ತೌಕ್ಟೇ‌ ಚಂಡ ಮಾರುತ : ಮೀನುಗಾರರಿಗೆ ವಾರ್ನಿಂಗ್ ಕೊಟ್ಟ ಕೋಸ್ಟ್ ಗಾರ್ಡ್

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ತೌಕ್ಟೇ‌ ಚಂಡ ಮಾರುತ ಅಪ್ಪಳಿಸಲಿದ್ದು, ಮೀನುಗಾರರು ಮುನ್ನೆಚ್ಚರಿಕಾ ಕ್ರಮವಾಗಿ ಬಂದರು ಗಳಿಗೆ ತೆರಳುವಂತೆ ಇಂಡಿಯನ್ ಕೋಸ್ಟ್ ಗಾರ್ಡ್ ಎಚ್ಚರಿಕೆ ನೀಡಿದೆ.

ಮೇ 14 ರಂದು ಅರಬ್ಬಿ ಸಮುದ್ರಕ್ಕೆ ತೌಕ್ಟೇ‌ ಚಂಡ ಮಾರುತ ಅಪ್ಪಳಿಸ ಲಿದ್ದು, ಕರ್ನಾಟಕ ಕರಾವಳಿ ಭಾಗದಲ್ಲಿ  ಮೇ 14 ಮತ್ತು 15 ರಂದು‌ ಭಾರೀ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಬೆನ್ನಲ್ಲೇ ಕೋಸ್ಟ್ ಗಾರ್ಡ್ ಅಧಿಕಾರಿಗಳು ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರ ರನ್ನು ಬಂದರುಗಳಿಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈಗಾಗಲೇ ಸಮುದ್ರಕ್ಕೆ ಇಳಿದಿರುವ ಅಧಿಕಾರಿಗಳು ಮೀನುಗಾರರಿಗೆ ವಾರ್ನಿಂಗ್ ನೀಡುತ್ತಿದ್ದಾರೆ.

https://youtu.be/EpgRJvtk-6s

Comments are closed.