ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 13-12-2020

ನಿತ್ಯಭವಿಷ್ಯ : 13-12-2020

- Advertisement -

ಮೇಷರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಧನಸಂಪತಿ ಕೈ ಸೇರಲಿದೆ, ಸಲ್ಲದ ಅಪವಾದ ಭೀತಿ, ನಂಬಿಕೆ ದ್ರೋಹಕ್ಕೆ ಒಳಗಾಗುವ ಸಾಧ್ಯತೆ, ಅನಾರೋಗ್ಯ, ಮಹಿಳೆಯರಿಗೆ ತೊಂದರೆ.

ವೃಷಭರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಕುಟುಂಬದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಪೂರಕ ಅವಕಾಶ, ಯತ್ನ ಕಾರ್ಯಗಳಲ್ಲಿ ಯಶಸ್ಸು.

ಮಿಥುನರಾಶಿ
ಆರ್ಥಿಕ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾನಸಿಕ ಒತ್ತಡ, ಅನಗತ್ಯ ತಿರುಗಾಟ, ಉದ್ಯೋಗ ಸ್ಥಳ ಬದಲಾವಣೆ ಸಾಧ್ಯತೆ, ಕೃಷಿ, ತೋಟಗಾರಿಕಾ ಕ್ಷೇತ್ರದವರಿಗೆ ಅಧಿಕ ಲಾಭ.

ಕಟಕರಾಶಿ
ಯತ್ನ ಕಾರ್ಯಗಳಲ್ಲಿ ವಿಘ್ನ, ವಿವಾದಗಳಿಗೆ ಕಾರಣವಾಗದಂತೆ ವ್ಯವಹಾರವನ್ನು ಮುನ್ನೆಡೆಸಿ, ವಿರೋಧಿಗಳಿಂದ ತೊಂದರೆ, ಆರೋಗ್ಯ ಸಮಸ್ಯೆ, ಸಮಾಧಾನ ಮುನ್ನಡೆದರೆ ಸಮಸ್ಯೆಗೆ ಪರಿಹಾರ.

ಸಿಂಹರಾಶಿ
ವಿವಾದಗಳಿಗೆ ಎಡೆಯಾಗದಂತೆ ವ್ಯವಹಾರ, ಕಾರ್ಯಸಾಧನೆ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಮಕ್ಕಳ ಬಗ್ಗೆ ಚಿಂತೆ, ದೇವತಾ ಪ್ರಾರ್ಥನೆಯಿಂದ ನೆಮ್ಮದಿ, ಪರಿಶ್ರಮಕ್ಕೆ ತಕ್ಕ ಫಲ.

ಕನ್ಯಾರಾಶಿ
ಆದಾಯಕ್ಕಿಂತ ವೆಚ್ಚವೇ ಅಧಿಕವಾಗಲಿದೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಖರ್ಚು, ದುಡುಕು ಸ್ವಭಾವ, ಮುಸುಕಿನ ಗುದ್ದಾಟ ಕಂಡುಬರಲಿದೆ, ನೆರೆ ಹೊರೆಯವರೊಂದಿಗೆ ಮನಸ್ಸು ಉದ್ವಿಗ್ನವಾಗಲಿದೆ.

ತುಲಾರಾಶಿ
ದೂರದೂರುಗಳಿಗೆ ವರ್ಗಾವಣೆಯಾಗುವ ಸಾಧ್ಯತೆ, ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಶತ್ರುಬಾಧೆ, ಕೃಷಿಯಲ್ಲಿ ಲಾಭ, ಜಮೀನು ವ್ಯಾಜ್ಯಗಳು ಇತ್ಯರ್ಥ, ಮನಸಿಗೆ ನೆಮ್ಮದಿ. ಮನೆಯಲ್ಲಿ ಸ್ತ್ರೀಯರಿಂದ ಸೌಖ್ಯ, ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು.

ವೃಶ್ಚಿಕರಾಶಿ
ಆದಾಯಕ್ಕಿಂತ ಖರ್ಚು ಅಧಿಕವಾಗಲಿದೆ, ಹೊಸ ಅವಕಾಶಗಳು ಒದಗಿಬರಲಿವೆ, ಅನಾರೋಗ್ಯ ಸಮಸ್ಯೆ, ಅತಿಯಾದ ಕೆಲಸದೊತ್ತಡದಿಂದ ಆಯಾಸ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಧಾರಣ ಪ್ರಗತಿ, ಅಮೂಲ್ಯ ವಸ್ತುಗಳ ಖರೀದಿ.

ಧನಸ್ಸುರಾಶಿ
ಉದ್ಯೋಗಾಕಾಂಕ್ಷಿಗಳಿಗೆ ಬೇಸರ, ಕೊಟ್ಟ ಸಾಲ ಮರಳಿ ಬಾರದು, ಮಾತಿನ ಮೇಲೆ ಹಿಡಿತವಿರಲಿ, ವಿಪರೀತ ಹಣ ವ್ಯಯ, ಪ್ರೀತಿಯ ಜನರ ಭೇಟಿ, ಆಲಸ್ಯ ಮನೋಭಾವ. ಶ್ರಮವಹಿಸಿದರೂ ಪ್ರತಿಫಲ ಲಭಿಸಲಾರದು.

ಮಕರರಾಶಿ
ಸ್ನೇಹಿತರಿಗೆ ಸಲಹೆ, ಹಣಕಾಸಿನ ವಿಚಾರದಲ್ಲಿ ಎಚ್ಚರ, ಮಾನಸಿಕ ವ್ಯಥೆ, ಮಡದಿಯ ಮನೋ ಬಯಕೆ ಈಡೇರಲಿದೆ, ವಾಹನ ಖರೀದಿ ಯೋಗ, ಹಿರಿಯರ ಮನಸ್ಸು ನೋಯಿಸದಿರಿ, ಮನಸ್ಸಿಗೆ ಶಾಂತಿ ಸಮಾಧಾನ. ಹಿತಶತ್ರುಗಳ ಬಾಧೆ.

ಕುಂಭರಾಶಿ
ಆಸ್ತಿ ವಿಚಾರವಾಗಿ ಕಿರಿಕಿರಿ, ಮನೆಯಲ್ಲಿ ಹಿರಿಯರ ಆರೋಗ್ಯ ಕೈಕೊಟ್ಟಿತು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಚೋರ ಭಯ, ಆಕಸ್ಮಿಕ ನಷ್ಟ, ಕೆಟ್ಟ ಆಲೋಚನೆಗಳು, ವಿದ್ಯಾರ್ಥಿಗಳಿಗೆ ಹಿನ್ನಡೆ, ಶತ್ರುಬಾಧೆ, ತಾಳ್ಮೆ ಅಗತ್ಯ.

ಮೀನರಾಶಿ
ಅಕಾಲ ಭೋಜನ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಪರರಿಗೆ ಸಹಾಯ, ಕೆಲಸ ಕಾರ್ಯಗಳಲ್ಲಿ ತೊಂದರೆ, ಸಣ್ಣ ಪುಟ್ಟ ಪ್ರಮಾದಗಳಿಂದ ಸಮಸ್ಯೆ, ಸರಕಾರಿ ಅಧಿಕಾರಿಗಳಿಗೆ ಉದ್ವೇಗ ಕಂಡುಬರಲಿದೆ, ಆರೋಗ್ಯದಲ್ಲಿ ಸುಧಾರಣೆ, ಎಚ್ಚರಿಕೆಯ ಹೆಜ್ಜೆಯನ್ನಿಡಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular