8 ತಿಂಗಳಲ್ಲಿ ಇಡ್ಲಿ- ವಡೆ ಮಿಸ್ ಮಾಡ್ಕೊಂಡೆ…! ಲಾಕ್ ಡೌನ್ ಪ್ರಾಬ್ಲಂ ಹಂಚಿಕೊಂಡ ಚಾಲೆಂಜಿಂಗ್ ಸ್ಟಾರ್…!!

 ಲಾಕ್ ಡೌನ್ ನಲ್ಲಿ ಯಾರ ಯಾರು ಏನೆಲ್ಲ ಮಿಸ್ ಮಾಡ್ಕೊಂಡ್ರೋ ಗೊತ್ತಿಲ್ಲ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ ಮಾತ್ರ ಇಡ್ಲಿ-ವಡೆ ಮಿಸ್ ಮಾಡ್ಕೊಂಡ್ರಂತೆ. ಈ ವಿಚಾರವನ್ನು  ಸ್ವತಃ ದರ್ಶನ್ ಹೇಳಿಕೊಂಡಿದ್ದು, ಶೂಟಿಂಗ್ ನಿಂತು ಹೋಗಿದ್ದರಿಂದ ಸೆಟ್ ನಲ್ಲಿ ಕೊಡ್ತಿದ್ದ ತಿಂಡಿ ಮಿಸ್ ಮಾಡ್ಕೊತಿದ್ದೆ ಎನ್ನುವ ತಮ್ಮ ಸಿಂಪ್ಲಿಸಿಟಿ ಮೆರೆದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆಪ್ತ ಧ್ರುವನ್ ಸಿನಿಮಾ ಮುಹೂರ್ತದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಎಂಟು ತಿಂಗಳ ಬಳಿಕ ಸಿನಿಮಾ ಕ್ಯಾಮರಾ ಮುಂದೇ ಹಾಜರಾಗಿದ್ದೇನೆ. ನಾನು ಶೂಟಿಂಗ್ ಜೊತೆ ಸೆಟ್ ನಲ್ಲಿ ಕೊಡೋ ಇಡ್ಲಿ-ಸಾಂಬಾರ್ ವಡೆಯನ್ನು ಮಿಸ್ ಮಾಡ್ಕೊಂಡಿದ್ದೇನೆ ಎಂದಿದ್ದಾರೆ.

ಲಾಕ್ ಡೌನ್ ನ ಬಹುತೇಕ ಅವಧಿಯನ್ನು ಮನೆಯಲ್ಲೇ ಕಳೆದಿರೋ ದರ್ಶನ್ ಈ ವೇಳೆ ಮೇಕೆ ಸಾಕೋ ಚಿಂತನೆಯನ್ನು ನಡೆಸಿದ್ದರಂತೆ. ಧ್ರುವನ್ ಅಭಿನಯದ ಚೊಚ್ಚಲ ಚಿತ್ರದ ಮುಹೂರ್ತ ರಾಜರಾಜೇಶ್ವರಿ ನಗರದ ಶೃಂಗಗಿರಿ ಷಣ್ಮುಖ ದೇವಾಲಯದಲ್ಲಿ ನಡೆದಿದ್ದು, ಈ ವೇಳೆ ತಮ್ಮ ಲಾಕ್ ಡೌನ್ ಟೈಂಪಾಸ್ ಸಂಗತಿಗಳ ಬಗ್ಗೆ ಮಾತನಾಡಿದರು.

ತಮ್ಮ ರಾಬರ್ಟ್ ಸಿನಿಮಾದ ಬಗ್ಗೆ ಮಾತನಾಡಿದ ದರ್ಶನ್, ಚಿತ್ರ ಸಿದ್ಧವಿದೆ. ಆದರೆ ಪರಿಸ್ಥಿತಿ ಎಲ್ಲ ರೀತಿಯಲ್ಲೂ ಸರಿ ಹೋದ ಮೇಲೆ ರಿಲೀಸ್ ಆಗುತ್ತೆ.

ಸದ್ಯ 8 ತಿಂಗಳ ಬಳಿಕವಾದ್ರೂ ಸಿನಿಮಾ ಶೂಟಿಂಗ್ ಚಟುವಟಿಕೆಗಳು ಆರಂಭವಾಗಿರೋದು ಖುಷಿ ತಂದಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಎಲ್ಲರೂ ಶೂಟಿಂಗ್,ಸೆಟ್ ಮಿಸ್ ಮಾಡ್ಕೊಂಡ್ರೆ ದರ್ಶನ್ ಮಾತ್ರ ಸೆಟ್ ನ ಇಡ್ಲಿ-ವಡೆ ಮಿಸ್ ಮಾಡ್ಕೊಳ್ಳಿತ್ರದ್ದಂತೆ. ಇದನ್ನು ಮುಕ್ತವಾಗಿ ಹಂಚಿಕೊಂಡು ದರ್ಶನ್,  ಸ್ಟಾರ್ ನಟ ಆದ್ರೂ ತಮಗಿನ್ನು ಸೆಟ್ ನ ಊಟ-ತಿಂಡಿಯೇ ಇಷ್ಟ ಅಂತ  ಹೇಳ್ಕೊಂಡಂತಾಗಿದೆ.  

Comments are closed.