ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ಧಿ : ನವೆಂಬರ್ 15 ರಿಂದ 2 ತಿಂಗಳು ತೆರೆಯಲಿದೆ ಶಬರಿಮಲೆ
ಕೇರಳ : ಅಯ್ಯಪ್ಪನ ದರ್ಶನ ಮಾಡಿ ಬಹಳ ದಿನವಾಗಿದೆ ಒಮ್ಮೆ ಶಬರಿಮಲೆ ದೇವಾಲಯ ತೆರೆದರೆ ಹೋಗಿ ಬರಬೇಕು ಎಂದು ಕಾಯತ್ತಿರುವ ಅಯ್ಯಪ್ಪನ ಭಕ್ತರಿಗೆ ಒಂದು ಸಿಹಿ ಸುದ್ದಿ ಇದೆ. ನವೆಂಬರ್ 15 ರಿಂದ 2 ತಿಂಗಳ ಕಾಲ ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ ಭಕ್ತರು ಪಡೆದುಕೊಳ್ಳಬಹುದು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಹಲವಾರು ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಈಗ ದೇಶದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ ಕಡಿಮೆಯಾಗಿದ್ದು ಹೆಚ್ಚಿನ ದೇವಸ್ಥಾನಗಳು ತೆರೆಯುತ್ತಿವೆ. ಅದರಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯ ಕೂಡ ಒಂದು.
ಇದನ್ನೂ ಓದಿ: Dengue fever : ಹೆಚ್ಚುತ್ತಿದೆ ಡೆಂಗ್ಯೂ ಅಬ್ಬರ, ಕೇಂದ್ರದಿಂದ 9 ರಾಜ್ಯಗಳಿಗೆ ತಜ್ಞರ ತಂಡ ನಿಯೋಜನೆ
ಶಬರಿಮಲೈ ದೇವಾಲಯವು ಬುಧವಾರ ಚಿತಿರಾ ಅಟ್ಟಾ ವಿಶೇಷ ಪೂಜೆಗಾಗಿ ಭಕ್ತರಿಗಾಗಿ ತೆರೆಯಲ್ಪಟ್ಟಿದೆ. ಪೂಜೆಯ ನಂತರ ರಾತ್ರಿ 9 ಗಂಟೆಗೆ ದೇವಾಲಯ ಮುಚ್ಚಲಿದೆ ಮತ್ತು ವರ್ಚುವಲ್ ಕ್ಯೂ ಬುಕಿಂಗ್ ವ್ಯವಸ್ಥೆಯ ಮೂಲಕ ಭಕ್ತರಿಗೆ ಅವಕಾಶ ನೀಡಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.
ದೇವಾಲಯ ಪ್ರವೇಶ ಮಾಡುವಂತ ಭಕ್ತರು ಲಸಿಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಭಕ್ತಾದಿಗಳು 2 ಲಸಿಕೆ ಪಡೆದಿದ್ದಾರೆ ಅಥವಾ 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು. ಎಂದು ಮಂಡಳಿ ಹೇಳಿದೆ. ನವೆಂಬರ್ 15 ರಿಂದ ಎರಡು ತಿಂಗಳ ಸುದೀರ್ಘ ಯಾತ್ರೆಯ ಋತುವಿಗಾಗಿ ದೇವಾಲಯ ತೆರೆಯಲಿದೆ ಎಂದು ಮಂಡಳಿಗೆ ಮತ್ತಷ್ಟು ಮಾಹಿತಿ ನೀಡಿದರು.
(Good news for Devotees of Ayyappa : Sabarimala to open for 2 months from November 15)
Comments are closed.