ಸಂಜನಾ ಬೇಲ್ ಬೆನ್ನಲ್ಲೇ ಮತ್ತೊಂದು ಬಾಂಬ್…! ಇಂದ್ರಜಿತ್ ಲಂಕೇಶ್ ಹೇಳಿದ್ದೇನು ಗೊತ್ತಾ…?!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜನಾ ಶತಾಯ ಗತಾಯ ಬೇಲ್ ಪಡೆದಿದ್ದು ಜೈಲಿನಿಂದ ಹೊರಬಂದಿದ್ದಾರೆ. ಈ ಮಧ್ಯೆ ಸಂಪೂರ್ಣ ಪ್ರಕರಣದ ಕುರಿತು ಮಾತನಾಡಿದ್ದ ನಟ ಹಾ ಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ಸಂಜನಾ ಹಾಗೂ ರಾಗಿಣಿ ದಿವೇದಿ ಜೈಲು ಸೇರಿದ್ದು ಇವರೊಂದಿಗೆ ಇನ್ನು ಹಲವರು ಜೈಲಿನ ಹವಾ ತಿನ್ನುತ್ತಿದ್ದಾರೆ‌.ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬೇಲ್ ನೀಡುವಂತೆ ಇಬ್ಬರೂ ನಟಿಮಣಿಯರು ನ್ಯಾಯಾಲಯದ ಮೊರೆ ಹೋಗಿದ್ದರೂ ನಟಿ ರಾಗಿಣಿಗೆ ಜಾಮೀನು ಸಿಕ್ಕಿಲ್ಲ.

ಆದರೇ ಅನಾರೋಗ್ಯದ ಕಾರಣ ಮುಂದಿಟ್ಟು ನಟಿ ಸಂಜನಾ ಗಲ್ರಾನಿ ಜಾಮೀನು ಪಡೆದುಕೊಂಡಿದ್ದು ಈಗಾಗಲೇ ಜಾಮೀನು ಪ್ರಕ್ರಿಯೆ ಕೂಡ ಪೂರ್ಣಗೊಳಿಸಿದ್ದಾರೆ.

ಈ ಮಧ್ಯೆ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಸೇವನೆ,ಮಾರಾಟ ಜಾಲ ಸಕ್ರಿಯವಾಗಿದೆ ಎಂದು ಮೊದಲ ಬಾರಿಗೆ ಸತ್ಯವನ್ನು ಮುಕ್ತವಾಗಿ ಹೇಳಿದ್ದ ನಟ-ನಿರ್ದೇಶನ ಇಂದ್ರಜಿತ್ ಲಂಕೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.ತಮ್ಮ ನಿರ್ಮಾಣದ ಶಕೀಲ ಚಿತ್ರದ ರಿಲೀಸ್ ಗೆ ಸಂಬಂಧಿಸಿದ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ತನಿಖೆಯ ಕುರಿತು ತಮ್ಮ ಅಸಮಧಾನ ಹಂಚಿಕೊಂಡಿದ್ದಾರೆ.

ನಾನು ನನಗೆ ಗೊತ್ತಿರುವ ಸಂಗತಿಗಳನ್ನು ಹೇಳಿಕೊಂಡಿದ್ದೆ.‌ಅಗತ್ಯ ಸಾಕ್ಷಿಯನ್ನು ನೀಡಿದ್ದೇ‌ನೆ. ತನಿಖೆ ನಡೆದಿದೆ. ಆದರೆ ಕೆಲವರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಹಾಗಿದ್ದರೇ ಕನ್ನಡ ಚಿತ್ರರಂಗದಲ್ಲಿ ನಟಿಯರು ಮಾತ್ರ ಡ್ರಗ್ಸ್ ತಗೋತಾರಾ? ಯಾವ ನಟರಿಗೂ ಈ ಹವ್ಯಾಸ ಇಲ್ಲವೇ? ಯಾಕೆ ನಟಿಯರನ್ನು ಮಾತ್ರ ಟಾರ್ಗೆಟ್ ಮಾಡಿದ್ದೀರಾ ಎಂದು ಕೇಳುತ್ತಾರೆ.

ಇದು ನಿಜ. ನಾನು ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಹೇಗೆಲ್ಲ ಬಳಕೆಯಾಗುತ್ತಿದೆ. ಯಾರೆಲ್ಲ ಇದ್ದಾರೆ ಎಂಬುದನ್ನು ಹೇಳಿದ್ದೆ. ಆದರೆ ಯಾವುದೇ ನಟರ ಬಗ್ಗೆ ಪ್ರಸ್ತಾಪವಿಲ್ಲ. ಇದು ಸರಿಯಲ್ಲ ಎಂದು ತನಿಖೆಯ ಕುರಿತು ಇಂದ್ರಜಿತ್ ಲಂಕೇಶ್ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ತಗ್ಸ್ ಪ್ರಕರಣದಲ್ಲಿ ಇದುವರೆಗೂ 12 ಕ್ಕೂ ಹೆಚ್ಚು ಜನರು ಅರೇಸ್ಟ್ ಆಗಿದ್ದು, ಸಂಜನಾ-ರಾಗಿಣಿ ಕೂಡ ಜೈಲು ಸೇರಿದ್ದರು.

ಇನ್ನು ಸ್ಟಾರ್ ಕಪಲ್ಸ್ ಐಂದ್ರಿತಾ ರೈ ಮತ್ತು ದಿಗಂತ್ ವಿಚಾರಣೆ ನಡೆದಿದ್ದು ಅವರನ್ನು ಬಿಟ್ಟು ಕಳುಹಿಸಲಾಗಿದೆ. ಇದನ್ನು ಹೊರತುಪಡಿಸಿ ಬ್ರಹ್ಮಗಂಟು ಸೀರಿಯಲ್ ನ ಗೀತಾ, ಆಂಕ್ಯರ್ ಅನುಶ್ರೀ ಸೇರಿ ಹಲವರು ವಿಚಾರಣೆಗೆ ಹಾಜರಾಗಿದ್ದಾರೆ.

Comments are closed.