ಅಕ್ರಮ ಆಸ್ತಿ ಗಳಿಕೆ ಆರೋಪ…! ರಾಜ್ಯದ 9 ಅಧಿಕಾರಿಗಳ ಮೇಲೆ ಎಸಿಬಿ ರೇಡ್….!!

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹದಳ ಎಸಿಬಿ ರಾಜ್ಯದ 40 ಕಡೆಗಳಲ್ಲಿ ಒಟ್ಟು 9 ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದೆ.

ಒಟ್ಟು 9 ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರು,ಆಪ್ತರ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯಲ್ಲಿನ ಚಿನ್ನಾಭರಣ,ದಾಖಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಅಲ್ಲದೇ ಈ ಅಧಿಕಾರಿಗಳ ಮೇಲೆ ಎಫ್ಆಯ್ಆರ್ ಕೂಡ ದಾಖಲಿಸಿಕೊಳ್ಳಲಾಗಿದೆ.

ಬಳ್ಳಾರಿ,ವಿಜಯಪುರ,ಕೋಲಾರ,ಮಂಗಳೂರು,ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಎಸಿಬಿ ದಾಳಿ ನಡೆದಿದ್ದು, ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಗಳಿಕೆ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ರಾಜ್ಯ ಹೆದ್ದಾರಿ ನಿಗಮದ ಅಧಿಕಾರಿ ಆರ್.ಪಿ.ಕುಲಕರ್ಣಿ, ಮಂಡ್ಯ ಅರಣ್ಯಾಧಿಕಾರಿ ವೆಂಕಟೇಶ್, ಶ್ರೀಧರಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಕಾರ್ಯನಿರ್ವಾಹಕ ಇಂಜೀನಿಯರ್, ಕೃಷ್ಣನ್ ಎಸ್.ಹೆಬ್ಬೂರು ಉಡುಪಿ ಗ್ರಾಮೀಣ ಅಭಿವೃದ್ಧಿ ಇಲಾಖೆ ಇಂಜೀನಿಯರ್,ಎಚ್.ಆರ್.ಕೃಷ್ಣಪ್ಪ ಕೋಲಾರ ಅಭಿವೃದ್ಧಿ ನಿಗಮದ ಇಂಜೀನಿಯರ್, ಸುರೇಶ್ ಮೊಹ್ರೆ ಬೀದರ್ ಜಿಲ್ಲಾ ಪಂಚಾಯತ್ ವಿಭಾಗದ ಕಿರಿಯ ಸಹಾಯಕ ಇಂಜೀನಿಯರ್,ಸಿದ್ಧರಾಮ್ ಮಲ್ಲಿಕಾರ್ಜುನ್ ವಿಜಯಪುರ ಹೆಸ್ಕಾಂ ನ ಕಾರ್ಯನಿರ್ವಾಹಕ ಇಂಜೀನಿಯರ್, ಎ.ಕೃಷ್ಣಮೂರ್ತಿ ಕೋರಮಂಗಲ ಆರ್.ಟಿ.ಓ ಇನ್ಸಪೆಕ್ಟರ್,ಎ.ಎನ್.ವಿಜಯ್ ಕುಮಾರ್ ಬಳ್ಳಾರಿ ವಿದ್ಯುತ್ ಇನ್ಸಪೆಕ್ಟರ್ ಎಸಿಬಿ ದಾಳಿಗೊಳಗಾದ ಅಧಿಕಾರಿಗಳು.

Comments are closed.