ಸೋಮವಾರ, ಜೂನ್ 16, 2025
HomeCinemaಮುನಿರತ್ನಗೇ ವರವಾದ್ರಾ ದರ್ಶನ್…?! ಚಾಲೆಂಜಿಂಗ್ ಸ್ಟಾರ್ ಪ್ರಚಾರಕ್ಕೆ ಮನಸೋತ ಮತದಾರರು…!!

ಮುನಿರತ್ನಗೇ ವರವಾದ್ರಾ ದರ್ಶನ್…?! ಚಾಲೆಂಜಿಂಗ್ ಸ್ಟಾರ್ ಪ್ರಚಾರಕ್ಕೆ ಮನಸೋತ ಮತದಾರರು…!!

- Advertisement -
Namami Shankara 2

ಬೆಂಗಳೂರು: ಆರ್‌ಆರ್ ನಗರ ಉಪ ಚುನಾವಣೆ ಪ್ರಕ್ರಿಯೆ ಬಿಜೆಪಿ ಗೆಲುವಿನೊಂದಿಗೆ ಮುಕ್ತಾಯಗೊಂಡಿದ್ದು, ಹಿಂದೆಂದೂ ಪಡೆಯದಷ್ಟು ಮತಗಳೊಂದಿಗೆ ಬಿಜೆಪಿ ಗೆಲುವಿನ ನಗೆ ಬೀರಿದೆ‌.

Dc Cover 26mc3o51hbnqlflrvn6710nr24 20180601043707.Medi 1

ಸ್ವತಃ ಬಿಜೆಪಿಯೇ ಅಚ್ಚರಿ ಪಡುವಷ್ಟು ಮತವನ್ನು ಕಮಲಪಾಳಯ ಪಡೆದುಕೊಂಡಿದ್ದು, ಕಾಂಗ್ರೆಸ್ ಬಿಜೆಪಿಗೆ ಇಷ್ಟು ಮತ ಬಿದ್ದಿದ್ದಾರೂ ಹೇಗೆ ಎಂಬುದನ್ನು ಹುಡುಕುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದೆ.
ಈ ಮಧ್ಯೆ ಮುನಿರತ್ನ ಪಾಲಿಗೆ ಗೆಲುವು ಇಷ್ಟು ಸಲೀಸಾಗಲೂ ಕಾರಣ ಏನೆಂದು ಹುಡುಕಲು ಹೊರಟವರಿಗೆ ಇದು ಯಜಮಾನನ ಮಹಿಮೆ ಎಂಬ ಉತ್ತರ ದಕ್ಕಿದೆ.

(adsbygoogle = window.adsbygoogle || []).push({});
DARShan 2

ಚಾಲೆಂಜಿಂಗ್ ಸ್ಟಾರ್ ಚುನಾವಣಾ ಅಭ್ಯರ್ಥಿಗಳಿಗೆ ಲಕ್ಕಿ ಎನ್ನೋ ಮಾತು ಚುನಾವಣಾ ಅಂಗಳ ದಿಂದ ಕೇಳಿ ಬಂದಿದೆ. ಈ ಹಿಂದೆ ಮುನಿರತ್ನ ಕಾಂಗ್ರೆಸ್ ನಲ್ಲಿದ್ದಾಗಲೂ ಮುನಿರತ್ನ ಪರ ದರ್ಶನ್ ಪ್ರಚಾರ ನಡೆಸಿದ್ದರು. ಈ ವೇಳೆ ಮುನಿರತ್ನ 26 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

(adsbygoogle = window.adsbygoogle || []).push({});

ಈ ಭಾರಿಯೂ ಪ್ರಚಾರ ನಡೆಸಿದ್ದು ಗೆಲುವಿನ ಅಂತರ 57 ಸಾವಿರಕ್ಕೆ ಏರಿದೆ. ಹೀಗಾಗಿ ದರ್ಶನ್ ಚುನಾವಣಾ ಅಭ್ಯರ್ಥಿಗಳ ಪಾಲಿಗೆ ಅದೃಷ್ಟ ಎಂಬ ಮಾತು‌ಮಹತ್ವ ಪಡೆದುಕೊಂಡಿದೆ.

Darshan 1537882663

ಕಳೆದ ಮಂಡ್ಯ ಎಂಪಿ ಚುನಾವಣೆ ವೇಳೆಯಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ನಟ ದಿ.ಅಂಬರೀಶ್ ಪತ್ನಿ ಸುಮಲತಾ ನಡುವಿನ ಎಲೆಕ್ಷನ್ ಫೈಟ್ ವೇಳೆಯಲ್ಲೂ ದರ್ಶನ್ ಸುಮಲತಾ ಪರ ಪ್ರಚಾರ ಕಣಕ್ಕಿಳಿದಿದ್ದರು.

(adsbygoogle = window.adsbygoogle || []).push({});
Darshan Yash1 1

ನಟ ಯಶ್ ಜೊತೆಗೂಡಿ ದರ್ಶನ್ ನಡೆಸಿದ ಅಬ್ಬರ ಪ್ರಚಾರದಿಂದ ಸುಮಲತಾ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲ ಯಶ್- ದರ್ಶನ್ ಜೋಡಿಗೆ ಜೋಡೆತ್ತು ಎಂಬ ಹೆಸರು ಕೂಡ ಬಂದಿತ್ತು.

(adsbygoogle = window.adsbygoogle || []).push({});
Actor Darshan 2129743310 1553336298

ಹೀಗಾಗಿ ಚುನಾವಣೆ ವಿಚಾರದಲ್ಲಿ ದರ್ಶನ್ ಅಭ್ಯರ್ಥಿಗಳಿಗೆ ಲಕ್ಕಿ. ಅವರು ಯಾರ ಪರ ಪ್ರಚಾರ ನಡೆಸುತ್ತಾರೋ ಅವರು ಗೆಲ್ಲೋದು ಗ್ಯಾರಂಟಿ ಎಂಬ ಮಾತು ಪ್ರಚಲಿತಕ್ಕೆ ಬಂದಿದ್ದು ಇದಕ್ಕೆ ಆರ್.ಆರ್.ನಗರ ಚುನಾವಣಾ ಫಲಿತಾಂಶ ಮತ್ತೆ ಸಾಕ್ಷಿ ಒದಗಿಸಿದೆ.

RELATED ARTICLES

Most Popular