ರಿಯಲ್ ಸಾರಥಿ ಭೇಟಿಯಾದ ರೀಲ್ ಸಾರಥಿ….! ಸುಂದರ ಮಾಮಾ ಮನೆಗೆ ಬಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್…!!

ಸಾಗಿಬಂದ ಕಷ್ಟದ ಹಾದಿಯನ್ನು ನೆನಪಿಟ್ಟುಕೊಳ್ಳುವ ಸ್ವಭಾವ ಕೆಲವರಿಗಷ್ಟೇ ಇರುತ್ತದೆ. ಅಂಥವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಬಾಕ್ಸಾಫೀಸ್ ನ ಸಾರಥಿಯಾಗಿ ಬೆಳೆದ ದರ್ಶನ್ ಚಿಕ್ಕಂದಿನಲ್ಲಿ ತಮ್ಮ ಸಾರಥಿಯಾಗಿದ್ದವರನ್ನು ನೆನಪಿಸಿಕೊಂಡು ಗೌರವಿಸುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೈಸೂರಿನಲ್ಲಿ ಓದಿದ ದರ್ಶನ್ ಮೈಸೂರಿನಲ್ಲಿ ತಮ್ಮನ್ನು ಸ್ಕೂಲ್ ಗೆ ಕರೆದೊಯ್ಯುತ್ತಿದ್ದ ಬಸ್ ಚಾಲಕನ ಮನೆಗೆ ಭೇಟಿ ನೀಡಿ ಅವರ 80 ನೇ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಗೌರವಿಸಿ ಮಾದರಿಯಾಗಿದ್ದಾರೆ.

ತೆರಸಿಯನ್ ಕಾನ್ವೆಂಟ್ ನ ಲ್ಲಿ ಓದು ಪ್ರತಿಯೊಬ್ಬರಿಗೂ ಚಾಲಕರಾಗಿರುವ ಸುಂದರ್ ರಾಜ್ ಚಿರಪರಿಚಿತರು. ಪ್ರತಿಯೊಬ್ಬರು ಅವರನ್ನು ಸುಂದರ್ ಮಾಮಾ ಎಂದು ಕರೆಯುತ್ತಾರೆ. ದರ್ಶನ್ ಓದುವಾಗಲೂ ಕೂಡ ಸುಂದರಮಾಮಾ ಚಾಲಕರಾಗಿದ್ದರು. ‘ಹೀಗಾಗಿ ಅವರನ್ನು ಮರೆಯದೇ ನೆನಪಿಟ್ಟುಕೊಂಡ  ದರ್ಶನ್ ಮನೆಗೆ ಭೇಟಿ ನೀಡಿದ್ದಾರೆ.

ಅವರನ್ನು ಗೌರವಿಸಿ, ಅಪ್ಪಿಕೊಂಡು ಪ್ರೀತಿನಿಂದ ಮಾತನಾಡಿ ಶುಭ ಹಾರೈಸಿದ್ದಾರೆ. ಸ್ಯಾಂಡಲ್ ವುಡ್ ಸಾರಥಿಯೇ ಮನೆಗೆ ಬಂದಿದ್ದನ್ನು ನೋಡಿ ಖುಷಿಯಾದ  ಸುಂದರ ರಾಜ್ ಮನೆಯವರು ದರ್ಶನ್ ಸರಳತೆಯನ್ನು ಮನದುಂಬಿ ಶ್ಲಾಘಿಷಿದ್ದಾರೆ.

ಸುಂದರ ರಾಜ್ ಭೇಟಿಯಾದ ಸಂಗತಿಯನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರೋ ದರ್ಶನ್, ಇಂದು ಸ್ಯಾಂಡಲ್ ವುಡ್ ನಿಜವಾದ ಸಾರಥಿಯನ್ನು ಭೇಟಿ ಮಾಡಿ ಶುಭಹಾರೈಸಿದೆ. ಸುಂದರಮಾಮಾ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ ಎಂದಿದ್ದಾರೆ.

Comments are closed.