ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ :13-04-2020

ನಿತ್ಯಭವಿಷ್ಯ :13-04-2020

- Advertisement -

ಮೇಷರಾಶಿ
ವಿವಿಧ ರೀತಿಯಲ್ಲಿ ಅನುಕೂಲವು ಉಂಟಾಗಲಿದೆ. ನೌಕರರಿಂದ ಸಹಕಾರವೂ ದೊರಕಲಿದೆ. ಒಮ್ಮೊಮ್ಮೆ ಆರ್ಥಿಕ ಅಡಚಣೆಗಳಿಂದ ಆತ್ಮಸ್ಥೈರ್ಯ ಕುಗ್ಗಲಿದೆ. ನೂತನ ಕೆಲಸ ಕಾರ್ಯಗಳಿಗೆ ಸಕಾಲವಲ್ಲ. ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಕಲಹ, ಭೂ ಲಾಭ.

ವೃಷಭರಾಶಿ
ಕುಟುಂಬದಲ್ಲಿ ಕಲಹ, ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ಕಂಡು ಬರಲಿದೆ. ಮಕ್ಕಳ ಅಭ್ಯಾಸದ ಬಗ್ಗೆ ಹಾಗೂ ಉದ್ಯೋಗದ ಕಡೆಗೆ ಗಮನ ಕೊಡಬೇಕಾದೀತು. ಆಹಾರದಲ್ಲಿ ಜಾಗ್ರತೆ ವಹಿಸಿರಿ. ಮಾತಿನ ಚಕಮಕಿ, ಮನಃಕ್ಲೇಷ, ಕುಟುಂಬದ ಮುಖ್ಯಸ್ಥರಿಂದ ಸಲಹೆ.

ಮಿಥುನರಾಶಿ
ನಿವೇಶನ ಖರೀದಿ ಯೋಗ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರ ದರ್ಶನ, ಉತ್ತಮ ವ್ಯಾಪಾರ ವಹಿವಾಟು. ದಾಂಪತ್ಯದಲ್ಲಿ ಅನುಕೂಲವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹವು ಕಂಡು ಬರುವುದು. ಆರೋಗ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದಾವು. ಗೃಹ, ವಾಹನಾದಿಗಳಿಗೆ ಹಾನಿಯಾದೀತು.

ಕಟಕರಾಶಿ
ಅಧಿಕವಾದ ತಿರುಗಾಟ, ಶತ್ರುಗಳ ಬಾಧೆ, ಆಗಾಗ ಸಾಂಸಾರಿಕವಾಗಿ ಖನ್ನತೆಯಿಂದ ಬಳಲುವಂತಾದೀತು. ನರದ ತೊಂದರೆ, ಪಿತ್ತೋಷ್ಣ ಸಂಬಂಧಿ ಅನಾರೋಗ್ಯವು ಕಂಡು ಬಂದೀತು. ಸ್ಥಿರ ಸೊತ್ತುಗಳ ವ್ಯವಹಾರದಿಂದ ನಷ್ಟವಾದೀತು. ಬಂಧು ಸಹಕಾರ ಸಿಗಲಿದೆ. ಮಿತ್ರರೊಂದಿಗೆ ವಾಗ್ವಾದ, ಬರಹಗಾರರಿಗೆ ಅನುಕೂಲ, ಋಣ ಬಾಧೆ,

ಸಿಂಹರಾಶಿ
ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಅನ್ಯರೊಂದಿಗೆ ಮನಸ್ತಾಪ ಕಂಡು ಬಂದೀತು. ಹಿರಿಯ ಬಂಧುಗಳಿಂದ ಸಹಕಾರ ಸಿಗಲಿದೆ. ಹಣದ ವ್ಯವಹಾರದಲ್ಲಿ ಅಭಿವೃದ್ಧಿ ತೋರಿ ಬರಲಿದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಕುರುಹು ಕಾಣಿಸೀತು. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

ಕನ್ಯಾರಾಶಿ
ದೂರ ಪ್ರಯಾಣ, ಸುಖ ಭೋಜನ, ಸ್ಥಗಿತ ಕಾರ್ಯಗಳು ಮುಂದುವರೆಯುವುದು, ಪತ್ನಿಯ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರಲಿದೆ. ಆಗಾಗ ಮಾನಸಿಕ ಉದ್ವೇಗದಿಂದ ಬಳಲುವಿರಿ. ದೇಹಾರೋಗ್ಯದಲ್ಲಿ ಅಲ್ಪ ತೊಂದರೆಗಳು ಕಂಡು ಬರಬಹುದು. ದೂರ ಸಂಚಾರಗಳು, ಅಡೆತಡೆಯನ್ನು ತರಲಿದೆ. ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಏರುಪೇರು.

ತುಲಾರಾಶಿ
ಆಲಸ್ಯ ಮನೋಭಾವ, ಇಲ್ಲ ಸಲ್ಲದ ಅಪವಾದ, ನೂತನ ಶುಭ ಮಂಗಲ ಕಾರ್ಯಗಳಿಗೆ ನಾನಾ ರೀತಿಯಲ್ಲಿ ಪರೋಕ್ಷವಾಗಿ ಸಹಕಾರವು ದೊರಕಲಿದೆ. ಸಾಂಸಾರಿಕವಾಗಿ, ಕುಟುಂಬಿಕವಾಗಿ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ದೊರಕಲಿದೆ. ಶತ್ರುಗಳ ಭಯ, ಹಣಕಾಸು ನಷ್ಟ, ದ್ರವ್ಯ ನಷ್ಟ, ಚಂಚಲ ಮನಸ್ಸು.

ವೃಶ್ಚಿಕರಾಶಿ
ಕುತಂತ್ರದಿಂದ ಹಣ ಸಂಪಾದನೆ, ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದೆ. ಸಾಮಾಜಿಕವಾಗಿ ಗೌರವ, ಸ್ಥಾನಮಾನಗಳು ಒದಗಿ ಬರಲಿದೆ. ದೂರ ಸಂಚಾರದಲ್ಲಿ ಕಾರ್ಯಸಾಧನೆಯ ಶುಭವಾರ್ತೆ ಸಿಗಲಿದೆ. ಪತ್ನಿ, ಮಕ್ಕಳಿಂದ ಅನುಕೂಲವು ಸಿಗಲಿದೆ. ಚೋರ ಭಯ, ಮುಂಗೋಪ ಹೆಚ್ಚು, ವಾಹನದಿಂದ ಕಂಟಕ.

ಧನಸ್ಸುರಾಶಿ
ಪರರ ಮಾತಿಗೆ ಕಿವಿಗೊಡಬೇಡಿ, ಮಾನಸಿಕ ನೆಮ್ಮದಿಗೆ ಭಂಗ ಬಂದರೂ ಪ್ರಯತ್ನ ಬಲದಿಂದ ಕಾರ್ಯ ಸಾಧನೆಯಾಗಲಿದೆ. ಮನಸ್ತಾಪ ವಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.

ಮಕರರಾಶಿ
ದಾಯಾದಿಗಳ ಕಲಹ, ಕೆಲಸ ಕಾರ್ಯಗಳಲ್ಲಿ ಜಯ, ವೃತ್ತಿರಂಗದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾದೀತು. ಕೆಲಸ ಕಾರ್ಯವು ನಿಧಾನಗತಿಯಲ್ಲಿ ನಡೆಯುತ್ತದೆ. ಶಾರೀರಿಕವಾಗಿ ಆಯಾಸವು ತೋರಿಬಂದೀತು. ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಅಕಾಲ ಭೋಜನ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಸಾಧಾರಣ ಫಲ.

ಕುಂಭರಾಶಿ
ನೆಮ್ಮದಿ ಇಲ್ಲದ ಜೀವನ, ಕುಟುಂಬಿಕ ಸಮಸ್ಯೆಗಳು ಎದುರಾಗಲಿದೆ. ಸ್ತ್ರೀ ಸಂಬಂಧ ತೊಂದರೆಗಳು ಅನುಭವಕ್ಕೆ ಬರಲಿದೆ. ಆಗಾಗ ಹಣದ ಅಪವ್ಯಯವಾದೀತು. ಮನೋವ್ಯಾಕುಲತೆ ತೋರಿಬಂದು ಮುನ್ನಡೆಗೆ ಅನಾನುಕಲವಾದೀತು.ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಉತ್ತಮ ಅನುಕೂಲ, ಪಾಪದ ಕಾರ್ಯಕ್ಕೆ ಮನಸ್ಸು ಪ್ರಚೋದನೆ.

ಮೀನರಾಶಿ
ಮನೆಯಲ್ಲಿ ಸಂತಸದ ವಾತಾವರಣ, ಹಿರಿಯರ ಸಹಕಾರದಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಕೂಡ ಕೆಲವು ಅನುಕೂಲ ಅಭಿವದ್ಧಿ ಇರುತ್ತದೆ. ನಿರುದ್ಯೋಗಿಗಳಿಗೆ ಕಾಯುವಂತಹ ಪರಿಸ್ಥಿತಿಯು ಗೋಚರಕ್ಕೆ ಬರಲಿದೆ. ವೈಯುಕ್ತಿಕ ಕೆಲಸದ ಬಗ್ಗೆ ನಿಗಾವಹಿಸಿ, ವಿದೇಶ ಪ್ರಯಾಣ, ಅವಿವಾಹಿತರಿಗೆ ವಿವಾಹ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular