ಬಿಗ್ ಬಾಸ್ ಶೋದ ಕೊನೆಯ ಕಂತಿನಲ್ಲಿ ವಿಜೇತರ ಘೋಷಣೆ….! ಸುದೀಪ್ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ…!!

ಕೊರೋನಾ ಎರಡನೇ ಅಲೆಗೆ ಮನೋರಂಜನಾ ಕ್ಷೇತ್ರ ಸೊರಗಿದ್ದು, ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣ ನಿಲ್ಲಿಸಲಾಗಿದೆ. ಹೀಗಾಗಿ ಕನ್ನಡ ಬಿಗ್ ಬಾಸ್ ಶೋ ಸೀಸನ್ 8 ನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಇಂದು ರಿಯಾಲಿಟಿ ಶೋನ ಕೊನೆಯ ಕಂತು ಪ್ರಸಾರವಾಗಲಿದ್ದು, ಇದರಲ್ಲಿ ಶೋ ವಿಜೇತರು ಯಾರು ಎಂಬುದನ್ನು ಕಿಚ್ಚ ಸುದೀಪ್ ಘೋಷಿಸಿದ್ದಾರೆ.

https://kannada.newsnext.live/after-coronaeffect-black-fungus-infection-mucormycosis-bangalore-medicine/

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ಮಿತಿಮೀರಿದ್ದರಿಂದ ಸರ್ಕಾರದ ಸೂಚನೆಯಂತೆ ಶೂಟಿಂಗ್ ಹಾಗೂ ಶೋ ನಿಲ್ಲಿಸುತ್ತಿರುವುದಾಗಿ ಶನಿವಾರ ಕಲರ್ಸ್ ಕನ್ನಡ ವಾಹಿನಿ ಘೋಷಿಸಿತ್ತು. ಭಾನುವಾರ ಶೂಟ್ ಮಾಡಲಾದ ಕೊನೆಯ ಎಪಿಸೋಡ್ ನ್ನು ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ.

https://kannada.newsnext.live/cet-exams-postpone-karnataka-kea-order/

ಆ ಪ್ರಕಾರ ಬುಧವಾರವಾದ ಇಂದು ಕೊನೆಯ ಕಂತು ಪ್ರಸಾರವಾಗಲಿದ್ದು, ಈ ಸಂಚಿಕೆಯಲ್ಲಿ ಬಿಗ್ ಬಾಸ್ ಸೀಸನ್ 8 ರ ವಿಜೇತರು ಯಾರು ಎಂಬುದರ ಬಗ್ಗೆ ಸುದೀಪ್ ಮಾತನ್ನಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳು ಶೋದಿಂದ ಹೊರಬರುವ ಮುನ್ನ ಅವರೊಂದಿಗೆ ಕಿಚ್ಚ್ ಸುದೀಪ್ ಆಡಿದ ಮಾತುಗಳ ವಿಡಿಯೋ ಪ್ರೋಮೋವೊಂದನ್ನು  ಹಂಚಿಕೊಂಡಿದೆ.

https://www.instagram.com/p/COwgCrnF52V/?igshid=u7fdl660r1i5

ಈ ವಿಡಿಯೋದಲ್ಲಿ ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ತಾವು ಶೋದ ಆಂಕ್ಯರಿಂಗ್ ನಿಂದ ದೂರ ಉಳಿದಿದ್ದು, ಬಳಿಕ ಶೋ ದ ಚಿತ್ರೀಕರಣಕ್ಕೆ ಕೊರೋನಾ ಅಡ್ಡಿಯಾಗಿದ್ದು ಸೇರಿದಂತೆ ಹಲವು ವಿಚಾರವನ್ನು ಸ್ಪರ್ಧಿಗಳ ಜೊತೆ ಹಂಚಿಕೊಂಡಿರುವ ಸುದೀಪ್ ಕೊನೆಯಲ್ಲಿ ನನ್ನ ಪ್ರಕಾರ ಸೀಸನ್ 8 ಕ್ಕೆ ತಾವೆಲ್ಲವೂ ವಿನ್ನರ್ ಗಳು ಎಂದು ಘೋಷಿಸಿದ್ದಾರೆ.

https://kannada.newsnext.live/lockdown-police-asult-highcourt-warning/

ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಮಲೆಯಾಳಂ ಬಿಗ್ ಬಾಸ್ ಶೋವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಅಲ್ಲಿ ವಿಜೇತರನ್ನು ಘೋಷಿಸಲಾಗಿರಲಿಲ್ಲ. ಈಗ ಎರಡನೇ ಅಲೆಯ ವೇಳೆ ಕನ್ನಡ ಬಿಗ್ ಬಾಸ್ ಶೋ ನಿಲ್ಲಿಸಲಾಗುತ್ತಿದ್ದು, ಸಂಜೆ ಪ್ರಸಾರವಾಗುವ ಶೋದಲ್ಲಿ ವಿಜೇತರ ಬಗ್ಗೆ ಅಪ್ಡೇಟ್ ಸಿಗುವ ಸಾಧ್ಯತೆ ಇದೆ.

ಯಾವಾಗಲೂ ಅದ್ದೂರಿ ಕಾರ್ಯಕ್ರಮದ ಮೂಲಕ ಕೊನೆಗೊಳ್ಳುತ್ತಿದ್ದ ಬಿಗ್ ಬಾಸ್ ಈ ಭಾರಿ ಕೊರೋನಾ ಕಾರಣಕ್ಕೆ ಅರ್ಧದಲ್ಲೇ ಮೊಟಕುಗೊಳ್ಳುತ್ತಿದ್ದು, ಸದಸ್ಯರಿಗೆ ಹೊರಜಗತ್ತಿನ ವಿಡಿಯೋ ತೋರಿಸಿ ಬೀಳ್ಕೊಡಲಾಗಿದೆ.

Comments are closed.