Sumalatha-hdk: ಪ್ರಜ್ವಲ್ ರೇವಣ್ಣ ನೋಡಿ ಮಾತನಾಡುವುದನ್ನು ಕಲಿಯಿರಿ….! ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸಲಹೆ…!!

ಮಂಡ್ಯ: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ವಾಕ್ಸಮರ್ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿಯಾಗಿ ಮಹಿಳೆಯರ ಬಗ್ಗೆ ಹೇಗೆ ಮಾತನಾಡಬೇಕೆಂಬುದೇ ಅವರಿಗೆ  ಗೊತ್ತಿಲ್ಲ. ಜೆಡಿಎಸ್ ನ ಪ್ರಜ್ವಲ್ ರೇವಣ್ಣ ನೋಡಿ ಕಲಿಯಿರಿ ಎಂದು ಸುಮಲತಾ ಟಾಂಗ್ ನೀಡಿದ್ದಾರೆ.

ಕೆಆರ್ಎಸ್ ಆಣೆಕಟ್ಟು ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತ ಮಾಜಿ ಸಿಎಂ ಎಚ್ಡಿಕೆ ಬಿರುಕು ಬಿಟ್ಟಿದ್ದರೇ ಸಂಸದರನ್ನೇ ಅಡ್ಡ ಮಲಗಿಸಿ ಎಂದಿದ್ದರು.

ಈ ಮಾತು ಕಳೆದ ಎರಡು ದಿನಗಳಿಂದ ಸುಮಲತಾ ಹಾಗೂ ಎಚ್ಡಿಕೆ ನಡುವಿನ ವಾಕ್ಸಮರ್ ಕ್ಕೆ ಕಾರಣವಾಗಿದೆ. ಕೆಆರ್ಎಸ್ ಆಣೆಕಟ್ಟಿನ ಸುತ್ತಮುತ್ತಲು ಇರುವ ಸೂಕ್ಷ್ಮ ಪ್ರದೇಶದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆದಿದ್ದು, ಇದರಿಂದ ಆಣೆಕಟ್ಟಿನ ಸುರಕ್ಷತೆ ಬಗ್ಗೆ ಸುಮಲತಾ ಕಳವಳ ವ್ಯಕ್ತಪಡಿಸಿದ್ದರು.

ಆದರೆ ಸುಮಲತಾ ಮಾತಿಗೆ ಆಕ್ಷೇಪ ವ್ಯಕ್ತಪಡಿಸುವ ಭರದಲ್ಲಿ ಮಾಜಿಸಿಎಂ ಕುಮಾರಸ್ವಾಮಿ ಅಸಭ್ಯವಾಗಿ ಮಾತನಾಡಿದ್ದರು.  ಕುಮಾರಸ್ವಾಮಿ ಹೇಳಿಕೆಗಳಿಗೆ ಸಂಸದೆ ಸುಮಲತಾ ಸರಿಯಾಗಿ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಎಲ್ಲ ನಡವಳಿಕೆಗಳು ನಕಲಿ. ಚುನಾವಣೆಯಲ್ಲಿ ನನ್ನ ವಿರುದ್ಧ ನಕಲಿ ಸುಮಲತಾ ಅಸ್ತ್ರ ಬಳಸಿದ್ದರು.

ಅವರಿಗೆ ಸಂಸ್ಕಾರವಿಲ್ಲ. ಜೆಡಿಎಸ್ ನ ಯುವ ಸಂಸದ ಪ್ರಜ್ವಲ್ ರೇವಣ್ಣ ನೋಡಿ ಕುಮಾರಸ್ವಾಮಿಯವರು ಪಾಠ ಕಲಿಯಲಿ. ಪ್ರಜ್ವಲ್ ರೇವಣ್ಣ ಒಬ್ಬರೇ ಜೆಡಿಎಸ್ ನ ಆಶಾಕಿರಣ. ಪ್ರಜ್ವಲ್ ಗೆ ಹೇಗೆ ಮಾತನಾಡಬೇಕು, ಹಿರಿಯರನ್ನು ಹೇಗೆ ಗೌರವಿಸಬೇಕು ಎಂಬ ಅರಿವಿದೆ ಎಂದು ಪ್ರಜ್ವಲ್ ರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡುವಾಗಲು ಸಂಸದ ಪ್ರಜ್ವಲ್ ರೇವಣ್ಣ ವಿಧೇಯತೆಯಿಂದ ಮಾತನಾಡುತ್ತಾರೆ. ಹಿರಿಯರ ಬಗ್ಗೆ ಗೌರವವಿದೆ. ಅವರನ್ನು ನೋಡಿ ಕುಮಾರಸ್ವಾಮಿ ಕಲಿಯಲಿ ಎಂದು ಸಲಹೆ ನೀಡಿದ್ದಲ್ಲದೇ, ಯಾವುದೇ ಆಡಿಯೋ ವಿಡಿಯೋ ಬಾಂಬ್ ಇದ್ದರೂ ರಿಲೀಸ್ ಮಾಡಲಿ ಎಂದು ನಾನು ಚಾಲೆಂಜ್ ಮಾಡುತ್ತೇನೆ ಎಂದಿದ್ದಾರೆ.

Comments are closed.