Nalienkumarkateel:ಸಿದ್ಧರಾಮಯ್ಯಗೆ ಧಮ್ ಇದ್ರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲಿ…! ನಳಿನ್ ಕುಮಾರ್ ಕಟೀಲ್ ಸವಾಲು..!!

ಕಾಂಗ್ರೆಸ್ ನ ಸಿಎಂ ಜಗಳದ ಬೆಂಕಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿಷ್ಟು ತುಪ್ಪ ಸುರಿದಿದ್ದು, ಮಾಜಿ ಸಿಎಂ ಸಿದ್ಧರಾಮಯ್ಯನವರಿಗೆ ಧಮ್ ಇದ್ದರೇ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲು ನೋಡೋಣ ಎಂಬ ಬಹಿರಂಗ ಸವಾಲು ಹಾಕಿದ್ದಾರೆ.

ಬೀದರ್ ನಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಕಚೇರಿಗೆ ಕಟ್ಟಡ ಕಾಮಗಾರಿ ವೀಕ್ಷಣೆ ವೇಳೆ ಮಾತನಾಡಿದ  ನಳಿನ್ ಕುಮಾರ್ ಕಟೀಲ್,  ದಲಿತ ಸಿಎಂ ಅನ್ನೋದನ್ನು ಚುನಾವಣೆ ತಂತ್ರದ ತರ ಸಿದ್ಧರಾಮಯ್ಯ ಬಳಕೆ ಮಾಡುತ್ತಾರೆ. ಹಿಂದಿನ ಚುನಾವಣೆಯಲ್ಲಿ ದಲಿತ ಸಿಎಂಗೆ ತಮ್ಮ ಬೆಂಬಲ ಇದೆ ಎಂದಿದ್ದರು.

ಆದರೆ ಚುನಾವಣೆಯಲ್ಲಿ  ಪರಮೇಶ್ವರ್ ಸೋಲಿಸಲು ಏನು ಬೇಕೋ ಎಲ್ಲ ಬಂದೋಬಸ್ತ ಮಾಡಿದರು. ಅದು ಎಲ್ಲರಿಗೂ ಗೊತ್ತಿರುವ ಸಂಗತಿ. ಚುನಾವಣೆಯಲ್ಲಿ ಬಹುಮತ ಬರುವರೆಗೆ ಒಂದೊಂದು ನಾಟಕವಾಡುತ್ತಾರೆ. ಬಳಿಕ ತಾವೇ ಸಿಎಂ ಸ್ಥಾನಕ್ಕೆ ಏರುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಒಳಜಗಳ ಹೆಚ್ಚಿದೆ. ಎಲ್ಲರೂ ಸಿಎಂ ಸ್ಥಾನಕ್ಕೆ ಕಚ್ಚಾಡುತ್ತಿದ್ದಾರೆ. ಬಿಜೆಪಿಯಲ್ಲಿ  ಸಿಎಂ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ. ಸಿಎಂ ಆಗೋರಿಗೆ ಪಕ್ಷದ ಸಿದ್ಧಾಂತ ತತ್ವ ಗೊತ್ತಿರಬೇಕೆಂದು ಟಾಂಗ್ ನೀಡಿದರು.

Comments are closed.