ಸ್ಮಶಾನವಾಸಿಗಳ ಕಷ್ಟಕ್ಕೆ ಮಿಡಿದ ತುಪ್ಪದ ಬೆಡಗಿ….! ದಿನಸಿ ವಿತರಿಸಿ ಸಹಾಯಹಸ್ತ ಚಾಚಿದ ನಟಿ ರಾಗಿಣಿ…!!

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಹೊರಬರುತ್ತಿದ್ದಂತೆ ಎಲ್ಲವನ್ನು ಮರೆತು ಮತ್ತೆ ಸಾಮಾಜಿಕ ಜೀವನಕ್ಕೆ ಮರಳಿದ್ದಾರೆ. ಅಶಕ್ತರಿಗೆ ಆಹಾರ ವಿತರಿಸಿ ಸುದ್ದಿಯಾಗಿದ್ದ ತುಪ್ಪದ ಬೆಡಗಿ ಇದೀಗ ಸ್ಮಶಾನವಾಸಿಗಳ ಕಷ್ಟಕ್ಕೆ ಮಿಡಿದಿದ್ದು, ಅವರಿಗೆ ಜೀವನಾವಶ್ಯಕ ವಸ್ತು ಒದಗಿಸಿ ಅವರ ಕಷ್ಟ ಕೇಳಿ ಸಂತೈಸಿದ್ದಾರೆ.

https://kannada.newsnext.live/maharashtra-24-hours-920-death-corona-virus/

ಬೆಂಗಳೂರಿನ ಹಲವೆಡೆ ಸ್ಮಶಾನಗಳಿಗೆ ಭೇಟಿ ನೀಡಿದ ನಟಿ ರಾಗಿಣಿ, ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕಷ್ಟ ಆಲಿಸಿದ್ದಾರೆ . ಅಷ್ಟೇ ಅಲ್ಲ ಅವರಿಗೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಿ ನೆರವಾಗಿದ್ದಾರೆ.

https://kannada.newsnext.live/bhaskar-mayya-death-corona-virus/

ಕೊರೋನಾ ಎರಡನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿನಿತ್ಯ 100 ಕ್ಕೂ ಹೆಚ್ಚು ಅಂತ್ಯಕ್ರಿಯೆಗಳು ನಡೆಯುತ್ತಿವೆ. ಹೀಗಾಗಿ ಸ್ಮಶಾನ ಸಿಬ್ಬಂದಿ ಹಿಂದೆಂದಿಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದು,ಅವರಿಗೂ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ನಟಿ ರಾಗಿಣಿ ಮಾಡಿದ್ದಾರೆ.

ಸ್ಮಶಾನ ದಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಕಾರ್ಮಿಕರ ಜೊತೆ ಮಾತನಾಡಿದ ನಟಿ ರಾಗಿಣಿ ಅಲ್ಲಿನ ಅಜ್ಜಿಯೊಬ್ಬರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಅವರೊಂದಿಗಿನ ಮಾತುಕತೆಯ ವಿವರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಮಶಾನದಲ್ಲಿ ಕೆಲಸ ಮಾಡುವ ಅಜ್ಜಿಯೊಬ್ಬರ ಜೊತೆ ಮಾತನಾಡಿದೆ. ಆಕೆ 40 ವರ್ಷಗಳಿಂದ ಸಶ್ಮಾನದಲ್ಲೇ ಕೆಲಸ ಮಾಡಿಕೊಂಡಿದ್ದಾರೆ. ಆಕೆಗೆ ಹೊರ ಜಗತ್ತಿನ ಅರಿವು ಇಲ್ಲ. ಆಕೆಯ ಮಗಳು ಈಗ ಅದೇ ಕೆಲಸ ಮಾಡುತ್ತಿದ್ದಾಳೆ. ಆಕೆ ಎಂದು ಪುಸ್ತಕವನ್ನೇ ಮುಟ್ಟಿಲ್ಲ. ಅವರನ್ನೆಲ್ಲ ನೋಡಿ ಅಚ್ಚರಿಯಾಯಿತು ಎಂದಿದ್ದಾರೆ.

ಕೊವೀಡ್ ಪೀಡಿತರ ಅಂತ್ಯಕ್ರಿಯೆ ನಡೆಯುತ್ತಿದ್ದ ಜಾಗಕ್ಕೆ ನಾವು ಹೋಗಲಿಲ್ಲ. ವೈರಸ್ ಹರಡುವ ಆತಂಕ ಇದ್ದಿದ್ದರಿಂದ ಅಲ್ಲಿಂದ ದೂರದಲ್ಲೇ ನಾವು ದಿನಸಿ ವಿತರಣೆ ಮಾಡಿದೇವು. ಆದರೂ ಅಂತ್ಯಕ್ರಿಯೆಗಾಗಿ ಕಾದು ನಿಂತಿದ್ದ ಸಾಲು ಸಾಲು ಅಂಬುಲೆನ್ಸ್ ಗಳನ್ನು ನೋಡಿ ನಮಗೆ ಆತಂಕವಾಯಿತು ಎಂದು ರಾಗಿಣಿ ಹೇಳಿದ್ದಾರೆ.

ಜನತಾ ಕರ್ಪ್ಯೂ ಜಾರಿಯಾದಾಗಿನಿಂದ ಅಗತ್ಯ ಉಳ್ಳವರಿಗೆ ಆಹಾರ ಒದಗಿಸುವ ಕೆಲಸದಲ್ಲಿ ನಿರತವಾಗಿರುವ ನಟಿ ರಾಗಿಣಿ, ವೃದ್ಧಾಶ್ರಮ, ಬಿಬಿಎಂಪಿ ಪೌರ ಕಾರ್ಮಿಕರು ಸೇರಿದಂತೆ ಹಲವರಿಗೆ ಊಟ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

Comments are closed.