ಮೇಷರಾಶಿ
ಸ್ತ್ರೀಯಿಂದ ಶುಭ, ಬಾಕಿ ಹಣ ವಸೂಲಿ, ಕಾರ್ಯರಂಗದಲ್ಲಿ ತುಸು ಮುನ್ನಡೆ ಕಂಡು ಬಂದು ಸಮಾಧಾನ ತರಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದಿಂದ ಉನ್ನತ ಫಲ ಸಿಗಲಿದೆ. ಸ್ವತಂತ್ರ ಉದ್ಯಮಿಗಳಿಗೆ ಕಷ್ಟನಷ್ಟವಿದೆ. ವಾಹನ ಖರೀದಿ ಯೋಗ, ಒಳ್ಳೆಯ ಅನುಕೂಲ ಪ್ರಾಪ್ತಿ, ಸುಖ ಭೋಜನ, ಈ ದಿನ ಶುಭ ಫಲ.
ವೃಷಭರಾಶಿ
ಸಹೋದರರಿಂದ ಸಹಾಯ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ, ಸಾಂಸಾರಿಕವಾಗಿ ಬಂಧುಮಿತ್ರರ ಆಗಮನ ಸಂತಸ ತರಲಿದೆ.ಕಂಟ್ರಾಕ್ಟ್ ವೃತ್ತಿಯವರಿಗೆ ಅನೇಕ ಅವಕಾಶಗಳು ದೊರಕಲಿವೆ.ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ. ಶತ್ರುಗಳ ಬಾಧೆ, ರಿಯಲ್ ಎಸ್ಟೇಟ್ನವರಿಗೆ ಲಾಭ, ಇಂದು ಮಿಶ್ರ ಫಲ ಯೋಗ.
ಮಿಥುನರಾಶಿ
ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ, ಆರ್ಥಿಕವಾಗಿ ಪರಿಸ್ಥಿತಿಯು ಸುಧಾರಿಸಲಿದೆ. ವ್ಯಾಪಾರ,ವ್ಯವಹಾರಗಳು ಹಂತ ಹಂತವಾಗಿ ಅಭಿವೃದ್ಧಿಯನ್ನು ತಂದಾವು.ಸಾಮಾಜಿಕ ರಂಗದಲ್ಲಿ ನಿಮ್ಮ ಕಾರ್ಯಶೀಲತೆ ಬೆಳಕಿಗೆ ಬರಲಿದೆ. ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ, ಸಣ್ಣ ಮಾತಿನಿಂದ ಕಲಹ.

ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ದೂರ ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ.ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಕಂಡು ಬರಲಿದೆ.ಆರ್ಥಿಕವಾಗಿ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿರುತ್ತದೆ. ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ, ಅಧಿಕವಾದ ಖರ್ಚು.
ಸಿಂಹರಾಶಿ
ಮಾತೃವಿನಿಂದ ಶುಭ ಹಾರೈಕೆ, ವಸ್ತ್ರ ಖರೀದಿ ಸಾಧ್ಯತೆ, ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ಉದ್ಯೋಗ ಭಾಗ್ಯ ಸಿಗಲಿದೆ.ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ.ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು. ನೀವಾಡುವ ಮಾತಿನಿಲ್ಲಿ ಹಿಡಿತ ಅಗತ್ಯ, ಅತಿಯಾದ ಮಾನಸಿಕ ನೋವು, ಹಣಕಾಸು ಸಂಕಷ್ಟ.
ಕನ್ಯಾರಾಶಿ
ನಂಬಿದ ಜನರಿಂದ ಅಶಾಂತಿ, ರಾಜ ವಿರೋಧ, ಸಾಂಸಾರಿಕವಾಗಿ ಮಹಿಳೆಯರು ಋಣಾತ್ಮಕ ಚಿಂತನೆಯನ್ನು ಮಾಡಿಯಾರು. ಕುಟುಂಬಿಕವಾಗಿ ಅನಾವಶ್ಯಕ ಗೊಂದಲಗಳು ಕಂಡು ಬರಲಿವೆ.ಹಣಕಾಸಿನ ವಿಚಾರದಲ್ಲಿ ಕಷ್ಟನಷ್ಟಗಳೇ ಅಧಿಕ ರೂಪದಲ್ಲಿವೆ.ಯತ್ನ ಕಾರ್ಯದಲ್ಲಿ ಭಂಗ, ಆರೋಗ್ಯದಲ್ಲಿ ಏರುಪೇರು, ವಿಪರೀತ ವ್ಯಸನ.

ತುಲಾರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚು, ಶ್ರೀದೇವತಾ ದರ್ಶನ ಭಾಗ್ಯದಿಂದ ಶಾಂತಿ ಸಿಗಲಿದೆ.ವೃತ್ತಿರಂಗದಲ್ಲಿ ಮಾಡಿರುವ ಪ್ರಯತ್ನಕ್ಕೆ ಸಮಾಧಾನ ಸಿಗಲಿದೆ.ಮನೆ ರಿಪೇರಿಗಾಗಿ ಖರ್ಚುವೆಚ್ಚಗಳು ಅಧಿಕವಾಗಿ ತೋರಿ ಬಂದಾವು.ಜಾಗ್ರತೆ ಮಾಡಿರಿ.ಕುಟುಂಬದಲ್ಲಿ ಪ್ರೀತಿ, ಸ್ನೇಹಿತರ ಭೇಟಿ, ಪ್ರವಾಸಕ್ಕೆ ಹೋಗಿ ದುಃಖವಾಗುವುದು, ಪ್ರಯಾಣದಲ್ಲಿ ಎಚ್ಚರ, ಈ ದಿನ ಮಿಶ್ರ ಫಲ ಯೋಗ.
ವೃಶ್ಚಿಕರಾಶಿ
ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ನಿಂದನೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ, ಕೆಟ್ಟ ಮಾತುಗಳನ್ನಾಡುವಿರಿ, ಯೋಗ್ಯ ವಯಸ್ಕರು ಕಂಕಣಬಲವನ್ನು ಪಡೆಯಲಿದ್ದಾರೆ.ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇರುತ್ತದೆ.ದಾಯಾದಿಗಳ ಕಿರುಕುಳದಿಂದ ಕೆಲಸದಲ್ಲಿ ಹಿನ್ನಡೆ ಇದೆ. ನೀವಾಡುವ ಮಾತಿನಲ್ಲಿ ಎಚ್ಚರಿಕೆ.
ಧನಸ್ಸುರಾಶಿ
ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ, ನ್ಯಾಯಾಲಯದ ಕೆಲಸಕಾರ್ಯಗಳು ಹಂತ ಹಂತವಾಗಿ ಮುನ್ನಡೆಯಲಿವೆ. ಸಾಂಸಾರಿಕ ಜೀವನ ಉತ್ತಮವಿದ್ದು ಮುನ್ನಡೆಗೆ ಸಾಧಾಕವಾದೀತು. ವೃತ್ತಿರಂಗದಲ್ಲಿ ಕಾರ್ಯಒತ್ತಡದಿಂದ ಸಮಾಧಾನ ತೋರಿಬಾರದು. ಮಾನಸಿಕ ನೆಮ್ಮದಿ, ಐಶ್ವರ್ಯ ಪ್ರಾಪ್ತಿ, ಋಣ ವಿಮೋಚನೆ.

ಮಕರರಾಶಿ
ಮಾನಸಿಕ ಚಿಂತೆ, ವಿವಾಹಕ್ಕೆ ಅಡೆತಡೆ, ಕಾರ್ಯರಂಗದಲ್ಲಿ ನಿಮ್ಮ ಪ್ರಯತ್ನಬಲ ಸಫಲವಾಗಲಿದೆ.ದಾಂಪತ್ಯದಲ್ಲಿ ತುಸು ಮಟ್ಟಿನ ಕಿರಿಕಿರಿ ತೋರಿ ಬಂದರೂ ಹೊಂದಾಣಿಕೆಯಿಂದ ಮುನ್ನಡೆಯಬಹುದಾಗಿದೆ. ನೆರೆಹೊರೆಯವರ ಬಗ್ಗೆ ಜಾಗ್ರತೆ ಮಾಡಿರಿ. ಸಾಲ ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ತೊಂದರೆ, ಈ ದಿನ ಅಶುಭ ಫಲ ಯೋಗ, ಎಚ್ಚರಿಕೆಯ ನಡೆ ಅಗತ್ಯ.
ಕುಂಭರಾಶಿ
ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಒಟ್ಟಿನಲ್ಲಿ ಸಮಾಧಾನವಿಲ್ಲದ ವಾತಾವರಣ ನಿಮಗೆ ಅತಂಕ ತಂದೀತು.ಕುಟುಂಬಿಕರ ಕೆಲಸಕಾರ್ಯಗಳಿಗಾಗಿ ಓಡಾಟವಿರುತ್ತದೆ.ವಿದ್ಯಾರ್ಥಿಗಳ ಅಭ್ಯಾಸಬಲ ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಮಾನಸಿಕ ನೆಮ್ಮದಿ, ಶುಭ ಫಲ ಯೋಗ.
ಮೀನರಾಶಿ
ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ.ನಿರುದ್ಯೋಗಿಗಳು ಬಂದ ಅವಕಾಶವನ್ನು ಪಡೆದಲ್ಲಿ ಕಾರ್ಯಸಾಧನೆಯಾಗಲಿದೆ.ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ.ಆರ್ಥಿಕತೆಯಲ್ಲಿ ಸುಧಾರಣೆ ಇದೆ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಶತ್ರುಗಳ ಭಯ, ವಿದ್ಯಾರ್ಥಿಗಳಲ್ಲಿ ಆತಂಕ, ವಿದೇಶ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ಮಿಶ್ರ ಫಲ ಯೋಗ.