ಬಿಜೆಪಿಯ ಫೈರ್ ಬ್ರ್ಯಾಂಡ್ ಗೆ ಜೀವಬೆದರಿಕೆ….! ಸಂಸದ ಅನಂತಕುಮಾರ್ ಕೊಲ್ಲುವುದಾಗಿ ಎಚ್ಚರಿಸಿದ ಪೋನ್ ಕರೆ…!!

ಕಾರವಾರ: ಬಿಜೆಪಿಯ ಫೈರ್ ಬ್ರ್ಯಾಂಡ್ ಖ್ಯಾತಿಯ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಜೀವಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಆಪ್ತಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆಯವರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ನಿವಾಸಕ್ಕೆ ತಡರಾತ್ರಿ 2 ಗಂಟೆಗೆ ಸ್ಥಿರ ದೂರವಾಣಿಗೆ ಪೋನ್ ಕರೆ ಬಂದಿದ್ದು, ಪೋನ್ ಮಾಡಿದ ವ್ಯಕ್ತಿ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿದ್ದಾನೆ. ಸಂಸದರನ್ನು ಕೊಲ್ಲುವುದಾಗಿ ಎಚ್ಚರಿಸಿದ್ದಾನೆ ಎನ್ನಲಾಗಿದೆ.

The Union Minister for Skill Development and Entrepreneurship, Shri Dharmendra Pradhan and the Minister of State for Skill Development and Entrepreneurship, Shri Anant Kumar Hegde assumed the charge of their portfolios, in New Delhi on September 04, 2017.

ಈ ಹಿನ್ನೆಲೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋನ್ ಕರೆಯನ್ನು ಸ್ವತಃ ಅನಂತಕುಮಾರ್ ಹೆಗಡೆಯವರೇ ಸ್ವೀಕರಿಸಿದ್ದರು ಎನ್ನಲಾಗಿದೆ.

ಹೊಸಮಾರುಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಸದರ ನಿವಾಸಕ್ಕೆ ಭದ್ರತೆ ಹೆಚ್ಚಿಸಿದ್ದಾರೆ. 11 ಅಂಕಿಗಳುಳ್ಳ ನಂಬರ್ ನಿಂದ ಕರೆಬಂದಿದೆ. ಈ ಹಿಂದೆಯೂ ಹಲವಾರು ಭಾರಿ ಸಂಸದರಿಗೆ ಜೀವ ಬೆದರಿಕೆ ಬಂದಿದೆ. ಸದ್ಯ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಶಿರಸಿಯ ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

Comments are closed.