ಭಾನುವಾರ, ಜೂನ್ 15, 2025
HomeBreakingಹುಣಸೋಡು ದುರಂತ ಪ್ರಕರಣ : ಉನ್ನತ ತನಿಖೆಗೆ ಸಿಎಂ ಆದೇಶ : ಕ್ರಷರ್ ಮಾಲೀಕ ಅರೆಸ್ಟ್

ಹುಣಸೋಡು ದುರಂತ ಪ್ರಕರಣ : ಉನ್ನತ ತನಿಖೆಗೆ ಸಿಎಂ ಆದೇಶ : ಕ್ರಷರ್ ಮಾಲೀಕ ಅರೆಸ್ಟ್

- Advertisement -

ಶಿವಮೊಗ್ಗ / ಬೆಂಗಳೂರು : ಶಿವಮೊಗ್ಗದ ಹುಣಸೋಡು ಬಳಿಯಲ್ಲಿ ನಡೆದ ದುರಂತ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ನಿನ್ನೆ ರಾತ್ರಿ 10.30 ರ ಸುಮಾರಿಗೆ ಜಿಲೆಟಿನ್ ತುಂಬಿದ್ದ ಲಾರಿ ಸ್ಪೋಟಗೊಂಡು 15ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಪೈಕಿ ಈಗಾಗಲೇ 6 ಮಂದಿಯ ಮೃತ ದೇಹ ಪತ್ತೆಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದ್ದು, ಸ್ಥಳದಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಇಂದು ಸಿಎಂ ಯಡಿಯೂರಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಘಟನೆಯಲ್ಲಿ ಮಡಿದವರಿಗೆ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ದುರಂತಕ್ಕೆ ಕಾರಣವಾಗಿರುವ ಬಿವಿಎಸ್ ಸ್ಪೋನ್ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಡಳಿತದಲ್ಲಿ ಮೂರು ವರ್ಷದ ಮಟ್ಟಿಗೆ ಗಣಿಗಾರಿಕೆ ನಡೆಸಲು ಅನುಮತಿಯನ್ನು ಪಡೆಯಲಾಗಿದ್ದು, ಸುರಕ್ಷಿತ ವಲಯ ಹಾಗೂ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದಂತೆ ಷರತ್ತು ವಿಧಿಸಲಾಗಿತ್ತು.

ಆದರೆ ಕ್ರಷರ್ ಮಾಲೀಕ ಜಿಲ್ಲಾಡಳಿತ ಷರತ್ತನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ಇನ್ನು ಕ್ರಷರ್ ನಡೆಸಲು ಜಾಗ ನೀಡಿರುವ ಅನಿಲ್ ಕುಲಕರ್ಣಿ ಎಂಬವರನ್ನು ಕೂಡ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular