ಮಂಗಳವಾರ, ಜೂನ್ 17, 2025
HomeBreakingಎಲೆಕ್ಷನ್ ನಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದ ಸೂಪರ್ ಸ್ಟಾರ್…! ಅಭಿಮಾನಿಗಳಿಗೆ ಶಾಕ್…!!

ಎಲೆಕ್ಷನ್ ನಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದ ಸೂಪರ್ ಸ್ಟಾರ್…! ಅಭಿಮಾನಿಗಳಿಗೆ ಶಾಕ್…!!

- Advertisement -

ತಮಿಳುನಾಡು: ಸಿನಿಮಾ ರಂಗದ ಬಳಿಕ ರಾಜಕೀಯ ಅನ್ನೋದು ಭಾರತದಲ್ಲಿ ಕಾಮನ್ ಸಂಗತಿ. ಇದಕ್ಕೆ ಬಾಲಿವುಡ್,ಟಾಲಿವುಡ್,ಸ್ಯಾಂಡಲ್ವುಡ್, ಕಾಲಿವುಡ್ ಹೀಗೆ ಎಲ್ಲ ಸಿನಿಮಾ ರಂಗದಲ್ಲೂ ಬೇಕಷ್ಟು ಉದಾಹರಣೆ ಇದೆ. ಆದರೆ ತಮಿಳು ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಮಾತ್ರ ನಿರಾಸೆ ಎದುರಾಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗುವ ಭರವಸೆ ನೀಡಿದ್ದ ಸೂಪರ್ ಸ್ಟಾರ್ ಎಲೆಕ್ಷನ್ ನಿಂದ ದೂರ ಉಳಿಯುವ ಶಾಕಿಂಗ್ ನಿರ್ಧಾರ ಪ್ರಕಟಿಸಿದ್ದಾರೆ.

Alvas1

ಹೌದು ತಮಿಳುನಾಡು ರಾಜಕೀಯಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದ ಸೂಪರ್ ಸ್ಟಾರ್ ರಜನಿಕಾಂತ್, ತಮ್ಮ ಮಕ್ಕಳ ಮಂಡ್ರ್ ಪಕ್ಷದ ಜೊತೆ ಸಕ್ರಿಯ ರಾಜಕಾರಣ ಅಂಗಳಕ್ಕೆ ಧುಮುಕುವ ಭರವಸೆ ನೀಡಿದ್ದರು. ಆದರೆ ಇನ್ನೇನು ಕೆಲ ತಿಂಗಳಿನಲ್ಲೇ ತಮಿಳುನಾಡಿದ ವಿಧಾಸನಭಾ ಚುನಾವಣೆ ನಡೆಯಲಿರುವ ವೇಳೆಯಲ್ಲಿ ತಮ್ಮ ನಿಲುವು ಬದಲಾಯಿಸಿದ್ದು, ಚುನಾವಣೆ ಹಾಗೂ ಸಕ್ರಿಯ ರಾಜಕಾರಣದಿಂದ ದೂರ ನಿಲ್ಲಲು ನಿರ್ಧರಿಸಿದ್ದಾರೆ.

863447 77946 Fgztaolmki 1514810703

2021 ರ ಮೇ ನಲ್ಲಿ ತಮಿಳುನಾಡಿನ ವಿಧಾನಸಭೆಯ 234 ಶಾಸಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಈಗಾಗಲೇ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿವೆ. ಆದರೆ ಈ ವೇಳೆಯಲ್ಲೇ ಸೂಪರ್ ಸ್ಟಾರ್ ನ್ಯೂಟ್ರಲ್ ನಿರ್ಧಾರ ಅಭಿಮಾನಿಗಳಿಗೆ ಆಘಾತ ತಂದಿದೆ.

Maxresdefault 1

ಮೂಲಗಳ ಮಾಹಿತಿ ಪ್ರಕಾರ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈ ನಿರ್ಧಾರವನ್ನು ಅನಿವಾರ್ಯವಾಗಿ ಕೈಗೊಂಡಿದ್ದಾರಂತೆ. ಕೆಲತಿಂಗಳಿನಿಂದ ರಜನಿಕಾಂತ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ಯಾವುದೇ ರೀತಿಯ ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಗೆ ವಹಿಸಬೇಕೆಂದು ಸೂಚಿಸಿದ್ದಾರೆ.

Rajinikanth BabaSign FileImage 291020 1200 PTI

ಕೊರೋನಾದ   ಈ ಸಂದರ್ಭದಲ್ಲಿ ಸಕ್ರಿಯ ರಾಜಕಾರಣದಿಂದ ಹೊರಗಡೆ ಓಡಾಡಬೇಕಾದ ಸ್ಥಿತಿ ಎದುರಾಗಲಿದ್ದು, ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರೋದರಿಂದ ರಜನಿಕಾಂತ್ ತಮ್ಮ ರಾಜಕಾರಣದ ಕನಸಿಗೆ ತಿಲಾಂಜಲಿ ಇಟ್ಟಿದ್ದಾರೆ. ಇದರಿಂದ ಸೂಪರ್ ಸ್ಟಾರ್ ರಜನಿಕಾಂತ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ.

RELATED ARTICLES

Most Popular