ಸ್ಯಾಂಡಲ್ ವುಡ್ ನಲ್ಲಿ ಸಮಕಾಲಿನ ನಟರು ಎನ್ನಿಸಿರೋ ದಚ್ಚು ಹಾಗೂ ಕಿಚ್ಚ್ ಸದ್ಯ ತಮ್ಮದೇ ಆದ ವರ್ಚಸ್ಸಿನಿಂದ ಬೆಳೆದುನಿಂತಿದ್ದಾರೆ. ಈ ಮಧ್ಯೆ ದಚ್ಚು ಜೊತೆ ಲಾಲಿಹಾಡಿದ್ದ ಸ್ಯಾಂಡಲ್ ವುಡ್ ಚೆಲುವೆ ಈಗ ಕಮ್ ಬ್ಯಾಕ್ ಮಾಡಿದ್ದು, ಕಿಚ್ಚ್ ನ ಮಮ್ಮಿಯಾಗೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಕೇರಳ ಮೂಲದ ಚೆಲುವೆ ಅಭಿರಾಮಿ, ಮಲೆಯಾಳಂನಿಂದ ಸಿನಿ ಜರ್ನಿ ಆರಂಭಿಸಿ, ಕನ್ನಡ,ತಮಿಳು ಹಾಗೂ ತೆಲುಗಿನಲ್ಲೂ ಮಿಂಚಿದರು. ಕನ್ನಡದಲ್ಲಿ ನಟ ದರ್ಶನ್ ಗೆ ಜೊತೆಯಾದ ಅಭಿರಾಮಿ ಲಾಲಿಹಾಡು ಸಿನಿಮಾದಲ್ಲಿ ನಟಿಸಿ ಸಖತ್ ಮನಸೆಳೆಯುವ ಅಭಿನಯ ನೀಡಿದ್ದರು.

ತಮ್ಮ ನಟನೆಗೆ 2003 ರಲ್ಲಿ ರಾಜ್ಯ ಪ್ರಶಸ್ತಿ ಪಡೆದ ಅಭಿರಾಮಿ, ಅದಾದ ಬಳಿಕ ರಕ್ತಕಣ್ಣೀರು,ಶ್ರೀರಾಮ್ ದಲ್ಲೂ ನಟಿಸಿ ಗಮನಸೆಳೆದಿದ್ದರು. ಇದಾದ ಬಳಿಕ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಅಭಿರಾಮಿ ಈಗ ಸಖತ್ ರ್ರೀ ಎಂಟ್ರಿ ನೀಡ್ತಿದ್ದಾರೆ.

ವಿದೇಶದಿಂದ ಸ್ಯಾಂಡಲ್ ವುಡ್ ಗೆ ಮರಳಿ ಚೌಕ ಹಾಗೂ ದಶರಥ ಸಿನಿಮಾದಲ್ಲಿ ನಟಿಸಿದ್ದ ಅಭಿರಾಮಿ ಈಗ ಸುದೀಪ್ ನಟನೆಯ ಬಹುನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ದಲ್ಲಿ ಸುದೀಪ್ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಕೋಟಿಗೊಬ್ಬ-3 ಸಿನಿಮಾ ಕೊರೋನಾದಿಂದ ಬಿಡುಗಡೆಯಾಗದೇ ಉಳಿದಿದ್ದು, ಕೊರೋನಾ ಸಂಕಷ್ಟದ ಬಳಿಕ ತೆರೆ ಕಾಣಲಿದೆ. ನಾಯಕಿ ಪಾತ್ರದಿಂದ ನಾಯಕನ ತಾಯಿ ಪಾತ್ರಕ್ಕೆ ಭಡ್ತಿ ಪಡೆದ ಅಭಿರಾಮಿ ನೋಡೋಕೆ ಪ್ರೇಕ್ಷಕರು ಕಾಯ್ತಿದ್ದಾರೆ.
