ಚಿರು ಅಗಲಿಕೆ ಒಂದು ವರ್ಷ….!! ಭಾವುಕ ನುಡಿಯೊಂದಿಗೆ ಶೃದ್ಧಾಂಜಲಿ ಸಲ್ಲಿಸಿದ ಸರ್ಜಾ ಕುಟುಂಬ…!!

ಬಾಳಿ ಬದುಕಬೇಕಿದ್ದ ಸ್ಯಾಂಡಲ್ ವುಡ್ ನ ಯುವ ನಟ ಚಿರಂಜೀವಿ ಸರ್ಜಾ ಅಗಲಿಕೆಗೆ ಒಂದು ವರ್ಷ ತುಂಬುತ್ತಿದೆ. ಹೊಸಕನಸೊಂದು ಮೂಡುತ್ತಿರುವಾಗಲೇ ಗರ್ಭಿಣಿ ಪತ್ನಿಯನ್ನು ಬಿಟ್ಟು ಅಗಲಿದ ಚಿರುವನ್ನು ಸರ್ಜಾ ಕುಟುಂಬ ಭಾವುಕ ಬರಹದೊಂದಿಗೆ ನೆನಪಿಸಿಕೊಂಡಿದೆ. ಈ ಪೋಸ್ಟ್ ಗೆ ಅಭಿಮಾನಿಗಳು ಕಣ್ಣೀರಾಗಿದ್ದಾರೆ.

ಜೂನ್ 7, 2020 ಸ್ಯಾಂಡಲ್ ವುಡ್ ನ ಒಂದು ಕರಾಳ ದಿನ. ಯುವಸಾಮ್ರಾಟ್ ಚಿರು ತೀವ್ರ ಹೃದಯಾಘಾತದಿಂದ ಅಗಲಿ ಹೋದ ದಿನ. ನಾಳೆ ಚಿರು ನಿಧನಕ್ಕೆ ಒಂದು ವರ್ಷ ತುಂಬಲಿದೆ. ಅಗಲಿದ ಮಗನ ನೆನಪಿನಲ್ಲಿ ಸರ್ಜಾ ಕುಟುಂಬ ಭಾವುಕ ಬರಹವೊಂದನ್ನು ಹಂಚಿಕೊಂಡಿದೆ.

https://kannada.newsnext.live/bollywood-actor-dilip-kumar-admitted-hospital/

ನಮ್ಮ ಹೃದಯದ ಚಿರಂಜೀವಿ ಎಂದು ಆರಂಭವಾಗುತ್ತಿರುವ ಬರಹದಲ್ಲಿ  ನೀನು ದೇವರಮನೆಗೆ ಹೋಗಿ  ಒಂದು ವರುಷವಾಯಿತು.  ಎಷ್ಟು ಬೇಗ ಒಂದು ವರ್ಷ. ಈ 365 ದಿನದಲ್ಲಿ  ನಿನ್ನ ನೆನೆಯದ ದಿನಗಳೇ ಇಲ್ಲ.  ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ.  ಮರೆಯಲಾಗದ ಚಿರ ನೆನಪುಗಳು.

https://kannada.newsnext.live/puc-repeaters-private-students-tension/

ಕುಟುಂಬದ ಮೇಲೆ ನಿನಗಿದ್ದ ಅಪಾರವಾದ  ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ,ಪ್ರೇಮ,ಸ್ನೇಹ,ಉದಾರಗುಣಗಳು ಹಾಗೂ ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ ಎಂದಿರುವ ಕುಟುಂಬ, ನಿನ್ನ ಆತ್ಮ ಸದಾ ಶಾಂತಿಯಿಂದ ಇರಬೇಕು.  ಆಪ್ರಾರ್ಥನೆಯಲ್ಲೇ ನಿನ್ನ ಕುಟುಂಬವಿದೆ ಎಂದಿದ್ದಾರೆ.

https://kannada.newsnext.live/hindi-bollywood-minorgirl-missuse-actor-pearlpuri-arrest-mumbai-police/

ಚಿರು ಅಗಲಿದಾಗ ಪತ್ನಿ ಮೇಘನಾ ರಾಜ್ 5 ಗರ್ಭಿಣಿಯಾಗಿದ್ದು, ಪತಿ ಅಗಲಿದೆ ನಾಲ್ಕು ತಿಂಗಳ ಬಳಿಕ ಅಂದ್ರೇ ಅಕ್ಟೋಬರ್ 22 ರಂದು ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಈಗ ಚಿರು ಮಗನಿಗೆ 7 ತಿಂಗಳಾಗಿದೆ.

ನಾಳೆ ಚಿರು ಕುಟುಂಬಸ್ಥರು ಹಾಗೂ ಮೇಘನಾ ರಾಜ್ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.  

Comments are closed.