ಸೋಮವಾರ, ಏಪ್ರಿಲ್ 28, 2025
HomeBreakingಚಳಿಗಾಲದಲ್ಲಿ ಮಧುಮೇಹಿಗಳ ಆಹಾರ ಸೇವನೆ ಹೀಗಿರಲಿ..

ಚಳಿಗಾಲದಲ್ಲಿ ಮಧುಮೇಹಿಗಳ ಆಹಾರ ಸೇವನೆ ಹೀಗಿರಲಿ..

- Advertisement -
  • ಅಂಚನ್ ಗೀತಾ

ಚಳಿಗಾಲ ಎನ್ನುವುದು ನಿದ್ದೆ ಮಾಡಲು ಎಷ್ಟು ಸುಂದರವೋ…ಅಷ್ಟೆ ಆರೋಗ್ಯವನ್ನು ಹದಗೆಡಿಸುತ್ತದೆ. ಅದ್ರಲ್ಲೂ ಮಧುಮೇಹಿ ಗಳಿಗಂತೂ ಚಳಿಗಾಲದಲ್ಲಿ ಶುಗರ್ ಕಂಟ್ರೋಲ್ ಮಾಡೋದೆ ಒಂದು ಸವಾಲು. ಆದ್ರೆ ಕೆಲವೊಂದು ಆಹಾರದಿಂದ ಮಧುಮೆಹ ಕಂಟ್ರೋಲ್ ಗೆ ಬರುತ್ತೆ. ಅದ್ಯಾವುದು. ಮತ್ತು ಚಳಿಗಾಲದಲ್ಲಿ ರಕ್ಷಣೆ ಹೇಗೆ ಅನ್ನೋದ್ರ ಡಿಟೈಲ್ಸ್ ಇಲ್ಲಿದೆ.

ಮಧುಮೇಹಿಗಳು ಸೇವಿಸಬೇಕಾದ ಕೆಲವು ಆಹಾರಗಳು ಅವರ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡುವುದು. ಚಳಿಗಾಲದಲ್ಲಿಯೇ ಕೆಲವೊಂದು ತರಕಾರಿಗಳು ಹಾಗೂ ಹಣ್ಣುಗಳು ಸಿಗುವುದು. ಇದನ್ನು ಪ್ರತಿಯೊಬ್ಬರು ಬಳಸಬೇಕು. ಅದೇ ರೀತಿಯಾಗಿ ಮಧುಮೇಹಿಗಳು ತಮ್ಮ ಆಹಾರದ ಕಡೆಗೆ ಗಮನ ನೀಡಬೇಕು.

ಚಳಿಗಾಲದಲ್ಲಿ ವ್ಯಾಯಾಮ ಹಾಗೂ ಇತರ ದೈಹಿಕ ಚಟುವಟಿಕೆಗಳು ಕಡಿಮೆ ಆಗುವ ಪರಿಣಾಮವಾಗಿ ಸಹಜವಾಗಿ ರಕ್ತದಲ್ಲಿನ ಗ್ಲುಕೋಸ್ ಹೆಚ್ಚಾಗುವುದು. ಇದಕ್ಕೆ ಮಧುಮೇಹಿಗಳು ಚಳಿಗಾಲದಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು ಎನ್ನುವುದಕ್ಕೆ ಈ ಲೇಖನ ಪ್ರಸ್ತುತಪಡಿಸಲಾಗಿದೆ.

ಕಿತ್ತಳೆ ಹಾಗೂ ಲಿಂಬೆ
ಮಧುಮೇಹದಿಂದ ಬಳಲುತ್ತಿರುವವರಿಗೆ ಸಿಟ್ರಸ್ ಹಣ್ಣುಗಳು ತುಂಬಾ ಲಾಭಕಾರಿ. ಕಿತ್ತಳೆ ಹಾಗೂ ಲಿಂಬೆಯು ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವುದು. ಮಧುಮೇಹಿಗಳು ಸಿಟ್ರಸ್ ಹಣ್ಣುಗಳನ್ನು ತಮ್ಮ ಆಹಾರ ಕ್ರಮದಲ್ಲಿ ಬಳಸಬಹುದು.

ಗೆಣಸು
ಮಧುಮೇಹಿಗಳು ಗೆಣಸು ಸೇವನೆ ಮಾಡಿದರೆ ಒಳ್ಳೆಯದು. ಇದರಲ್ಲಿ ಮಧುಮೇಹಿ ವಿರೋಧಿ ಅಂಶವಿದೆ. ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಪೈಥೋಕೆಮಿಕಲ್, ಬೆಟಾ ಕ್ಯಾರೋಟಿನ್ ಇದರಲ್ಲಿ ಇದೆ. ಇದು ತೂಕ ಸಮತೋಲನದಲ್ಲಿ ಇಡಲು ಹಾಗೂ ಸಕ್ಕರೆ ಮಟ್ಟವನ್ನು ಕಾಪಾಡಲು ತುಂಬಾ ಸಹಕಾರಿ ಆಗಿರುವುದು.

ಪಾಲಕ್
ಹಸಿರೆಲೆ ತರಕಾರಿಗಳು ಪ್ರತಿಯೊಬ್ಬರಿಗೂ ತುಂಬಾ ಒಳ್ಳೆಯದು. ಪಾಲಕ್ ಸೊಪ್ಪನ್ನು ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ತಪ್ಪದೆ ಸೇರಿಸಿಕೊಳ್ಳಬೇಕು. ಇದರಲ್ಲಿ ತುಂಬಾ ಕಡಿಮೆ ಗ್ಲೈಸೆಮಿಕ್ ಮತ್ತು ಪಿಷ್ಠರಹಿತವಾಗಿದೆ. ಮಧುಮೇಹಿಗಳು ಇದನ್ನು ತಮ್ಮ ಆಹಾರದಲ್ಲಿ ಬಳಸಿದರೆ ತುಂಬಾ ಲಾಭಕಾರಿ.

ಕ್ಯಾರೆಟ್
ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರದಲ್ಲಿ ಕ್ಯಾರೆಟ್ ಕೂಡ ಒಂದಾಗಿದ್ದು, ಇದನ್ನು ಹಾಗೆ ಹಸಿಯಾಗಿ ಅಥವಾ ಬೇರೆ ವಿಧ ದಿಂದಲೂ ಮಧುಮೇಹಿಗಳ ಬಳಸಬಹುದು. ಇದು ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಆಗಿ ಏರಿಕೆ ಆಗದು.

ಬೀಜಗಳು
ಬೀಜಗಳಲ್ಲಿ ಅತ್ಯಧಿಕ ಪ್ರಮಾಣದ ನಾರಿನಾಂಶ ಮತ್ತು ಕಡಿಮೆ ಕಾರ್ಬ್ಸ್ ಇದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಉರಿಯೂತ ಕಡಿಮೆ ಆಗುವುದು, ಅದೇ ರೀತಿಯಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ. ಮಧುಮೇಹಿಗಳು ಹೃದಯದ ಆರೋಗ್ಯ ಕಾಪಾಡಲು ತಮ್ಮ ಆಹಾರ ಕ್ರಮದಲ್ಲಿ ಇದನ್ನು ಬಳಸಬಹುದು. ಆದರೆ ಅತಿಯಾಗಿ ಸೇವನೆ ಮಾಡದೆ ಇದ್ದರೆ ಒಳ್ಳೆಯದು.

ಮೀನು
ಮಾಂಸಹಾರಿಗಳು ತಮ್ಮ ಆಹಾರ ಕ್ರಮದಲ್ಲಿ ತಪ್ಪದೆ ಮೀನನ್ನು ಸೇರಿಸಿಕೊಳ್ಳಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಲ್ಲಿ ಆರೋಗ್ಯಕಾರಿ ಕೊಬ್ಬು ಇದ್ದು, ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ತಡೆಯುವುದು. ಮಧುಮೇಹಿಗಳು ತಪ್ಪದೆ ಇದನ್ನು ಆಹಾರದಲ್ಲಿ ಬಳಸಬೇಕು.

ಮಧುಮೇಹಿಗಳಿಗೆ ಚಳಿಗಾಲದಲ್ಲಿ ತಮ್ಮ ಆಹಾರ ಕ್ರಮದಲ್ಲಿ ಏನಿರಬೇಕು ಎಂದು ತಿಳಿದಿದೆ. ಇದನ್ನು ಬಳಸಿಕೊಂಡು ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಂಗುಡೆ ಮೀನು ತಿಂದ್ರೆ ತೂಕ ಇಳಿಯುತ್ತೆ-ಮಧುಮೇಹ ನಿಯಂತ್ರಣಕ್ಕೆ ಬರುತ್ತೆ. ಹೀಗಾಗಿ ಈ ರೀತಿಯ ಉತ್ತಮ ಆಹಾರ ಸೇವನೆ ಮಾಡಿದ್ರೆ ಮಧುಮೇಹ ಕಂಟ್ರೋಲ್ ಗೆ ಬರುತ್ತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular