ನನ್ನ‌ ಮತ್ತು ಮುನಿರತ್ನ ಸ್ನೇಹ ಮುಗಿದ ಅಧ್ಯಾಯ…! ಆರ್.ಆರ್. ನಗರದಲ್ಲಿ ನಿಖಿಲ್ ಸ್ಪಷ್ಟನೆ…!!

ಬೆಂಗಳೂರು: ಆರ್.ಆರ್. ನಗರ ಚುನಾವಣಾ ಕಣ ರಂಗೇರುತ್ತಿದ್ದು, ಮೂರು ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಹಾಗೂ ಮುನಿರತ್ನ ನಡುವಿನ ಸ್ನೇಹ ದ‌ ವಿಚಾರ ಮುನ್ನಲೆಗೆ ಬಂದಿದ್ದು, ಅದು ಮುಗಿದ ಅಧ್ಯಾಯ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಆರ್.ಆರ್.ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪ್ರಚಾರ ಕಣಕ್ಕಿಳಿದ ನಿಖಿಲ್ ಕುಮಾರ ಸ್ವಾಮಿ ನಾನು ಜೆಡಿಎಸ್ ಕಾರ್ಯಕರ್ತನಾಗಿ ಪ್ರಚಾರಕ್ಕೆ ಬಂದಿದ್ದೇನೆ. ಎಂದಿಗೂ ಜೆಡಿಎಸ್ ಕಾರ್ಯಕರ್ತರಿಗೆ ವಿಷ ಇಡೋ ಕೆಲಸ ಎಂದಿಗೂ ಮಾಡಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ ತಮ್ಮ ಹಾಗೂ ಮುನಿರತ್ನ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ ಸ್ವಾಮಿ, ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷವನ್ನು ಬಲಿಕೊಡುವುದಿಲ್ಲ. ನನ್ನ ಹಾಗೂ ಮುನಿರತ್ನ ಸ್ನೇಹ ಮುಗಿದ ಅಧ್ಯಾಯ.

ಕುರುಕ್ಷೇತ್ರ ಸಿನಿಮಾದಲ್ಲಿ ನನಗೊಂದು ಪಾತ್ರ ನೀಡಿದ್ದರು. ಸಿನಿಮಾದ ಶೂಟಿಂಗ್ ಸಿನಿಮಾ ಮುಗಿಸಿ ಬಂದಿದ್ದೇನೆ. ಅಲ್ಲಿಗೆ ನನ್ನ ಅವರ ಸಂಬಂಧ, ಸ್ನೇಹ ಮುಗಿದಿದೆ. ನನ್ನ ಮತ್ತು ಮುನಿರತ್ನ ಸ್ನೇಹದ ಬಗ್ಗೆ ಹಬ್ಬಿಸೋ ವದಂತಿಗಳನ್ನು ಕಾರ್ಯಕರ್ತರು ನಂಬಬಾರದು ಎಂದಿದ್ದಾರೆ.

ಅಷ್ಟೇ ಅಲ್ಲ ಚುನಾವಣೆಯಲ್ಲಿ ಸೋತು ಪಕ್ಷ ಬಿಡೋ ಅಭ್ಯರ್ಥಿಗಳಿಗಿಂತ ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದ ಕಾರ್ಯಕರ್ತರಿಗೆ ಅವಕಾಶ ನೀಡೋ ಮೂಲಕ ಜೆಡಿಎಸ್ ಗೆದ್ದಿದೆ ಎನ್ನುವ ಮೂಲಕ ಚಿತ್ರನಟಿ ಅಮೂಲ್ಯ ಹಾಗೂ ಅವರ ಮಾವನ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯನ್ನು ಟೀಕಿಸಿದ್ದಾರೆ.

Comments are closed.