ಸ್ಯಾಂಡಲ್ ವುಡ್ ನಟಿ ಕಾವ್ಯಶಾಸ್ತ್ರಿ ಹೃದಯವಂತಿಕೆ ಮೆರೆದಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ಮಿಡಿದಿರಿವ ನಟಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಕಾವ್ಯ ಶಾಸ್ತ್ರಿ ತಾವು ಕೂದಲನ್ನು ಯಾವ ಕಾರಣಕ್ಕೆ ದಾನ ಮಾಡುತ್ತಿದ್ದೇನೆ ಅಂತಾನೂ ಬರೆದುಕೊಂಡಿದ್ದಾರೆ.
ನಟಿ ಕಾವ್ಯಶಾಸ್ತ್ರೀ ಇನ್ ಸ್ಟಾ ಖಾತೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲು ದಾನ ಮಾಡಿದ್ದೇನೆ, ಕ್ಯಾನ್ಸರ್ನಿಂದಾಗಿ ನಾನು ನನ್ನ ಚಿಕ್ಕಪ್ಪನನ್ನು ಕಳೆದು ಕೊಂಡಿದ್ದೆ.
ಆ ನೋವನ್ನು ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ಸಣ್ಣ ಕೆಲಸವೇ ಇರಬಹುದು. ಆದರೆ, ಒಳ್ಳೇ ಕೆಲಸಕ್ಕೆ ನೀವು ಸಹ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟಿಯರ ಪೈಕಿ ಹಲವರು ಈಗಾಗಲೇ ಕೂದಲು ದಾನ ಮಾಡಿದ್ದಾರೆ. ಈ ಪೈಕಿ ನಟಿ ಶ್ವೇತಾ ಪ್ರಸಾದ್, ಕಾರುಣ್ಯ ರಾಮ್, ಗಾಯಕಿ ಅಖಿಲಾ ಪಜಿಮಣ್ಣು ಮಾನವೀಯತೆ ಮರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
Comments are closed.