ಸೋಮವಾರ, ಜೂನ್ 16, 2025
HomeBreakingವೆಬ್ ಸೀರಿಸ್ ನಲ್ಲಿ ಡಾ.ಸುಧಾಮೂರ್ತಿ ಅವರಿಗೆ ಅವಹೇಳನ : ನಿರ್ದೇಶನಕ ವಿರುದ್ದ ದೂರು ದಾಖಲು

ವೆಬ್ ಸೀರಿಸ್ ನಲ್ಲಿ ಡಾ.ಸುಧಾಮೂರ್ತಿ ಅವರಿಗೆ ಅವಹೇಳನ : ನಿರ್ದೇಶನಕ ವಿರುದ್ದ ದೂರು ದಾಖಲು

- Advertisement -

ಬೆಂಗಳೂರು : ಕನ್ನಡದ ವೆಬ್ ಸಿರೀಸ್ ವೊಂದರಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವೆಬ್ ಸಿರೀಸ್ ನಿರ್ದೇಶಕನ ವಿರುದ್ದ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಜ್ ನಾಯ್ಡು ಅವರು ಓಲ್ಡ್ ಟೌನ್ ಕ್ರಿಮಿನಲ್ಸ್ ಅನ್ನೋ ವೆಬ್ ಸಿರೀಸ್ ನಿರ್ದೇಶಕನ ವಿರುದ್ದ ದೂರು ನೀಡಿದ್ದಾರೆ. ಓಲ್ಡ್ ಟೌನ್ ಕ್ರಿಮಿನಲ್ಸ್ ಅನ್ನೋ ವೆಬ್ ಸಿರೀಸ್ ನ ಸನ್ನಿವೇಶವೊಂದರಲ್ಲಿ ಡಾ.ಸುಧಾಮೂರ್ತಿ ಅವರ ಹೆಸರನ್ನು ಬದಲಾಯಿಸಿ ಅವಹೇಳನಕಾರಿ ಹೇಳಿಕೆಯನ್ನು ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದ್ದು ಕರ್ನಾಟಕದ ಹೆಮ್ಮೆಯ ಮಗಳು ಸುಧಾಮೂರ್ತಿ ಅವರ ಬಗ್ಗೆ ಅವಹೇಳನ ಮಾಡಲಾಗಿದ್ದು, ಏಕವಚನದಲ್ಲಿ ಪದಪ್ರಯೋಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕರ ಅಮರ್ ಎಂಬವರ ವಿರುದ್ದ ಕ್ರಮಕೈಗೊಳ್ಳುವಂತೆ ದೂರಲಾಗಿದೆ.

ಓಲ್ಡ್ ಟೌನ್ ಕ್ರಿಮಿನಲ್ಸ್ ವೆಬ್ ಸಿರೀಸ್ ನಲ್ಲಿ ಕೇವಲ ಸುಧಾಮೂರ್ತಿ ಅವರಿಗೆ ಮಾತ್ರವಲ್ಲ, ಕನ್ನಡದ ಹೆಸರಾಂತ ನಟಿಯರ ಹೆಸರನ್ನು ಕೂಡ ಬಳಸಿಕೊಳ್ಳಲಾಗಿದೆ. ಕೇವಲ ಪ್ರಚಾರಕ್ಕಾಗಿಯೇ ಈ ರೀತಿ ಮಾಡಲಾಗಿದೆ ಅನ್ನೊ ಆರೋಪ ಕೇಳಿಬಂದಿದೆ. ನಿರ್ದೇಶಕ ಅಮರ್ ಪೋಸ್ಟ್ ಮಾಡಿರುವ ವೆಬ್ ಸಿರೀಸ್ ನೋಡಿದ ಪ್ರೇಕ್ಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

https://youtu.be/e8FxBwt45vo
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular