ಬಾಳಿ ಬದುಕಬೇಕಿದ್ದ ಸ್ಯಾಂಡಲ್ ವುಡ್ ನ ಯುವ ನಟ ಚಿರಂಜೀವಿ ಸರ್ಜಾ ಅಗಲಿಕೆಗೆ ಒಂದು ವರ್ಷ ತುಂಬುತ್ತಿದೆ. ಹೊಸಕನಸೊಂದು ಮೂಡುತ್ತಿರುವಾಗಲೇ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ ಚಿರುವನ್ನು ಸರ್ಜಾ ಕುಟುಂಬ ಭಾವುಕ ಬರಹದೊಂದಿಗೆ ನೆನಪಿಸಿಕೊಂಡಿದೆ. ಈ ಪೋಸ್ಟ್ ಗೆ ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಜೂನ್ 7, 2020 ಸ್ಯಾಂಡಲ್ ವುಡ್ ನ ಒಂದು ಕರಾಳ ದಿನ. ಯುವಸಾಮ್ರಾಟ್ ಚಿರು ತೀವ್ರ ಹೃದಯಾಘಾತದಿಂದ ಅಗಲಿ ಹೋದ ದಿನ. ನಾಳೆ ಚಿರು ನಿಧನಕ್ಕೆ ಒಂದು ವರ್ಷ ತುಂಬಲಿದೆ. ಅಗಲಿದ ಮಗನ ನೆನಪಿನಲ್ಲಿ ಸರ್ಜಾ ಕುಟುಂಬ ಭಾವುಕ ಬರಹವೊಂದನ್ನು ಹಂಚಿಕೊಂಡಿದೆ.
ನಮ್ಮ ಹೃದಯದ ಚಿರಂಜೀವಿ ಎಂದು ಆರಂಭವಾಗುತ್ತಿರುವ ಬರಹದಲ್ಲಿ ನೀನು ದೇವರಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ. ಈ 365 ದಿನದಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು.
ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ,ಪ್ರೇಮ,ಸ್ನೇಹ,ಉದಾರಗುಣಗಳು ಹಾಗೂ ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ ಎಂದಿರುವ ಕುಟುಂಬ, ನಿನ್ನ ಆತ್ಮ ಸದಾ ಶಾಂತಿಯಿಂದ ಇರಬೇಕು. ಆಪ್ರಾರ್ಥನೆಯಲ್ಲೇ ನಿನ್ನ ಕುಟುಂಬವಿದೆ ಎಂದಿದ್ದಾರೆ.
ಚಿರು ಅಗಲಿದಾಗ ಪತ್ನಿ ಮೇಘನಾ ರಾಜ್ 5 ಗರ್ಭಿಣಿಯಾಗಿದ್ದು, ಪತಿ ಅಗಲಿದೆ ನಾಲ್ಕು ತಿಂಗಳ ಬಳಿಕ ಅಂದ್ರೇ ಅಕ್ಟೋಬರ್ 22 ರಂದು ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಈಗ ಚಿರು ಮಗನಿಗೆ 7 ತಿಂಗಳಾಗಿದೆ.
ನಾಳೆ ಚಿರು ಕುಟುಂಬಸ್ಥರು ಹಾಗೂ ಮೇಘನಾ ರಾಜ್ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
Comments are closed.