ಚಿರು ನೆನಪಿಸಿಕೊಂಡು ಭಾವುಕನಾದ ಸ್ನೇಹಿತ….! ಹಂಚಿಕೊಂಡ ಕೊನೆ ಪೋಟೋ ನೋಡಿ ಕಣ್ಣಿರಿಟ್ಟ ಅಭಿಮಾನಿಗಳು…!!

ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ವರ್ಷ ಉರುಳಿದೆ.  ಜೂನ್ 7 ರಂದು ಚಿರು ಸರ್ಜಾ ಮೊದಲ ಪುಣ್ಯತಿಥಿ ಆಚರಣೆಗೆ ಕುಟುಂಬಸ್ಥರು ಕಣ್ಣೀರಿಡುತ್ತಲೇ ಸಿದ್ಧವಾಗಿದ್ದಾರೆ. ಈ ಮಧ್ಯೆ ಚಿರು ಸ್ನೇಹಿತ ಪನ್ನಗಾಭರಣ ಕಳೆದ ವರ್ಷ ಚಿರು ಏನು ಮಾಡುತ್ತಿದ್ದರೂ ಎಂಬ ಪೋಟೋದ ಜೊತೆ ನಮ್ಮ ನೋವು ಹಂಚಿಕೊಂಡಿದ್ದಾರೆ.

https://kannada.newsnext.live/sandalwood-kgf-2-yash-1millioncomment-new-record-youtube/

ಚಿರಂಜೀವಿ ಸರ್ಜಾ ಸ್ನೇಹಿಜೀವಿ. ಮೇಘನಾ ರಾಜ್, ನಟ ಪ್ರಜ್ವಲ್ ದೇವರಾಜ್  ಸೇರಿದಂತೆ ಅವರದೊಂದು ದೊಡ್ಡ ಸ್ನೇಹಿತರ ಬಳಗವೇ ಇದೆ. ಅಂತಹ ಸ್ನೇಹಿತರಲ್ಲಿ ಆತ್ಮೀಯ ಸ್ನೇಹಿತ ಪನ್ನಗಾಭರಣ ಮೇ 31,2020 ರಂದು ಚಿರು ಏನು ಮಾಡುತ್ತಿದ್ದರು ಎಂಬ ಪೋಟೋ ಹಂಚಿಕೊಂಡು ಸ್ನೇಹಿತನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಇದು ಚಿರು ಜೊತೆಗಿನ ನನ್ನ ಕೊನೆಯ ಪೋಟೋವಾಗುತ್ತದೆ ಎಂಬ ಅರಿವು ನನಗಿರಲಿಲ್ಲ ಎಂದಿರುವ ಪನ್ನಗಾಭರಣ ಮೇ 31 ,2020 ರಂದು ತೆಗೆದುಕೊಂಡಿರುವ ಪೋಟೋ ಇದು ಎಂದು ಚಿರು ಜೊತೆಗಿನ ಪೋಟೋ ಹಂಚಿಕೊಂಡಿದ್ದಾರೆ.

https://www.instagram.com/p/CPiqZSSHBid/?utm_medium=copy_link

https://kannada.newsnext.live/senior-writer-hiriyuru-beehmaiah-death/

ಆ ಪೋಟೋದಲ್ಲಿ ಚಿರು ಪನ್ನಗಾಭರಣ ಹೇರ್ ಟ್ರಿಮ್ ಮಾಡುತ್ತಿರುವ ದೃಶ್ಯವಿದೆ. ಖುಷಿ-ಖುಷಿಯಾಗಿ ನನ್ನೊಂದಿಗೆ ಮಾತನಾಡಿದ್ದ, ಖುಷಿಯಾಗಿದ್ದ ಗೆಳೆಯ ಒಂದು ವಾರದಲ್ಲಿ ಇನ್ನಿಲ್ಲವಾದ ಸುದ್ದಿ ಇಂದಿಗೂ ನಂಬಲಾಗುತ್ತಿಲ್ಲ ಎನ್ನುತ್ತಾರೆ ಪನ್ನಗಾಭರಣ.

https://kannada.newsnext.live/goodnews-private-teachers-special-package/

ಸದಾ ಚಿರು ಜೊತೆಗೆ ಎಂಜಾಯ್ ಮಾಡ್ತಿದ್ದ  ಪನ್ನಗಾಭರಣ, ನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಇತರ ಸ್ನೇಹಿತರು ಸದಾ ಚಿರು ಜೊತೆಗಿರುವ ಪೋಟೋಗಳನ್ನೇ ಶೇರ್ ಮಾಡಿಕೊಂಡು ಗೆಳೆಯನನ್ನು ನೆನೆಯುತ್ತಾರೆ. ಇತ್ತೀಚಿಗೆ ಅಂಬರೀಶ್ ಹುಟ್ಟುಹಬ್ಬಕ್ಕೆ ಪನ್ನಗಾಭರಣ ಹಂಚಿಕೊಂಡ ಪೋಟೋದಲ್ಲೂ ಚಿರು ಇದ್ದರು.

ಮೂಲಗಳ ಪ್ರಕಾರ ಚಿರು, ಪ್ರಜ್ವಲ್ ದೇವರಾಜ್ ಮಲ್ಟಿಸ್ಟಾರ್ ಮೂವಿ ಮಾಡಲು ಸಿದ್ಧತೆ ನಡೆಸಿದ್ದರು. ಲಾಕ್ ಡೌನ್ ಬಳಿಕ ಮುಹೂರ್ತ ನಡೆಸಲು ಸಿದ್ಧತೆ ನಡೆಸಿದ್ದರಂತೆ. ಆದರೆ ವಿಧಿ ಚಿರುವನ್ನು ತನ್ನ ಆಪ್ತರಿಂದ ದೂರ ಮಾಡಿದೆ.

Comments are closed.