ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ‌ ಮದುವೆ ಮುರಿದುಕೊಂಡವರು….! ನಟಿಗೆ ತಿರುಗೇಟು ಕೊಟ್ಟ ಸಂಸದ ಪ್ರತಾಪ್ ಸಿಂಹ್…!!

ಮೈಸೂರು: ರೈತ ಪ್ರತಿಭಟನೆ ಈಗ ಸೆಲಿಬ್ರೆಟಿಗಳು ಹಾಗೂ ರಾಜಕೀಯ ನಾಯಕರ ನಡುವಿನ ಟ್ವೀಟ್ ವಾರ್ ಗೆ ಕಾರಣವಾಗಿದ್ದು ಅಮೇರಿಕದ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮೂಲದಿಂದ ವಿವಾದ ಭುಗಿಲೆದ್ದಿದೆ.

ಭಾರತದ ರೈತ ಹೋರಾಟದ ಬಗ್ಗೆ ಅಮೇರಿಕಾದ ಪಾಪ್ ಗಾಯಕಿ ರಿಹಾನಾ ಮಾಡಿರುವ ಟ್ವೀಟ್ ಜೊತೆ ಹುಟ್ಟಿಕೊಂಡ ವಿವಾದ ದೇಶದಲ್ಲಿ ನಾನಾ ಸ್ವರೂಪ ಪಡೆದುಕೊಂಡಿದ್ದು ರಿಹಾನಾ ಬೆಂಬಲಿಸಿದ ನಟಿ ತಾಪ್ಸಿ ಪನ್ನುಗೆ ಮೈಸೂರು ಸಂಸದ ಪ್ರತಾಪ್ ಸಿಂಹ್ ಸಖತ್ ತಿರುಗೇಟು ನೀಡಿದ್ದಾರೆ.

ರಿಹಾನಾ ಬೆಂಬಲಿಸಿದ್ದ ತಾಪ್ಸಿ ಪನ್ನು, ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೇ, ಒಂದು ಜೋಕ್ ನಂಬಿಕೆಯನ್ನು ಕೆರಳಿಸುವುದಾದರೇ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲುಗಾಡಿಸುವುದಾದರೇ ಮೊದಲು ನಿಮ್ಮ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬೇರೆಯವರಿಗೆ ಪ್ರೊಪೊಗಂಡ ಪಾಠ ಮಾಡಲು ಬರಬೇಡಿ ಎಂದಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮೈಸೂರು ಸಂಸದ ಪ್ರತಾಪ್ ಸಿಂಹ್, ತಾಪ್ಸಿ ಅವರೇ, ಓರ್ವ ರಶ್ದಿ ಯ ವ್ಯಂಗ್ಯಚಿತ್ರ ಮುಸ್ಲಿಂರನ್ನು ಕೆರಳಿಸಿತು.ಒಂದು ಪುಸ್ತಕ ಕ್ರಿಶ್ಚಿಯರನ್ನು ಕೆಣಕಿತು,ಅಂತೆಯೇ ಒಂದು ಬಾರಿ ಕೆನ್ನೆಗೆ ಬಾರಿಸಿದ್ದಕ್ಕೆ ನೀವು ಮದುವೆ ಮುರಿದುಕೊಂಡ್ರಿ. ಕೇವಲ ಸ್ಕ್ರಿಪ್ಟೆಡ್ ಸಿನಿಮಾದ ಡೈಲಾಗ್ ಗಳಿಗೆ ನಿಮ್ಮನ್ನು ನೀವು ಸೀಮಿತಗೊಳಿಸಿಕೊಳ್ಳಿ. ಉಳಿದ ವಿಚಾರ ಗಳು ನಿಮ್ಮ ಜ್ಞಾನದ ಹೊರಗಿವೆ ಎಂದಿದ್ದಾರೆ.

ಪ್ರತಾಪ್ ಸಿಂಹ್ ‌ಉತ್ತರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸಿನಿಮಾ ನಟಿಯರ ಬುದ್ಧಿವಂತಿಕೆ ಎಷ್ಟೆಂಬುದನ್ನು ತಾಪ್ಸಿ ಪ್ರದರ್ಶಿಸಿದ್ದಾರೆ ಬಿಡಿ ಎಂದು ಸಿಂಹ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.

ಒಟ್ಟಿನಲ್ಲಿ ರೈತರ ಪ್ರತಿಭಟನೆ ದೆಹಲಿಯಷ್ಟೇ ಪ್ರಖರ ವಾಗಿ ಸೋಷಿಯಲ್ ಮೀಡಿಯಾ ಫ್ಲ್ಯಾಟ್ ಫಾರಂಗಳಲ್ಲೂ ನಡೆಯಲಾರಂಭಿಸಿದೆ.

Comments are closed.