸಮಯ. ಆರ್ಥಿಕವಾಗಿ ಋಣಬಾಧೆ ನಿವಾರಣೆಯಾಗಿ ಸಮಾಧಾನ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಸಂತಸದ ವಾತಾವರಣ, ಆತ್ಮೀಯರಿಂದ ಸಹಾಯ ಲಭಿಸುವುದು, ಪರಿಶ್ರಮಕ್ಕೆ ತಕ್ಕ ಪಲ, ವಿವಾದಗಳಿಗೆ ಆಸ್ಪದಕೊಡಬೇಡಿ, ವ್ಯವಹಾರದಲ್ಲಿ ಉತ್ತಮ. ಯಾವುದೇ ಸಮಸ್ಯೆಗಳನ್ನು ನೀವೇ ಬಗೆಹರಿಸುವುದು ಅಗತ್ಯವಿರುತ್ತದೆ.

ಕನ್ಯಾರಾಶಿ
ಪ್ರೀತಿ ಪಾತ್ರರ ಭೇಟಿ, ಅಧಿಕವಾದ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸಣ್ಣ ಮಾತಿನಿಂದ ಕಲಹ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ. ಆರ್ಥಿಕ ಸಂಕಟಗಳು ನಿರಂತರವಾಗಿ ಕಾಡಲಿವೆ. ದಾಂಪತ್ಯ ಜೀವನದಲ್ಲಿ ಅಡೆತಡೆಗಳಿಂದ ಏರುಪೇರಾಗಲಿದೆ. ಧರ್ಮಸಮ್ಮತವಲ್ಲದ ಕಾರ್ಯಗಳಲ್ಲಿ ಆಸಕ್ತಿ ವಹಿಸಿ ಸಮಸ್ಯೆಯನ್ನು ತಾವೇ ಅನುಭವಿಸುವಂತಾಗಲಿದೆ.

ತುಲಾರಾಶಿ
ಮೋಸ ಹೋಗುವ ಸಂದರ್ಭ ಇರುವುದರಿಂದ ಜಾಗ್ರತೆಯಿಂದ ವ್ಯವಹರಿಸಿರಿ. ದುಂದು ವೆಚ್ಚಗಳಿಗೆ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಕೃಷಿಯಲ್ಲಿ ಲಾಭ, ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭ್ಯ, ಜಮೀನು ವಿವಾದ ಇತ್ಯರ್ಥ, ಮನಸ್ಸಿಗೆ ಕಿರಿಕಿರಿ. ಹಿತಶತ್ರುಗಳ ಕಾಟವು ತಪ್ಪಿದ್ದಲ್ಲಾ. ಪ್ರೇಮ ಪ್ರಕರಣಗಳಲ್ಲಿ ಹೆಚ್ಚಿನವರ ವಿರೋಧ ಕಂಡುಬರುವುದು. ಆರೋಗ್ಯದಲ್ಲಿ ಜಾಗ್ರತೆ ಇರಲಿ.

ವೃಶ್ಚಿಕರಾಶಿ
ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ, ಸುಖ ಶಾಂತಿಯನ್ನು ನೀಡಲಿದೆ. ಹೊಸ ಅವಕಾಶಗಳು ಕೈ ತಪ್ಪುವುದು, ಬಂಧು ಮಿತ್ರಿಂದ ಅಪನಿಂದನೆ, ಸಾಧಾರಣ ಪ್ರಗತಿ, ಆದಾಯಕ್ಕಿಂತ ಖರ್ಚು ಹೆಚ್ಚು, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ಅಮೂಲ್ಯ ವಸ್ತುಗಳ ಖರೀದಿಗೆ ಹಣವ್ಯಯ. ನಿಂತು ಹೋದ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ಕೋರ್ಟು ಕಚೇರಿ ಕೆಲಸ ಕಾರ್ಯಗಳು ಮುನ್ನಡೆ ತೋರಿಬಂದು ಹರುಷವಾಗಲಿದೆ.

ಧನುರಾಶಿ
ಮನಸ್ಸನ್ನು ಏಕಾಗ್ರತೆಗೊಳಿಸುವುದರಿಂದ ನಿಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರವು ಸಿಗಲಿದೆ. ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿಪರೀತ ಹಣವ್ಯಯ, ಮಾತಿನ ಮೇಲೆ ಹಿಡಿತ ಅಗತ್ಯ, ಎಲ್ಲರ ಮನಸ್ಸು ಗೆಲ್ಲುವಿರಿ, ಆಲಸ್ಯ ಮನೋಭಾವ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ಧಿಯ ಮುನ್ನಡೆ ಇದೆ.

ಮಕರರಾಶಿ
ಯಾವುದೇ ಕೆಲಸ ಕಾರ್ಯಗಳು ನಿರೀಕ್ಷಿಸಿದಂತೆ ಕಾರ್ಯಸಾಧನೆಯಾಗದು. ಹಿತ ಶತ್ರುಗಳ ಬಾಧೆ, ಆರೋಗ್ಯದಲ್ಲಿ ಚೇತರಿಕೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಸ್ನೇಹಿತರಿಂದ ಉತ್ತಮ ಸಲಹೆ, ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ವ್ಯಥೆ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಪಶುವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಅತ್ಯಂತ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು.

ಕುಂಭರಾಶಿ
ಸರಕಾರೀ ಕೆಲಸ ಕಾರ್ಯಗಳು ವಿಳಂಬ ಗತಿಯನ್ನು ಪಡೆದಾವು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಚೋರ ಭಯ, ಆಕಸ್ಮಿಕ ನಷ್ಟ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ವಿದ್ಯಾರ್ಥಿಗಳಿಗೆ ಅನುಕೂಲ, ಶತ್ರುಗಳ ಬಾಧೆ, ತಾಳ್ಮೆ ಅತ್ಯಗತ್ಯ. ಅನಗತ್ಯ ಪ್ರಯಾಣದಿಂದ ಧನವ್ಯಯವಾಗಲಿದೆ. ದುಡುಕು ನಿರ್ಧಾರ ಕಾರ್ಯಾಚರಣೆಗೆ ಭಂಗ ತಂದೀತು. ಹೆಚ್ಚಿನ ವಿಚಾರದಲ್ಲಿ ತಟಸ್ಥ ಧೋರಣೆ ಇರಲಿ.

ಮೀನರಾಶಿ
ಹಿರಿಯರಿಂದ, ಆತ್ಮೀಯರಿಂದ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ಪಡೆಯಲಿದ್ದೀರಿ. ಪರರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಮಿತ್ರರಲ್ಲಿ ದ್ವೇಷ, ವ್ಯಾಸಂಗಕ್ಕೆ ತೊಂದರೆ. ಕೌಟುಂಬಿಕವಾಗಿ ಹೊಸಬರ ಆಗಮನವು ಸಂತಸ ತಂದೀತು. ಮನೆಯಲ್ಲಿ ಶುಭ ಕಾರ್ಯದ ಚಿಂತನೆಗೆ ಚಾಲನೆ ದೊರಕೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular