ವಿವಾಹವಾಗಲು ಇಷ್ಟವಿಲ್ಲ : ಆತ್ಮಹತ್ಯೆಗೆ ಶರಣಾದ ಇಂಜಿನಿಯರ್

ರಾಂಚಿ : ವಿವಾಹವಾಗಲು ಇಷ್ಟವೆಲ್ಲವೆಂಬ ಕಾರಣ ಮಹಿಳಾ ಇಂಜಿನಿಯರ್ ಓರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ದ್ರೌಪದಿ ಕುಮಾರಿ (26 ವರ್ಷ) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಜಾರ್ಖಂಡ್ ನಲ್ಲಿರುವ ತನ್ನ ಮನೆಯಲ್ಲಿನ ಕೋಣೆಯಲ್ಲಿ ರಾತ್ರಿ ನೇಣಿಗೆ ಶರಣಾಗಿದ್ದಳು. ಬೆಳಗೆದ್ದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ತನಗೆ ಮದುವೆಯಾಗಲು ಇಷ್ಟವಿಲ್ಲ. ಇದೇ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಘಟನೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಮದುವೆಯ ಕಾರಣಕ್ಕೆ ದ್ರೌಪದಿ ಆತ್ಮಹತ್ಯೆ ಮಾಡಿಕೊಂಡಿದ್ರಾ, ಇಲ್ಲಾ ಬೇರೆ ಯಾವುದಾದ್ರೂ ಕಾರಣವಿದೆಯಾ ಅನ್ನೋ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.