ಇಲ್ಲ ಸಲ್ಲದ ಆರೋಪ ಮಾಡಬೇಡಿ : ಯಾವ ಸಿಡಿಗೂ ನಾನು ಹೆದರಲ್ಲ : ಬಿ.ಎಸ್.ಯಡಿಯೂರಪ್ಪ

ದಾವಣಗೆರೆ : ನನಗೆ ಕೇಂದ್ರ ನಾಯಕರ ಆಶೀರ್ವಾದವಿದೆ. ಏನೇ ದೂರು ನೀಡಿದರೂ ನಾನು ಅದನ್ನು ಎದುರಿಸಲು ಸಿದ್ದವಾಗಿದ್ದೇನೆ. ನಾನು ಯಾವುದೇ ಸಿಡಿಗೂ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ 10 ರಿಂದ 12 ಮಂದಿ ಶಾಸಕರು ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಆದರೆ ನನ್ನ ಇತಿಮಿತಿಯೊಳಗೆ ನಾನು ಸಂಪುಟ ವಿಸ್ತರಣೆ ಮಾಡಿದ್ದೇನೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಸಚಿವ ಸ್ಥಾನ ಸಿಗದ ಕುರಿತು ಅಸಮಾಧಾನವಿದ್ದರೆ, ಇಲ್ಲಾ ಯಾವುದೇ ಆರೋಪಗಳಿದ್ದರೂ ಕೂಡ ವರಿಷ್ಠರಿಗೆ ದೂರು ನೀಡಲಿ ಅದನ್ನು ಬಿಟ್ಟು ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ ಎಂದಿದ್ದಾರೆ.

Comments are closed.